ನಗರದ ಎಪಿಎಂಸಿ ಆವರಣದಲ್ಲಿ ಸಿಬ್ಬಂದಿಗೆ ಲಸಿಕೆಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋದ ಕೂಡಲೇ ನಾಯಕತ್ವ ಬದಲಾದರೆ ದಿನಕ್ಕೊಬ್ಬರು ಸಿಎಂ ಆಗ್ಬೇಕಾಗುತ್ತದೆ. ಬಿಜೆಪಿಯಲ್ಲಿ ಯಾವುದೇ ಗುಂಪುಗಳು ಇಲ್ಲ. ಮೂರು ಗುಂಪುಗಳ ಸರ್ಕಾರ ಇಲ್ಲ. ನಾವು ಒಂದೇ ವೇದಿಕೆಯಲ್ಲಿ ಒಂದೆ ಪಕ್ಷದ ಅಡಿಯಲ್ಲಿದ್ದೇವೆ. ಬಿಜೆಪಿಯಿಂದ ಎಲ್ಲರೂ ಶಾಸಕರು ಮತ್ತು ಮಂತ್ರಿಗಳು ಆಗಿದ್ದೇವೆ. ಮೂರು ಗುಂಪು ಇಲ್ಲ ಮೂವತ್ತಾರು ಗುಂಪು ಇಲ್ಲ. ಬಿಜೆಪಿ ಒಂದೇ ಗುಂಪು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಬಗ್ಗೆ ಸಚಿವ ಶಂಕರ್ ಪ್ರತಿಕ್ರಿಯೆ ನೀಡಿದರು.