ಬುಧವಾರ, 30 ಜುಲೈ 2025
×
ADVERTISEMENT
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನದ 3ನೇ ಆವೃತ್ತಿಗೆ ದಿನಗಣನೆ

Published : 30 ಮೇ 2025, 0:30 IST
Last Updated : 30 ಮೇ 2025, 0:30 IST
ಫಾಲೋ ಮಾಡಿ
Comments
ತಾಂತ್ರಿಕ ತೀರ್ಪುಗಾರರಾದ ಜಾನ್ಸನ್‌ ಶಿವಧ್ವಜ್‌ ಬಿ.ಎಂ.ಗಿರಿರಾಜ್‌ ಕೆಂಪರಾಜು ಶಶಿಧರ ಅಡಪ ಪ್ರತಿಭಾ ನಂದಕುಮಾರ್‌ ಮುಖ್ಯ ತೀರ್ಪುಗಾರರಾದ ಪೂಜಾಗಾಂಧಿ ಪಿ.ಡಿ.ಸತೀಶ್‌ಚಂದ್ರ ಸಂಧ್ಯಾರಾಣಿ ಪ್ರೀತಿ ನಾಗರಾಜ್‌ ಜಯತೀರ್ಥ ಗಂಗಾಧರ ಮೊದಲಿಯಾರ್‌ ಮುಖ್ಯ ತೀರ್ಪುಗಾರರಾದ ಸುಮನ್‌ ಕಿತ್ತೂರು ಬಾ.ನಾ.ಸುಬ್ರಹ್ಮಣ್ಯ ಎಂ.ಎನ್‌.ಸ್ವಾಮಿ ಹರೀಶ್‌ ಮಲ್ಯ ಹರಿಣಿ.

ತಾಂತ್ರಿಕ ತೀರ್ಪುಗಾರರಾದ ಜಾನ್ಸನ್‌ ಶಿವಧ್ವಜ್‌ ಬಿ.ಎಂ.ಗಿರಿರಾಜ್‌ ಕೆಂಪರಾಜು ಶಶಿಧರ ಅಡಪ ಪ್ರತಿಭಾ ನಂದಕುಮಾರ್‌ ಮುಖ್ಯ ತೀರ್ಪುಗಾರರಾದ ಪೂಜಾಗಾಂಧಿ ಪಿ.ಡಿ.ಸತೀಶ್‌ಚಂದ್ರ ಸಂಧ್ಯಾರಾಣಿ ಪ್ರೀತಿ ನಾಗರಾಜ್‌ ಜಯತೀರ್ಥ ಗಂಗಾಧರ ಮೊದಲಿಯಾರ್‌ ಮುಖ್ಯ ತೀರ್ಪುಗಾರರಾದ ಸುಮನ್‌ ಕಿತ್ತೂರು ಬಾ.ನಾ.ಸುಬ್ರಹ್ಮಣ್ಯ ಎಂ.ಎನ್‌.ಸ್ವಾಮಿ ಹರೀಶ್‌ ಮಲ್ಯ ಹರಿಣಿ.

ಬಹಳ ದೊಡ್ಡ ತೀರ್ಪುಗಾರರ ಸಾಗರವಿದು. ಈ ಪ್ರಶಸ್ತಿಯ ಪ್ರಕ್ರಿಯೆಯನ್ನು ಗಮನಿಸಿದಾಗ ಯಾರು ಯಾರನ್ನೂ ಶಿಫಾರಸು ಮಾಡುವುದಕ್ಕಾಗಲಿ, ಪ್ರಭಾವ ಬೀರಲು ಸಾಧ್ಯವಿಲ್ಲ. ಇಲ್ಲಿ ಸಿನಿಮಾ ಹಾಗೂ ಅದರ ಗುಣಗಳಷ್ಟೇ ಪ್ರಭಾವ ಬೀರಲು ಸಾಧ್ಯ. ಪಾರದರ್ಶಕವಾಗಿರುವ ಏಕೈಕ ತೀರ್ಪುಗಾರರ ಸಮಿತಿ ಇದ್ದರೆ ಅದು ‘ಪ್ರಜಾವಾಣಿ’ಯ ಈ ‘ಸಿನಿ ಸಮ್ಮಾನ’ದಲ್ಲಿದೆ.
–ಟಿ.ಎಸ್.ನಾಗಾಭರಣ, ಮುಖ್ಯ ತೀರ್ಪುಗಾರರ ಮಂಡಳಿ ಮುಖ್ಯಸ್ಥ
ನನಗೆ ವೈಯಕ್ತಿಕವಾಗಿ ಪೈಪೋಟಿಯಲ್ಲಿ ನಂಬಿಕೆ ಇಲ್ಲ. ಆದರೂ ಒಳ್ಳೆಯ ಕೆಲಸವನ್ನು ಗುರುತಿಸಿ, ದಾಖಲಿಸಬೇಕು. ನನ್ನ ಪ್ರಕಾರದಲ್ಲಿ ನಾಮನಿರ್ದೇಶಿತರೆಲ್ಲರೂ ವಿಜೇತರೇ. ಒಳ್ಳೆಯ ಕೆಲಸವನ್ನು ಗುರುತಿಸುವ ಕೆಲಸ ಇಲ್ಲಿ ಪ್ರಾಮಾಣಿಕವಾಗಿ ಆಗುತ್ತದೆ ಎನ್ನುವ ನಂಬಿಕೆ ನನಗಿದೆ.
–ಕಿಶೋರ್‌, ಮುಖ್ಯ ತೀರ್ಪುಗಾರ
ನಮ್ಮನ್ನೆಲ್ಲರನ್ನು ರೂಪಿಸಿದ್ದೇ ಪ್ರಜಾವಾಣಿ. ಇದೇ ಸಂಸ್ಥೆಯ ಪ್ರಶಸ್ತಿ ಕಾರ್ಯಕ್ರಮಕ್ಕೆ ಮುಖ್ಯ ತೀರ್ಪುಗಾರಳಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆ ತಂದಿದೆ. ಇದು ಬೇರೆ ಪ್ರಶಸ್ತಿಗಳಂತಲ್ಲ. ಇದೀಗ ಚಿತ್ರತಂಡಗಳೇ ‘ಪ್ರಜಾವಾಣಿ ಪ್ರಶಸ್ತಿ ಯಾವಾಗ?’ ಎಂದು ಕೇಳುವ ಹಂತಕ್ಕೆ ಇದು ಬೆಳೆದಿದೆ.
 –ಡಿ. ಸುಮನ್‌ ಕಿತ್ತೂರು, ಮುಖ್ಯ ತೀರ್ಪುಗಾರ್ತಿ
ಮೂರನೇ ಆವೃತ್ತಿಗೆ ಕಾಲಿಡುತ್ತಿದ್ದೇವೆ. ಪ್ರತಿಭೆಗಳಿಗೆ ಒಳ್ಳೆಯ ವೇದಿಕೆ ದೊರಕಿದೆ. ತಾಂತ್ರಿಕ ತೀರ್ಪುಗಾರಳಾಗಿದ್ದ ನಾನು ಈ ವರ್ಷ ಮುಖ್ಯ ತೀರ್ಪುಗಾರಳಾಗಿದ್ದೇನೆ. ಇದರಿಂದ ಜವಾಬ್ದಾರಿಯೂ ಹೆಚ್ಚಿದೆ. ಕಳೆದ ವರ್ಷಕ್ಕಿಂತ ಅದ್ಧೂರಿಯಾಗಿ ಈ ವರ್ಷ ಕಾರ್ಯಕ್ರಮ ನಡೆಯಲಿದೆ.
–ಪೂಜಾ ಗಾಂಧಿ, ಮುಖ್ಯ ತೀರ್ಪುಗಾರ್ತಿ
ಪ್ರಶಸ್ತಿಯನ್ನು ಯಾವ ಸಂಸ್ಥೆ ಯಾರಿಗೆ ಕೊಡುತ್ತಿದೆ ಎನ್ನುವುದರಲ್ಲಿ ಪ್ರಶಸ್ತಿಯ ಗೌರವ ಅಡಗಿದೆ. ಇಂತಹ ವಿಶ್ವಾಸಾರ್ಹತೆ ಹೊಂದಿರುವ ಸಂಸ್ಥೆಗಳಲ್ಲಿ ಪ್ರಜಾವಾಣಿಯೂ ಒಂದು. ಈ ಪ್ರಶಸ್ತಿಯ ಪ್ರಕ್ರಿಯೆ ಸರಳವಾಗಿಲ್ಲ. ರಾಷ್ಟ್ರಪ್ರಶಸ್ತಿಗೆ ಹತ್ತಿರವಾಗಿ ಈ ಪ್ರಶಸ್ತಿ ಇದೆ. ಹೀಗಾಗಿ ಅರ್ಹರಿಗೆ ಪ್ರಶಸ್ತಿ ದೊರಕುತ್ತಿದೆ.
–ಪಿ.ಶೇಷಾದ್ರಿ, ಮುಖ್ಯ ತೀರ್ಪುಗಾರ
ಟ್ರೋಫಿ 
ಟ್ರೋಫಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT