ಡಿ. ಸತ್ಯಪ್ರಕಾಶ್ ಈ ಚಿತ್ರದ ನಿರ್ದೇಶಕರು. ನಾನು ಈ ಚಿತ್ರಕ್ಕೆ ಆಡಿಷನ್ ಮೂಲಕ ಆಯ್ಕೆ ಆದವನು. ಮೈಸೂರಿನಲ್ಲಿ ನಡೆದ ಆಡಿಷನ್ ಪ್ರಕ್ರಿಯೆಯ ಬಗ್ಗೆ ನನ್ನ ತಂದೆಗೆ ಹೇಗೋ ಗೊತ್ತಾಗಿ, ಅವರು ನನ್ನಲ್ಲಿ ಹೇಳಿದ್ದರು. ಅಲ್ಲಿ ಕೊನೆಯವನಾಗಿ ಪಾಲ್ಗೊಂಡೆ. ಅಲ್ಲಿ ಒಂದೆರಡು ಡೈಲಾಗ್ಗಳನ್ನು ಹೇಳಬೇಕಿತ್ತು, ಹೇಳಿದೆ. ‘ನಾವು ಹೇಳಿದ್ದನ್ನು ತಕ್ಷಣಕ್ಕೆ ಗ್ರಹಿಸಿ, ಅಭಿನಯಿಸಿದ್ದೀಯ’ ಎಂದು ಹೇಳಿ ನನ್ನನ್ನು ನಿರ್ದೇಶಕರು ಆ ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು.