<p><strong>ಬೆಂಗಳೂರು</strong>: 2020ನೇ ಕ್ಯಾಲೆಂಡರ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಮಂಗಳವಾರ ಪ್ರಕಟವಾಗಿದ್ದು, ‘ಜಂಟಲ್ಮನ್’ ಚಿತ್ರದಲ್ಲಿನ ನಟನೆಗಾಗಿ ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ) ಹಾಗೂ ‘ಪಿಂಕಿ ಎಲ್ಲಿ’ ಚಿತ್ರದಲ್ಲಿನ ನಟನೆಗಾಗಿ ಅಕ್ಷತಾ ಪಾಂಡವಪುರ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. </p><p>ಪ್ರಶಸ್ತಿಯು ಇಪ್ಪತ್ತು ಸಾವಿರ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕವನ್ನು ಒಳಗೊಂಡಿದೆ. ಕೃಷ್ಣೇಗೌಡ ನಿರ್ಮಾಣದ, ಪೃಥ್ವಿ ಕೊಣನೂರು ನಿರ್ದೇಶನದ ‘ಪಿಂಕಿ ಎಲ್ಲಿ’ ಚಿತ್ರವು ಮೊದಲನೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಪ್ರಶಸ್ತಿಯು ತಲಾ ₹1 ಲಕ್ಷ ನಗದು ಹಾಗೂ 50 ಗ್ರಾಂ ಚಿನ್ನದ ಪದಕ ಒಳಗೊಂಡಿದೆ. ಸಂಗಮೇಶ ಎಸ್.ಸಜ್ಜನರ್ ನಿರ್ದೇಶನದ ‘ಫೋರ್ವಾಲ್ಸ್’ ಸಿನಿಮಾ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಪಡೆದಿದೆ. </p>.<p><strong>ಅತ್ಯುತ್ತಮ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ</strong>: ಗಿಳಿಯು ಪಂಜರದೊಳಿಲ್ಲ ಮತ್ತು ಈ ಮಣ್ಣು</p><p><strong>ಅತ್ಯುತ್ತಮ ಮಕ್ಕಳ ಚಿತ್ರ ‘ಪದಕ’: </strong>ನಿರ್ಮಾಪಕ: ಆದಿತ್ಯ ಆರ್.ಚಿರಂಜೀವಿ, ನಿರ್ದೇಶಕ: ಆದಿತ್ಯ ಆರ್.ಚಿರಂಜೀವಿ</p><p><strong>ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ</strong> <strong>‘ನೀಲಿ ಹಕ್ಕಿ’:</strong> ನಿರ್ಮಾಪಕ: ಯೋಗೇಶ್ ಕೆ.ಎಸ್, ನಿರ್ದೇಶಕ: ಗಣೇಶ್ ಹೆಗ್ಡೆ</p><p><strong>ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ‘ಜೀಟಿಗೆ’ (ತುಳು)</strong> : ನಿರ್ಮಾಪಕ: ಅರುಣ್ ರೈ ಬಾಲಕೃಷ್ಣ, ನಿರ್ದೇಶಕ: ಸಂತೋಷ ಮಾಡ </p><p><strong>ಅತ್ಯುತ್ತಮ ಕತೆ</strong>: ಶಶಿಕಾಂತ್ ಗಟ್ಟಿ (ಚಿತ್ರ: ರಾಂಚಿ)</p><p><strong>ಅತ್ಯುತ್ತಮ ಚಿತ್ರಕತೆ:</strong> ರಾಘವೇಂದ್ರ ಕುಮಾರ್(ಚಿತ್ರ: ಚಾಂದಿನಿ ಬಾರ್)</p><p><strong>ಅತ್ಯುತ್ತಮ ಸಂಭಾಷಣೆ:</strong> ವೀರಪ್ಪ ಮರಳವಾಡಿ (ಚಿತ್ರ: ಹೂವಿನ ಹಾರ)</p><p><strong>ಅತ್ಯುತ್ತಮ ಛಾಯಗ್ರಹಣ:</strong> ಅಶೋಕ್ ಕಶ್ಯಪ್ (ಚಿತ್ರ: ತಲೆದಂಡ)</p><p><strong>ಅತ್ಯುತ್ತಮ ಸಂಗೀತ ನಿರ್ದೇಶನ</strong>: ಗಗನ ಬಡೇರಿಯಾ (ಚಿತ್ರ: ಮಾಲ್ಗಡಿ ಡೇಸ್)</p><p><strong>ಅತ್ಯುತ್ತಮ ಸಂಕಲನ:</strong> ನಾಗೇಂದ್ರ ಕೆ.ಉಜ್ಜನಿ (ಚಿತ್ರ: ಆ್ಯಕ್ಟ್ 1978)</p><p><strong>ಅತ್ಯುತ್ತಮ ಬಾಲ ನಟ:</strong> ಮಾಸ್ಟರ್ ಅಹಿಲ್ ಅನ್ಯಾರಿ (ಚಿತ್ರ: ದಂತ ಪುರಾಣ)</p><p><strong>ಅತ್ಯುತ್ತಮ ಬಾಲ ನಟಿ:</strong> ಬೇಬಿ ಹಿತೈಷಿ ಪೂಜಾರ್ (ಚಿತ್ರ: ಪಾರು)</p><p><strong>ಅತ್ಯುತ್ತಮ ಕಲಾ ನಿರ್ದೇಶನ:</strong> ಗುಣಶೇಖರ್ (ಚಿತ್ರ: ಬಿಚ್ಚುಗತ್ತಿ)</p><p><strong>ಅತ್ಯುತ್ತಮ ಗೀತ ರಚನೆ:</strong> ಗಾರ್ಗಿ ಕಾರೆಹಕ್ಲು (ಹಾಡು: ಮೌನವು ಮಾತಾಗಿದೆ, ಚಿತ್ರ: ಪರ್ಜನ್ಯ), ಸಚಿನ್ ಶೆಟ್ಟಿ ಕುಂಬ್ಳೆ (ಹಾಡು:ದಾರಿಯೊಂದು ಹುಡುಕುತ್ತಿದೆ, ಚಿತ್ರ: ಈ ಮಣ್ಣು)</p><p><strong>ಅತ್ಯುತ್ತಮ ಹಿನ್ನೆಲೆ ಗಾಯಕ:</strong> ಅನಿರುದ್ಧ ಶಾಸ್ತ್ರಿ (ಚಿತ್ರ: ಆಚಾರ್ಯ ಶ್ರೀ ಶಂಕರ)</p><p><strong>ಅತ್ಯುತ್ತಮ ಹಿನ್ನೆಲೆ ಗಾಯಕಿ:</strong> ಅರುಂಧತಿ ವಶಿಷ್ಠ (ಚಿತ್ರ: ದಂತ ಪುರಾಣ)</p>.<p><strong>ತೀರ್ಪುಗಾರರ ವಿಶೇಷ ಪ್ರಶಸ್ತಿ: </strong></p><ul><li><p><strong>ನಟನೆಗಾಗಿ (ಮರಣೋತ್ತರವಾಗಿ):</strong> ಬಿ.ವಿಜಯ್ ಕುಮಾರ್(ಸಂಚಾರಿ ವಿಜಯ್)</p></li><li><p><strong>ವಸ್ತ್ರ ವಿನ್ಯಾಸ:</strong> ವಲ್ಲಿ (ಚಿತ್ರ: ಸಾರವಜ್ರ)</p></li><li><p><strong>ಪ್ರಸಾದನ:</strong> ರಮೇಶ್ ಬಾಬು (ತಲೆದಂಡ)</p></li><li><p><strong>ಶಬ್ದ ಗ್ರಹಣ:</strong> ವಿ.ಜಿ.ರಾಜನ್(ಅಮೃತ ಅಪಾರ್ಟ್ಮೆಂಟ್ಸ್)</p></li></ul>.<p><strong>ವಿಶೇಷ ಪ್ರಶಸ್ತಿ(ಪ್ರಮಾಣ ಪತ್ರ)</strong></p><p><strong>ವಿಶೇಷಚೇತನ ನಟ</strong>: ವಿಶ್ವಾಸ್ ಕೆ.ಎಸ್.(ಚಿತ್ರ: ಅರಬ್ಬೀ)</p><p><strong>ಅತ್ಯುತ್ತಮ ನಿರ್ಮಾಣ ನಿರ್ವಾಹಕ:</strong> ಚಂಪಕದಾಮ ಬಾಬು (ಚಿತ್ರ: ಕನ್ನಡಿಗ)</p>.<p><strong>ಪ್ರಶಸ್ತಿ ಮೊತ್ತ</strong></p><ul><li><p>ಮೊದಲನೇ ಅತ್ಯುತ್ತಮ ಚಿತ್ರ: ₹1 ಲಕ್ಷ ನಗದುಹಾಗೂ 50 ಗ್ರಾಂ ಚಿನ್ನದ ಪದಕ</p></li><li><p>ಎರಡನೇ ಅತ್ಯುತ್ತಮ ಚಿತ್ರ: ₹75 ಸಾವಿರ ನಗದುಹಾಗೂ 100 ಗ್ರಾಂ ಬೆಳ್ಳಿ ಪದಕ</p></li><li><p>ಮೂರನೇ ಅತ್ಯುತ್ತಮ ಚಿತ್ರ: ₹50 ಸಾವಿರ ನಗದುಹಾಗೂ 100 ಗ್ರಾಂ ಬೆಳ್ಳಿ ಪದಕ</p></li><li><p>ವಿಶೇಷ ಸಾಮಾಜಿಕ ಕಾಳಜಿಯ ಪ್ರಶಸ್ತಿ: ₹75 ಸಾವಿರ ನಗದುಹಾಗೂ 100 ಗ್ರಾಂ ಬೆಳ್ಳಿ ಪದಕ</p></li><li><p>ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಟಿ: ₹20 ಸಾವಿರ ನಗದುಹಾಗೂ 100 ಗ್ರಾಂ ಬೆಳ್ಳಿ ಪದಕ</p></li></ul> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: 2020ನೇ ಕ್ಯಾಲೆಂಡರ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಮಂಗಳವಾರ ಪ್ರಕಟವಾಗಿದ್ದು, ‘ಜಂಟಲ್ಮನ್’ ಚಿತ್ರದಲ್ಲಿನ ನಟನೆಗಾಗಿ ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ) ಹಾಗೂ ‘ಪಿಂಕಿ ಎಲ್ಲಿ’ ಚಿತ್ರದಲ್ಲಿನ ನಟನೆಗಾಗಿ ಅಕ್ಷತಾ ಪಾಂಡವಪುರ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. </p><p>ಪ್ರಶಸ್ತಿಯು ಇಪ್ಪತ್ತು ಸಾವಿರ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕವನ್ನು ಒಳಗೊಂಡಿದೆ. ಕೃಷ್ಣೇಗೌಡ ನಿರ್ಮಾಣದ, ಪೃಥ್ವಿ ಕೊಣನೂರು ನಿರ್ದೇಶನದ ‘ಪಿಂಕಿ ಎಲ್ಲಿ’ ಚಿತ್ರವು ಮೊದಲನೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಪ್ರಶಸ್ತಿಯು ತಲಾ ₹1 ಲಕ್ಷ ನಗದು ಹಾಗೂ 50 ಗ್ರಾಂ ಚಿನ್ನದ ಪದಕ ಒಳಗೊಂಡಿದೆ. ಸಂಗಮೇಶ ಎಸ್.ಸಜ್ಜನರ್ ನಿರ್ದೇಶನದ ‘ಫೋರ್ವಾಲ್ಸ್’ ಸಿನಿಮಾ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಪಡೆದಿದೆ. </p>.<p><strong>ಅತ್ಯುತ್ತಮ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ</strong>: ಗಿಳಿಯು ಪಂಜರದೊಳಿಲ್ಲ ಮತ್ತು ಈ ಮಣ್ಣು</p><p><strong>ಅತ್ಯುತ್ತಮ ಮಕ್ಕಳ ಚಿತ್ರ ‘ಪದಕ’: </strong>ನಿರ್ಮಾಪಕ: ಆದಿತ್ಯ ಆರ್.ಚಿರಂಜೀವಿ, ನಿರ್ದೇಶಕ: ಆದಿತ್ಯ ಆರ್.ಚಿರಂಜೀವಿ</p><p><strong>ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ</strong> <strong>‘ನೀಲಿ ಹಕ್ಕಿ’:</strong> ನಿರ್ಮಾಪಕ: ಯೋಗೇಶ್ ಕೆ.ಎಸ್, ನಿರ್ದೇಶಕ: ಗಣೇಶ್ ಹೆಗ್ಡೆ</p><p><strong>ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ‘ಜೀಟಿಗೆ’ (ತುಳು)</strong> : ನಿರ್ಮಾಪಕ: ಅರುಣ್ ರೈ ಬಾಲಕೃಷ್ಣ, ನಿರ್ದೇಶಕ: ಸಂತೋಷ ಮಾಡ </p><p><strong>ಅತ್ಯುತ್ತಮ ಕತೆ</strong>: ಶಶಿಕಾಂತ್ ಗಟ್ಟಿ (ಚಿತ್ರ: ರಾಂಚಿ)</p><p><strong>ಅತ್ಯುತ್ತಮ ಚಿತ್ರಕತೆ:</strong> ರಾಘವೇಂದ್ರ ಕುಮಾರ್(ಚಿತ್ರ: ಚಾಂದಿನಿ ಬಾರ್)</p><p><strong>ಅತ್ಯುತ್ತಮ ಸಂಭಾಷಣೆ:</strong> ವೀರಪ್ಪ ಮರಳವಾಡಿ (ಚಿತ್ರ: ಹೂವಿನ ಹಾರ)</p><p><strong>ಅತ್ಯುತ್ತಮ ಛಾಯಗ್ರಹಣ:</strong> ಅಶೋಕ್ ಕಶ್ಯಪ್ (ಚಿತ್ರ: ತಲೆದಂಡ)</p><p><strong>ಅತ್ಯುತ್ತಮ ಸಂಗೀತ ನಿರ್ದೇಶನ</strong>: ಗಗನ ಬಡೇರಿಯಾ (ಚಿತ್ರ: ಮಾಲ್ಗಡಿ ಡೇಸ್)</p><p><strong>ಅತ್ಯುತ್ತಮ ಸಂಕಲನ:</strong> ನಾಗೇಂದ್ರ ಕೆ.ಉಜ್ಜನಿ (ಚಿತ್ರ: ಆ್ಯಕ್ಟ್ 1978)</p><p><strong>ಅತ್ಯುತ್ತಮ ಬಾಲ ನಟ:</strong> ಮಾಸ್ಟರ್ ಅಹಿಲ್ ಅನ್ಯಾರಿ (ಚಿತ್ರ: ದಂತ ಪುರಾಣ)</p><p><strong>ಅತ್ಯುತ್ತಮ ಬಾಲ ನಟಿ:</strong> ಬೇಬಿ ಹಿತೈಷಿ ಪೂಜಾರ್ (ಚಿತ್ರ: ಪಾರು)</p><p><strong>ಅತ್ಯುತ್ತಮ ಕಲಾ ನಿರ್ದೇಶನ:</strong> ಗುಣಶೇಖರ್ (ಚಿತ್ರ: ಬಿಚ್ಚುಗತ್ತಿ)</p><p><strong>ಅತ್ಯುತ್ತಮ ಗೀತ ರಚನೆ:</strong> ಗಾರ್ಗಿ ಕಾರೆಹಕ್ಲು (ಹಾಡು: ಮೌನವು ಮಾತಾಗಿದೆ, ಚಿತ್ರ: ಪರ್ಜನ್ಯ), ಸಚಿನ್ ಶೆಟ್ಟಿ ಕುಂಬ್ಳೆ (ಹಾಡು:ದಾರಿಯೊಂದು ಹುಡುಕುತ್ತಿದೆ, ಚಿತ್ರ: ಈ ಮಣ್ಣು)</p><p><strong>ಅತ್ಯುತ್ತಮ ಹಿನ್ನೆಲೆ ಗಾಯಕ:</strong> ಅನಿರುದ್ಧ ಶಾಸ್ತ್ರಿ (ಚಿತ್ರ: ಆಚಾರ್ಯ ಶ್ರೀ ಶಂಕರ)</p><p><strong>ಅತ್ಯುತ್ತಮ ಹಿನ್ನೆಲೆ ಗಾಯಕಿ:</strong> ಅರುಂಧತಿ ವಶಿಷ್ಠ (ಚಿತ್ರ: ದಂತ ಪುರಾಣ)</p>.<p><strong>ತೀರ್ಪುಗಾರರ ವಿಶೇಷ ಪ್ರಶಸ್ತಿ: </strong></p><ul><li><p><strong>ನಟನೆಗಾಗಿ (ಮರಣೋತ್ತರವಾಗಿ):</strong> ಬಿ.ವಿಜಯ್ ಕುಮಾರ್(ಸಂಚಾರಿ ವಿಜಯ್)</p></li><li><p><strong>ವಸ್ತ್ರ ವಿನ್ಯಾಸ:</strong> ವಲ್ಲಿ (ಚಿತ್ರ: ಸಾರವಜ್ರ)</p></li><li><p><strong>ಪ್ರಸಾದನ:</strong> ರಮೇಶ್ ಬಾಬು (ತಲೆದಂಡ)</p></li><li><p><strong>ಶಬ್ದ ಗ್ರಹಣ:</strong> ವಿ.ಜಿ.ರಾಜನ್(ಅಮೃತ ಅಪಾರ್ಟ್ಮೆಂಟ್ಸ್)</p></li></ul>.<p><strong>ವಿಶೇಷ ಪ್ರಶಸ್ತಿ(ಪ್ರಮಾಣ ಪತ್ರ)</strong></p><p><strong>ವಿಶೇಷಚೇತನ ನಟ</strong>: ವಿಶ್ವಾಸ್ ಕೆ.ಎಸ್.(ಚಿತ್ರ: ಅರಬ್ಬೀ)</p><p><strong>ಅತ್ಯುತ್ತಮ ನಿರ್ಮಾಣ ನಿರ್ವಾಹಕ:</strong> ಚಂಪಕದಾಮ ಬಾಬು (ಚಿತ್ರ: ಕನ್ನಡಿಗ)</p>.<p><strong>ಪ್ರಶಸ್ತಿ ಮೊತ್ತ</strong></p><ul><li><p>ಮೊದಲನೇ ಅತ್ಯುತ್ತಮ ಚಿತ್ರ: ₹1 ಲಕ್ಷ ನಗದುಹಾಗೂ 50 ಗ್ರಾಂ ಚಿನ್ನದ ಪದಕ</p></li><li><p>ಎರಡನೇ ಅತ್ಯುತ್ತಮ ಚಿತ್ರ: ₹75 ಸಾವಿರ ನಗದುಹಾಗೂ 100 ಗ್ರಾಂ ಬೆಳ್ಳಿ ಪದಕ</p></li><li><p>ಮೂರನೇ ಅತ್ಯುತ್ತಮ ಚಿತ್ರ: ₹50 ಸಾವಿರ ನಗದುಹಾಗೂ 100 ಗ್ರಾಂ ಬೆಳ್ಳಿ ಪದಕ</p></li><li><p>ವಿಶೇಷ ಸಾಮಾಜಿಕ ಕಾಳಜಿಯ ಪ್ರಶಸ್ತಿ: ₹75 ಸಾವಿರ ನಗದುಹಾಗೂ 100 ಗ್ರಾಂ ಬೆಳ್ಳಿ ಪದಕ</p></li><li><p>ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಟಿ: ₹20 ಸಾವಿರ ನಗದುಹಾಗೂ 100 ಗ್ರಾಂ ಬೆಳ್ಳಿ ಪದಕ</p></li></ul> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>