ಬೆಂಗಳೂರು: ಪದ್ಮನಾಭನಗರದಲ್ಲಿ ಬಿಜೆಪಿಯಿಂದ ಆರ್. ಅಶೋಕ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಬಿ ಫಾರಂ ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ರಘುನಾಥ ನಾಯ್ಡು ಇನ್ನೂ ಕಾದುನೋಡುವ ತಂತ್ರದ ಅನುಸರಿಸಿದ್ದಾರೆ. ಜೆಡಿಎಸ್ ಇನ್ನೂ ಅಭ್ಯರ್ಥಿಯನ್ನೇ ಪ್ರಕಟಿಸಿಲ್ಲ.
‘ಸೋಮವಾರ ನಾಮಪತ್ರ ಸಲ್ಲಿಸಬೇಕಿತ್ತು. ಆದರೆ, ಒಂದೆರಡು ದಿನ ತಡೆಯಿರಿ ಎಂಬ ಸೂಚನೆ ಹಿರಿಯ ನಾಯಕರಿಂದ ಬಂದಿದೆ. ಹೀಗಾಗಿ ಅವರ ಆದೇಶಕ್ಕೆ ಕಾಯುತ್ತಿದ್ದೇನೆ’ ಎಂದು ರಘುನಾಥ ನಾಯ್ಡು ತಿಳಿಸಿದರು.
ಸಂಸದ ಡಿ.ಕೆ. ಸುರೇಶ್ ಅವರನ್ನು ಪದ್ಮನಾಭನಗರದಲ್ಲಿ ಕಣಕ್ಕಿಳಿಸುವ ವಿಚಾರ ಇನ್ನೂ ಚಾಲನೆಯಲ್ಲಿದೆ ಎನ್ನಲಾಗಿದೆ.