<p>ಮಹಾತ್ಮ ಗಾಂಧೀಜಿ ಅವರ ಕೃಷಿ ಆಧಾರಿತ ಗ್ರಾಮೀಣ ಭಾರತದ ಆಶಯವನ್ನು ಪ್ರತಿಪಾದಿಸುವ ಕತೆ ಹೊಂದಿದ್ದ ಕನ್ನಡದ ಕಪ್ಪುಬಿಳುಪು ಚಿತ್ರ‘ಚಂದವಳ್ಳಿಯ ತೋಟ’ಕ್ಕೆ ಈಗ 56ರ ಸಂಭ್ರಮ.</p>.<p>1964ರ ಜೂನ್ 24ರಂದು ಬಿಡುಗಡೆಯಾಗಿದ್ದಚಿತ್ರ ಶತದಿನೋತ್ಸವ ಕಂಡಿತ್ತು.ಸಾಹಿತಿ ತ.ರಾ.ಸುಬ್ಬರಾವ್ (ತರಾಸು) ಕಾದಂಬರಿ ಆಧರಿಸಿ ತೆಗೆದ ಚಿತ್ರವಿದು. ಕಾದಂಬರಿಯ ಹೆಸರನ್ನೇ ಚಿತ್ರಕ್ಕೂ ಇಡಲಾಗಿತ್ತು.</p>.<p>ಚಂದವಳ್ಳಿ ಎಂಬ ಊರು. ಅಲ್ಲೊಂದು ಅವಿಭಕ್ತ ಕುಟುಂಬವಿರುತ್ತದೆ. ಆ ಊರಿನ ಆಸೆಬುರುಕನೊಬ್ಬನ ಕಾರಣದಿಂದಾಗಿ ಇಡೀ ಕುಟುಂಬ ಅವನತಿ ಹೊಂದುತ್ತದೆ. ಇದು ಸಿನಿಮಾದ ಕತೆ. ಗಾಂಧಿತತ್ವ, ಹಳ್ಳಿಗಳ ಬಡತನ, ಹಗೆತನ ಹೀಗೆ ಎಲ್ಲವನ್ನೂ ಪರಿಣಾಮಕಾರಿ ಕಟ್ಟಿಕೊಟ್ಟ‘ಚಂದವಳ್ಳಿಯ ತೋಟ’ ಸಹಜವಾಗಿ ಎಲ್ಲರ ಮನಗೆದ್ದಿತ್ತು.</p>.<p>ರಾಜ್ಕುಮಾರ್, ಉದಯಕುಮಾರ್, ಜಯಂತಿ,ಬಾಲಕೃಷ್ಣ, ಆದವಾನಿ ಲಕ್ಷ್ಮಿದೇವಿ, ಜಯಶ್ರೀ ಹೀಗೆ ಬಹುತಾರಾಗಣದಿಂದ ಚಿತ್ರ ಗಮನ ಸೆಳೆದಿತ್ತು. ವರನಟ ರಾಜ್ಕುಮಾರ್ ಅವರ 50ನೇ ಚಿತ್ರ ಎಂಬುವುದು ಇದರ ಮತ್ತೊಂದು ಹೆಗ್ಗಳಿಕೆ. ಮೊದಲ ಬಾರಿಗೆ ರಾಜ್ ಮತ್ತು ಜಯಂತಿ ಒಟ್ಟಿಗೆ ನಟಿಸಿದ ಚಿತ್ರವೂ ಹೌದು.</p>.<p>ಬಿಡುಗಡೆಯಾದ ಮರು ವರ್ಷವೇ (1965) ‘ಅತ್ಯುತ್ತಮ ಕನ್ನಡ ಚಿತ್ರ’ ರಾಷ್ಟ್ರಪ್ರಶಸ್ತಿ ಪುರಸ್ಕಾರಕ್ಕೂ ಪಾತ್ರವಾಯಿತು. 1992ರಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) ಕನ್ನಡ ಚಿತ್ರಂಗದ ಸಿಂಹಾವಲೋಕನ ಪರಿಚಯಿಸುವ ಚಿತ್ರವಾಗಿ ‘ಚಂದವಳ್ಳಿಯ ತೋಟ’ವನ್ನು ಪ್ರದರ್ಶಿಸಲಾಯಿತು. ಇದು ಈ ಚಿತ್ರದ ಮತ್ತೊಂದು ಹೆಗ್ಗಳಿಕೆ.</p>.<p>‘ಓ ನನ್ನ ಬಾಂಧವರೇ’ ಮತ್ತು ‘ನನ್ನ ಮನೆಯೇ ನಂದನ’ ಎರಡು ಗೀತೆಗಳಿಗೆ ತರಾಸು ಅವರೇ ಸಾಹಿತ್ಯ ರಚಿಸಿದ್ದರು. ಟಿ.ಜಿ. ಲಿಂಗಪ್ಪ ಸಂಗೀತ ಮತ್ತು ಆರ್.ಎನ್. ಜಯಗೋಪಾಲ ಸಾಹಿತ್ಯದ ಹಾಡು ಆ ಕಾಲಕ್ಕೆ ಜನಪ್ರಿಯವಾಗಿದ್ದವು. ಪಿ.ಬಿ.ಶ್ರೀನಿವಾಸ್, ಎಲ್.ಆರ್. ಈಶ್ವರಿ, ಪೀಠಾಪುರಂ ನಾಗೇಶ್ವರರಾವ್ ಮತ್ತು ಎಸ್. ಜಾನಕಿ ಹಾಡಿಗೆ ಧ್ವನಿಯಾಗಿದ್ದರು.ಬಿ.ದೊರೈರಾಜು ಕ್ಯಾಮೆರಾದಲ್ಲಿ ಹಳ್ಳಿಯ ಸೊಗಡನ್ನು ಸುಂದರವಾಗಿ ಸೆರೆ ಹಿಡಿದಿದ್ದರು. ಈ ಕಾರಣದಿಂದ ಚಿತ್ರ ವಿಮರ್ಶಕರಿಂದಲೂ ಉತ್ತಮ ಪ್ರಶಂಸೆ ಗಳಿಸಿತ್ತು.</p>.<p class="Subhead">ಕೈಗೂಡದ ಗುಬ್ಬಿ ವೀರಣ್ಣನವರ ಆಸೆ!</p>.<p>‘ಚಂದವಳ್ಳಿಯ ತೋಟ’ ಕಾದಂಬರಿಯಿಂದ ಪ್ರಭಾವಿತರಾಗಿದ್ದ ಗುಬ್ಬಿ ವೀರಣ್ಣನವರು ಇದನ್ನು ಸಿನಿಮಾ ಮಾಡುವುದಕ್ಕಾಗಿ ರೈಟ್ಸ್ ಪಡೆಯಲು ಸಿದ್ಧತೆ ನಡೆಸಿದ್ದರು. ಚಂದವಳ್ಳಿಯ ಬಂಜರುಭೂಮಿಯಲ್ಲಿ ಹಸಿರು ಬಿತ್ತುವ ಶಿವನಂಜು ಎಂಬ ರೈತನ ಪಾತ್ರವನ್ನು ತಾವೇ ನಿರ್ವಹಿಸಲು ಸಜ್ಜಾಗಿದ್ದರು.</p>.<p>ಆದರೆ, ಸಿನಿಮಾ ಮಾಡುವ ಹಕ್ಕು ಪಾಲ್ ಅಂಡ್ ಕಂಪನಿ ಪಾಲಾಯಿತು.ನಿರ್ದೇಶನದ ಹೊಣೆ ಟಿ.ವಿ. ಸಿಂಗ್ ಠಾಕೂರ್ ಅವರ ಹೆಗಲೇರಿತು. ‘ಸಹೋದರಿ’ ಎಂಬ ಯಶಸ್ವಿ ಚಿತ್ರದ ಮೂಲಕ ಆಗಲೇ ಸಿಂಗ್ ಹೆಸರು ಮಾಡಿದ್ದರು.</p>.<p>‘ಪಾಲ್ ಅಂಡ್ ಕಂಪನಿ ಸಿನಿಮಾ ಮಾಡಲು ಮುಂದಾದಾಗ ಶಿವನಂಜು ಪಾತ್ರಕ್ಕೆ ತಮ್ಮನ್ನೇ ಕರೆಯಬಹುದು ಎಂದು ವೀರಣ್ಣನವರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅವರು ಮಾಡಬೇಕು ಎಂದುಕೊಂಡಿದ್ದ ಶಿವನಂಜು ಪಾತ್ರ ಉದಯ್ ಕುಮಾರ್ ಪಾಲಾಯಿತು. ಆ ನೋವು ಬಹಳ ದಿನ ವೀರಣ್ಣನವರನ್ನು ಕಾಡುತ್ತಿತ್ತು’ ಎಂದು ಹಿರಿಯ ಛಾಯಾಗ್ರಾಹಕ ಬಿ.ಎಸ್. ಬಸವರಾಜು ನೆನಪಿಸಿಕೊಳ್ಳುತ್ತಾರೆ.</p>.<p>ಬೆಂಗಳೂರಿನ ಪ್ರಭಾತ್ ಚಿತ್ರಮಂದಿರಲ್ಲಿ ಚಿತ್ರ ನೂರು ದಿನ ಓಡಿತ್ತು. ಶತದಿನೋತ್ಸವ ಸಮಾರಂಭಕ್ಕೆ ಸಾಹಿತಿ ವಿ.ಸೀತಾರಾಮಯ್ಯ ಮುಖ್ಯ ಅತಿಥಿಯಾಗಿದ್ದರು. 1965ರಲ್ಲಿ ಈ ಚಿತ್ರ ಕೆಂಪೇಗೌಡ ಚಿತ್ರಮಂದಿರದಲ್ಲಿ ಎರಡನೇ ಬಾರಿ ಬಿಡುಗಡೆಯಾದಾಗಲೂ ಶತದಿನೋತ್ಸವ ಕಂಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಹಾತ್ಮ ಗಾಂಧೀಜಿ ಅವರ ಕೃಷಿ ಆಧಾರಿತ ಗ್ರಾಮೀಣ ಭಾರತದ ಆಶಯವನ್ನು ಪ್ರತಿಪಾದಿಸುವ ಕತೆ ಹೊಂದಿದ್ದ ಕನ್ನಡದ ಕಪ್ಪುಬಿಳುಪು ಚಿತ್ರ‘ಚಂದವಳ್ಳಿಯ ತೋಟ’ಕ್ಕೆ ಈಗ 56ರ ಸಂಭ್ರಮ.</p>.<p>1964ರ ಜೂನ್ 24ರಂದು ಬಿಡುಗಡೆಯಾಗಿದ್ದಚಿತ್ರ ಶತದಿನೋತ್ಸವ ಕಂಡಿತ್ತು.ಸಾಹಿತಿ ತ.ರಾ.ಸುಬ್ಬರಾವ್ (ತರಾಸು) ಕಾದಂಬರಿ ಆಧರಿಸಿ ತೆಗೆದ ಚಿತ್ರವಿದು. ಕಾದಂಬರಿಯ ಹೆಸರನ್ನೇ ಚಿತ್ರಕ್ಕೂ ಇಡಲಾಗಿತ್ತು.</p>.<p>ಚಂದವಳ್ಳಿ ಎಂಬ ಊರು. ಅಲ್ಲೊಂದು ಅವಿಭಕ್ತ ಕುಟುಂಬವಿರುತ್ತದೆ. ಆ ಊರಿನ ಆಸೆಬುರುಕನೊಬ್ಬನ ಕಾರಣದಿಂದಾಗಿ ಇಡೀ ಕುಟುಂಬ ಅವನತಿ ಹೊಂದುತ್ತದೆ. ಇದು ಸಿನಿಮಾದ ಕತೆ. ಗಾಂಧಿತತ್ವ, ಹಳ್ಳಿಗಳ ಬಡತನ, ಹಗೆತನ ಹೀಗೆ ಎಲ್ಲವನ್ನೂ ಪರಿಣಾಮಕಾರಿ ಕಟ್ಟಿಕೊಟ್ಟ‘ಚಂದವಳ್ಳಿಯ ತೋಟ’ ಸಹಜವಾಗಿ ಎಲ್ಲರ ಮನಗೆದ್ದಿತ್ತು.</p>.<p>ರಾಜ್ಕುಮಾರ್, ಉದಯಕುಮಾರ್, ಜಯಂತಿ,ಬಾಲಕೃಷ್ಣ, ಆದವಾನಿ ಲಕ್ಷ್ಮಿದೇವಿ, ಜಯಶ್ರೀ ಹೀಗೆ ಬಹುತಾರಾಗಣದಿಂದ ಚಿತ್ರ ಗಮನ ಸೆಳೆದಿತ್ತು. ವರನಟ ರಾಜ್ಕುಮಾರ್ ಅವರ 50ನೇ ಚಿತ್ರ ಎಂಬುವುದು ಇದರ ಮತ್ತೊಂದು ಹೆಗ್ಗಳಿಕೆ. ಮೊದಲ ಬಾರಿಗೆ ರಾಜ್ ಮತ್ತು ಜಯಂತಿ ಒಟ್ಟಿಗೆ ನಟಿಸಿದ ಚಿತ್ರವೂ ಹೌದು.</p>.<p>ಬಿಡುಗಡೆಯಾದ ಮರು ವರ್ಷವೇ (1965) ‘ಅತ್ಯುತ್ತಮ ಕನ್ನಡ ಚಿತ್ರ’ ರಾಷ್ಟ್ರಪ್ರಶಸ್ತಿ ಪುರಸ್ಕಾರಕ್ಕೂ ಪಾತ್ರವಾಯಿತು. 1992ರಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) ಕನ್ನಡ ಚಿತ್ರಂಗದ ಸಿಂಹಾವಲೋಕನ ಪರಿಚಯಿಸುವ ಚಿತ್ರವಾಗಿ ‘ಚಂದವಳ್ಳಿಯ ತೋಟ’ವನ್ನು ಪ್ರದರ್ಶಿಸಲಾಯಿತು. ಇದು ಈ ಚಿತ್ರದ ಮತ್ತೊಂದು ಹೆಗ್ಗಳಿಕೆ.</p>.<p>‘ಓ ನನ್ನ ಬಾಂಧವರೇ’ ಮತ್ತು ‘ನನ್ನ ಮನೆಯೇ ನಂದನ’ ಎರಡು ಗೀತೆಗಳಿಗೆ ತರಾಸು ಅವರೇ ಸಾಹಿತ್ಯ ರಚಿಸಿದ್ದರು. ಟಿ.ಜಿ. ಲಿಂಗಪ್ಪ ಸಂಗೀತ ಮತ್ತು ಆರ್.ಎನ್. ಜಯಗೋಪಾಲ ಸಾಹಿತ್ಯದ ಹಾಡು ಆ ಕಾಲಕ್ಕೆ ಜನಪ್ರಿಯವಾಗಿದ್ದವು. ಪಿ.ಬಿ.ಶ್ರೀನಿವಾಸ್, ಎಲ್.ಆರ್. ಈಶ್ವರಿ, ಪೀಠಾಪುರಂ ನಾಗೇಶ್ವರರಾವ್ ಮತ್ತು ಎಸ್. ಜಾನಕಿ ಹಾಡಿಗೆ ಧ್ವನಿಯಾಗಿದ್ದರು.ಬಿ.ದೊರೈರಾಜು ಕ್ಯಾಮೆರಾದಲ್ಲಿ ಹಳ್ಳಿಯ ಸೊಗಡನ್ನು ಸುಂದರವಾಗಿ ಸೆರೆ ಹಿಡಿದಿದ್ದರು. ಈ ಕಾರಣದಿಂದ ಚಿತ್ರ ವಿಮರ್ಶಕರಿಂದಲೂ ಉತ್ತಮ ಪ್ರಶಂಸೆ ಗಳಿಸಿತ್ತು.</p>.<p class="Subhead">ಕೈಗೂಡದ ಗುಬ್ಬಿ ವೀರಣ್ಣನವರ ಆಸೆ!</p>.<p>‘ಚಂದವಳ್ಳಿಯ ತೋಟ’ ಕಾದಂಬರಿಯಿಂದ ಪ್ರಭಾವಿತರಾಗಿದ್ದ ಗುಬ್ಬಿ ವೀರಣ್ಣನವರು ಇದನ್ನು ಸಿನಿಮಾ ಮಾಡುವುದಕ್ಕಾಗಿ ರೈಟ್ಸ್ ಪಡೆಯಲು ಸಿದ್ಧತೆ ನಡೆಸಿದ್ದರು. ಚಂದವಳ್ಳಿಯ ಬಂಜರುಭೂಮಿಯಲ್ಲಿ ಹಸಿರು ಬಿತ್ತುವ ಶಿವನಂಜು ಎಂಬ ರೈತನ ಪಾತ್ರವನ್ನು ತಾವೇ ನಿರ್ವಹಿಸಲು ಸಜ್ಜಾಗಿದ್ದರು.</p>.<p>ಆದರೆ, ಸಿನಿಮಾ ಮಾಡುವ ಹಕ್ಕು ಪಾಲ್ ಅಂಡ್ ಕಂಪನಿ ಪಾಲಾಯಿತು.ನಿರ್ದೇಶನದ ಹೊಣೆ ಟಿ.ವಿ. ಸಿಂಗ್ ಠಾಕೂರ್ ಅವರ ಹೆಗಲೇರಿತು. ‘ಸಹೋದರಿ’ ಎಂಬ ಯಶಸ್ವಿ ಚಿತ್ರದ ಮೂಲಕ ಆಗಲೇ ಸಿಂಗ್ ಹೆಸರು ಮಾಡಿದ್ದರು.</p>.<p>‘ಪಾಲ್ ಅಂಡ್ ಕಂಪನಿ ಸಿನಿಮಾ ಮಾಡಲು ಮುಂದಾದಾಗ ಶಿವನಂಜು ಪಾತ್ರಕ್ಕೆ ತಮ್ಮನ್ನೇ ಕರೆಯಬಹುದು ಎಂದು ವೀರಣ್ಣನವರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅವರು ಮಾಡಬೇಕು ಎಂದುಕೊಂಡಿದ್ದ ಶಿವನಂಜು ಪಾತ್ರ ಉದಯ್ ಕುಮಾರ್ ಪಾಲಾಯಿತು. ಆ ನೋವು ಬಹಳ ದಿನ ವೀರಣ್ಣನವರನ್ನು ಕಾಡುತ್ತಿತ್ತು’ ಎಂದು ಹಿರಿಯ ಛಾಯಾಗ್ರಾಹಕ ಬಿ.ಎಸ್. ಬಸವರಾಜು ನೆನಪಿಸಿಕೊಳ್ಳುತ್ತಾರೆ.</p>.<p>ಬೆಂಗಳೂರಿನ ಪ್ರಭಾತ್ ಚಿತ್ರಮಂದಿರಲ್ಲಿ ಚಿತ್ರ ನೂರು ದಿನ ಓಡಿತ್ತು. ಶತದಿನೋತ್ಸವ ಸಮಾರಂಭಕ್ಕೆ ಸಾಹಿತಿ ವಿ.ಸೀತಾರಾಮಯ್ಯ ಮುಖ್ಯ ಅತಿಥಿಯಾಗಿದ್ದರು. 1965ರಲ್ಲಿ ಈ ಚಿತ್ರ ಕೆಂಪೇಗೌಡ ಚಿತ್ರಮಂದಿರದಲ್ಲಿ ಎರಡನೇ ಬಾರಿ ಬಿಡುಗಡೆಯಾದಾಗಲೂ ಶತದಿನೋತ್ಸವ ಕಂಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>