<p>ನಟ ಅನೀಶ್ ತೇಜೇಶ್ವರ್ ನಟನೆಯ ‘ಲವ್ ಒಟಿಪಿ’ ಚಿತ್ರ ನಿನ್ನೆ (ಶುಕ್ರವಾರ) ಬಿಡುಗಡೆಯಾಗಿದೆ. ಈ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಇದ್ದರೂ ಚಿತ್ರಮಂದಿರದಲ್ಲಿ ಚಿತ್ರ ಯಶಸ್ಸು ಕಾಣುತ್ತಿಲ್ಲವೆಂದು ನಟ ಅನೀಶ್ ಭಾವುಕರಾಗಿದ್ದಾರೆ. </p><p>ಈ ಬಗ್ಗೆ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಮಾತನಾಡಿರುವ ಅನೀಶ್, ನಿನ್ನೆ ಬಿಡುಗಡೆಯಾಗಿರುವ ‘ಲವ್ ಒಟಿಪಿ’ ಚಿತ್ರ ಕುರಿತು ತುಂಬಾ ನೋವಿನಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ಯಶಸ್ಸಿಗಾಗಿ ಚಿತ್ರರಂಗದಲ್ಲಿ 14ವರ್ಷದಿಂದ ನಿರಂತರ ಶ್ರಮ ಹಾಕುತ್ತಿದ್ದೇನೆ. ಸೋಲುಗಳಿಗೆ ಕಂಗೆಡದೆ ಸಾಧಿಸುವ ಛಲದಲ್ಲಿ ಇದ್ದೀನಿ. ನನ್ನ ಸಿನಿಮಾ ವೃತ್ತಿಯಲ್ಲೇ ಉತ್ತಮ ಅಭಿಪ್ರಾಯ ‘ಲವ್ OTP’ ಚಿತ್ರಕ್ಕೆ ಸಿಕ್ಕಿದೆ. ಆದರೆ ಜನ ಯಾಕೆ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಿಸುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ. </p><p>‘ಪ್ರೇಕ್ಷಕರ ಗಮನ ಸೆಳೆಯಲು ಇನ್ನು ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ಇವತ್ತು, ನಾಳೆಯೊಳಗೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಈ ಸಿನಿಮಾವನ್ನು ನೋಡದೇ ಇದ್ದರೆ ಇದೇ ನನ್ನ ಕೊನೆಯ ಚಿತ್ರ ಆಗಲಿದೆ. ಈ ಕಣ್ಣೀರು ಸಿಂಪತಿಗಲ್ಲ.. ಗಿಮಿಕ್ಕಿಗೂ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಟ ಅನೀಶ್ ತೇಜೇಶ್ವರ್ ನಟನೆಯ ‘ಲವ್ ಒಟಿಪಿ’ ಚಿತ್ರ ನಿನ್ನೆ (ಶುಕ್ರವಾರ) ಬಿಡುಗಡೆಯಾಗಿದೆ. ಈ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಇದ್ದರೂ ಚಿತ್ರಮಂದಿರದಲ್ಲಿ ಚಿತ್ರ ಯಶಸ್ಸು ಕಾಣುತ್ತಿಲ್ಲವೆಂದು ನಟ ಅನೀಶ್ ಭಾವುಕರಾಗಿದ್ದಾರೆ. </p><p>ಈ ಬಗ್ಗೆ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಮಾತನಾಡಿರುವ ಅನೀಶ್, ನಿನ್ನೆ ಬಿಡುಗಡೆಯಾಗಿರುವ ‘ಲವ್ ಒಟಿಪಿ’ ಚಿತ್ರ ಕುರಿತು ತುಂಬಾ ನೋವಿನಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ಯಶಸ್ಸಿಗಾಗಿ ಚಿತ್ರರಂಗದಲ್ಲಿ 14ವರ್ಷದಿಂದ ನಿರಂತರ ಶ್ರಮ ಹಾಕುತ್ತಿದ್ದೇನೆ. ಸೋಲುಗಳಿಗೆ ಕಂಗೆಡದೆ ಸಾಧಿಸುವ ಛಲದಲ್ಲಿ ಇದ್ದೀನಿ. ನನ್ನ ಸಿನಿಮಾ ವೃತ್ತಿಯಲ್ಲೇ ಉತ್ತಮ ಅಭಿಪ್ರಾಯ ‘ಲವ್ OTP’ ಚಿತ್ರಕ್ಕೆ ಸಿಕ್ಕಿದೆ. ಆದರೆ ಜನ ಯಾಕೆ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಿಸುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ. </p><p>‘ಪ್ರೇಕ್ಷಕರ ಗಮನ ಸೆಳೆಯಲು ಇನ್ನು ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ಇವತ್ತು, ನಾಳೆಯೊಳಗೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಈ ಸಿನಿಮಾವನ್ನು ನೋಡದೇ ಇದ್ದರೆ ಇದೇ ನನ್ನ ಕೊನೆಯ ಚಿತ್ರ ಆಗಲಿದೆ. ಈ ಕಣ್ಣೀರು ಸಿಂಪತಿಗಲ್ಲ.. ಗಿಮಿಕ್ಕಿಗೂ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>