‘ನರೇಂದ್ರ ಮೋದಿಯವರಿಗೆ ಮತ ಹಾಕದವರು ತಾಯ್ಗಂಡರು’ ಎಂಬ ಹೇಳಿಕೆ ಕುರಿತು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಸಂಸ್ಕೃತಿಯ ರಕ್ಷಕರು ಎಂದು ಬಿಂಬಿಸಿಕೊಳ್ಳುವ ರವಿಯದ್ದು ಯಾವ ಸಂಸ್ಕೃತಿ? ಅವರು ನಾಲಿಗೆಯನ್ನು ಚಪ್ಪಲಿ ಮಾಡಿಕೊಂಡಿದ್ದಾರೆ’ ಎಂದರು.