ರಾತ್ರಿ ಅಪರಾತ್ರಿಗಳಲ್ಲಿ ಆ ಬಂಗಲೆಯ ಕತ್ತಲೆ ಕೋಣೆಯೊಳಗೆ ಪ್ರತಿ ಮೂಲೆಯಲ್ಲಿಯೂ ಹೋಗಿ ಕಾದಿದ್ದೇನೆ. ಯಾವತ್ತಾದರೂ ಮಧುಬಾಲಾಳ ಆತ್ಮ ಬಂದೀತೆ ಎಂಬ ನಿರೀಕ್ಷೆಯಲ್ಲಿ ಅಮಾವಾಸ್ಯೆಯ ಕತ್ತಲೆಯಲ್ಲಿಯೂ ಹೋಗಿ ಕಾದಿರುವೆ. ಹೀಗೆಂದು ಬಾಲಿವುಡ್ ಸಿನಿಮಾ ನಿರ್ದೇಶಕ ಇಮ್ತಿಯಾಝ್ ಅಲಿ ಹೇಳಿದ್ದಾರೆ.
ಡಿಜಿಟಲ್ ವೇದಿಕೆಯಲ್ಲಿ ಮಾತನಾಡುತ್ತ, ಒಂದು ಹಾರರ್ ಮೂವಿ ಮಾಡುವ ತಮ್ಮ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ಮಧುಮತಿ ತಮ್ಮಿಷ್ಟದ ಹಾರರ್ ಮೂವಿ ಎಂದಿರುವ ಅವರು, ಈ ಕಾರಣಕ್ಕಾಗಿಯೇ ಮಧುಬಾಲಾಳ ಬಂಗಲೆಯಲ್ಲಿ ಈ ಹಿಂದೆ ಹಲವು ರಾತ್ರಿಗಳನ್ನು ಕಳೆದಿದ್ದೆ ಎಂದೂ ತಿಳಿಸಿದ್ದಾರೆ.