‘ಬೇಷರಮ್ ರಂಗ್’ ಹಾಡಿನಿಂದ ವಿವಾದಕ್ಕೆ ಗುರಿಯಾಗಿದ್ದ ಶಾರುಖ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ‘ಪಠಾಣ್’ ಚಿತ್ರ ಇಂದು ತೆರೆ ಕಂಡಿದೆ. ಕೇಸರಿ ಪಡೆಯ ಬಾಯ್ಕಾಟ್ ಬೆದರಿಕೆ, ಪ್ರತಿಭಟನೆ, ಹನುಮಾನ್ ಚಾಲೀಸ್ ಪಠಣದ ನಡುವೆಯೂ ‘ಪಠಾಣ್’ ಚಿತ್ರದ ಅಬ್ಬರ ಜೋರಾಗಿದೆ. ಬಹುತೇಕ ನೆಟ್ಟಿಗರು ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಬಾಲಿವುಡ್ ಚಿತ್ರ ವಿಮರ್ಶಕ ತರಣ್ ಆದರ್ಶ್, ಚಿತ್ರವನ್ನು ಒಂದೇ ಸಾಲಿನಲ್ಲಿ ಬ್ಲಾಕ್ಬಸ್ಟರ್ ಎಂದು ಬಣ್ಣಿಸಿದ್ದಾರೆ.
#OneWordReview...#Pathaan: BLOCKBUSTER.
— taran adarsh (@taran_adarsh) January 25, 2023
Rating: ⭐️⭐️⭐️⭐️½#Pathaan has it all: Star power, style, scale, songs, soul, substance and surprises… And, most importantly, #SRK, who’s back with a vengeance… Will be the first #Blockbuster of 2023. #PathaanReview pic.twitter.com/Xci1SN72hz
ಸುದೀರ್ಘ ವಿರಾಮದ ಬಳಿಕ ಶಾರುಖ್ ಖಾನ್ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದು, ಭರ್ಜರಿ ಆ್ಯಕ್ಷನ್ನೊಂದಿಗೆ ಅಭಿಮಾನಿಗಳ ಮನ ಗೆದ್ದಿದ್ದಾರೆ ಎನ್ನುತ್ತಿದ್ದಾರೆ ಬಹುತೇಕ ನೆಟ್ಟಿಗರು.
ಇತ್ತೀಚಿನ ಅತ್ಯುತ್ತಮ ಆ್ಯಕ್ಷನ್ ಸಿನಿಮಾ. ಅತಿಥಿ ಪಾತ್ರದಲ್ಲಿ ಸಲ್ಮಾನ್ ಖಾನ್ ಬರುವುದು ಪ್ರೇಕ್ಷಕರ ಕಣ್ಣಿಗೆ ಹಬ್ಬ. ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಥೆ ಕೂಡ ಉತ್ತಮವಾಗಿದೆ. ಖಂಡಿತ ನೋಡಲೇಬೇಕಾದ ಚಿತ್ರವೆಂದು ಟ್ವಿಟ್ಟರ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
Many many congratulations to the whole team on for the success of #pathan .. but a little Angry with @iamsrk bhai .. yar ek bhi ticket ni mil rahi all are sold out.. but I’m dying to watch this movie. pic.twitter.com/fgqiPY0Bhz
— King Mika Singh (@MikaSingh) January 25, 2023
ಚಿತ್ರಕ್ಕೆ ನಾಲ್ಕೂವರೆ ರೇಟಿಂಗ್ ನೀಡಿರುವ ತರಣ್, ಮೊದಲ ದಿನವೇ ಚಿತ್ರ ₹20ಕೋಟಿ ಗಳಿಕೆ ದಾಟಿದೆ ಎಂದು ಟ್ವೀಟ್ ಮಾಡಿದ್ದಾರೆ. ರಾಜಸ್ತಾನದಲ್ಲಿ ಟಿಕೆಟ್ ದರ ₹2400. ಆದಾಗ್ಯೂ ಚಿತ್ರಮಂದಿರ ಭರ್ತಿಯಾಗಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಹಲವರು ಮೊದಲ ದಿನ ಮೊದಲ ಶೋ ಟಿಕೆಟ್ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Hey #BoycotBigots Shhhhhhhhh … #HallaBol King Khan @iamsrk is back.. keep rocking @deepikapadukone #JohnAbraham and team #Pathan ..#BesharamRang 👍👍👍👍👍
— Prakash Raj (@prakashraaj) January 25, 2023
ಸಿನಿಮಾ ಬಾಯ್ಕಾಟ್ ಮಾಡಿರುವವರನ್ನು ವ್ಯಂಗ್ಯವಾಡಿರುವ ನಟ ಪ್ರಕಾಶ್ ರಾಜ್, ಕಿಂಗ್ ಖಾನ್ ಮರಳಿ ಬಂದಿದ್ದಾರೆ. ದೀಪಿಕಾ ಮತ್ತು ಇಡೀ ತಂಡ ಹೀಗೆಯೇ ಘರ್ಜಿಸಿ ಎಂದು ಶುಭ ಹಾರೈಸಿದ್ದಾರೆ.
ಚಿತ್ರದ ‘ಬೇಷರಮ್ ರಂಗ್’ ಹಾಡು ಕೇಸರಿ ಪಡೆಯನ್ನು ಕೆರಳಿಸಿತ್ತು. ದೀಪಿಕಾ ಪಡುಕೋಣೆ ಈ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ತೊಟ್ಟು ಒಂದು ಗುಂಪಿನ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬ ಕೂಗು ಕೇಳಿ ಬಂದಿತ್ತು. ಬಾಯ್ಕಾಟ್ ಪಠಾಣ್, ಚಿತ್ರ ಬಿಡುಗಡೆಯಾದರೆ ಚಿತ್ರಮಂದಿರಕ್ಕೆ ಬೆಂಕಿ ಇಡಲಾಗುವುದು ಇತ್ಯಾದಿ ಬೆದರಿಕೆಗಳನ್ನು ಚಿತ್ರತಂಡ ಎದುರಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.