ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಂತಾ ಜತೆ ವಿಚ್ಛೇದನದ ಬಳಿಕ ಮತ್ತೆ ಸಾಮಾಜಿಕ ತಾಣಕ್ಕೆ ಮರಳಿದ ನಾಗ ಚೈತನ್ಯ

Last Updated 21 ನವೆಂಬರ್ 2021, 6:32 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಭಾರತ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ನಾಗ ಚೈತನ್ಯ- ಸಮಂತಾ ರುತ್ ಪ್ರಭು ವಿಚ್ಛೇದನಪ್ರಸಂಗ ಮುಗಿದು ತಿಂಗಳುಗಳೇ ಕಳೆದಿದೆ.

ಈ ಸಂದರ್ಭದಲ್ಲಿ ಸಮಂತಾ, ಸಾಮಾಜಿಕ ತಾಣದಲ್ಲಿ ಸಕ್ರಿಯರಾಗಿದ್ದರೆ, ನಟ ನಾಗ ಚೈತನ್ಯ ಮಾತ್ರ ಇನ್‌ಸ್ಟಾಗ್ರಾಂ ಮತ್ತು ಇತರ ಸಾಮಾಜಿಕ ತಾಣಗಳಿಂದ ದೂರ ಉಳಿದಿದ್ದರು.

ಈಗ ಮತ್ತೆ ನಾಗ ಚೈತನ್ಯ ಅವರು ಇನ್‌ಸ್ಟಾಗ್ರಾಂಗೆ ಮರಳಿದ್ದಾರೆ. ವಿಚ್ಛೇದನ ಬಳಿಕ ಅವರು ಟ್ವಿಟರ್ ಬಳಕೆ ಮಾಡಿದ್ದು ಬಿಟ್ಟರೆ, ಅಭಿಮಾನಿಗಳ ಜತೆ ಸಂವಹನಕ್ಕಾಗಿ ಇನ್‌ಸ್ಟಾಗ್ರಾಂ ಬಳಸುತ್ತಿರಲಿಲ್ಲ.

ಮ್ಯಾಥ್ಯೂ ಮೆನಾಘ್ ಅವರ ಗ್ರೀನ್‌ಲೈಟ್ಸ್ ಪುಸ್ತಕದ ಫೋಟೊ ಒಂದನ್ನು ನಾಗ ಚೈತನ್ಯ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಜೀವನಕ್ಕಾಗಿ ಒಂದು ಪ್ರೀತಿಯ ಪತ್ರ, ನಿಮ್ಮ ಜೀವನಕಥೆ ನನಗೂ ದಾರಿದೀಪವಾಗಿದೆ ಎಂದು ನಾಗ ಚೈತನ್ಯ ಅವರು ತಮ್ಮ ಪೋಸ್ಟ್‌ಗೆ ಅಡಿಬರಹ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT