‘ಕೇಂದ್ರಾಡಳಿತ ಪ್ರದೇಶವಾದ ದಾಮನ್, ದಿಯು, ದಾದ್ರಾ ಮತ್ತು ನಗರ ಹವೇಲಿಯ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರು ಮೋದಿ ಪ್ರತಿಷ್ಠಾಪಿಸಿರುವ ರಾಜ’ ಎಂದ ರಾಹುಲ್, ‘ಜನರಿಗೆ ತೊಂದರೆ ಕೊಡಲು, ಅವರ ಮನೆ ಧ್ವಂಸ ಮಾಡಲು ಅವರಿಗೆ ಮುಕ್ತ ಅವಕಾಶ ನೀಡಲಾಗಿದೆ. ಅವರು ಇಲ್ಲಿ ಏನು ಮಾಡುತ್ತಿದ್ದಾರೋ, ದೆಹಲಿಯಲ್ಲಿ ಮೋದಿ ಅದನ್ನೇ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.