ತಮ್ಮ ಮುಂದಿನ ಚಿತ್ರದ ಕುರಿತು ಮಾತನಾಡಿರುವ ಚಂದ್ರಮೋಹನ್ ‘ಈ ಚಿತ್ರದ ಕತೆಯನ್ನು ಚಿಕ್ಕಣ್ಣ ಅವರ ಹಾಸ್ಯ ಪರಾಕ್ರಮವನ್ನು ತಲೆಯಲ್ಲಿ ಇರಿಸಿಕೊಂಡೇ ಬರೆಯಲಾಗಿದೆ. ಹಾಸ್ಯವಿಲ್ಲದ ಚಿತ್ರದಲ್ಲಿ ಚಿಕ್ಕಣ್ಣ ಅವರನ್ನು ಯೋಚಿಸಲೂ ಸಾಧ್ಯವಿಲ್ಲ. ಆ ಕಾರಣಕ್ಕೆ ಕೌಟುಂಬಿಕ ಮೌಲ್ಯ ಹೊಂದಿರುವ ಹಾಸ್ಯ ಪ್ರಧಾನ ಚಿತ್ರವನ್ನು ಮಾಡುತ್ತಿದ್ದೇವೆ. ಇದರಲ್ಲಿ ಚಿಕ್ಕಣ್ಣ ನಾರಾಯಣ ಎಂಬ ಹಳ್ಳಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕತೆಯು ಮಂಡ್ಯದ ಸಣ್ಣ ಹಳ್ಳಿಯಿಂದ ಆರಂಭವಾಗಿ ಡಾರ್ಜಿಲಿಂಗ್ ಹಾಗೂ ಮುನ್ನಾರ್ವರೆಗೆ ಮುಂದುವರಿಯುತ್ತದೆ. ನವೆಂಬರ್ನಿಂದ ಶೂಟಿಂಗ್ ಆರಂಭಿಸುವ ಯೋಚನೆಯಲ್ಲಿದ್ದೇವೆ. ಡಾರ್ಜಿಲಿಂಗ್ನಲ್ಲಿ ಮೊದಲ ಹಂತದ ಶೂಟಿಂಗ್ ಮಾಡುವ ಯೋಚನೆ ಇದೆ. ನಾಯಕಿ ಪಾತ್ರಕ್ಕೆ ಹೊಸ ಮುಖವನ್ನು ಹುಡುಕುತ್ತಿದ್ದೇವೆ. ಚಿತ್ರದಲ್ಲಿ ಪಿ. ರವಿಶಂಕರ್, ರಾಕ್ಲೈನ್ ಸುಧಾಕರ್ ಹಾಗೂ ಸಾಧು ಕೋಕಿಲಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ’ ಎಂದಿದ್ದಾರೆ.