<p>ನಟ ಪುನೀತ್ ರಾಜ್ಕುಮಾರ್ ಜನ್ಮ ದಿನದ ಪ್ರಯುಕ್ತ ‘ಜೇಮ್ಸ್’ ಚಿತ್ರ ತಂಡವು ವಿಶೇಷ ರೇಸಿ ಮೋಷನ್ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ಬಿಡುಗಡೆ ಮಾಡಿದೆ.</p>.<p>‘ಕಷ್ಟ ಬಂದಾಗ ಹೆದುರ್ಕೋಳೊರು ಕಾಮನ್ ಎಲ್ಲನೂ ಎದುರಿಸಿ ಮುಂದೆ ನಿಲ್ಲೋನು ನಂಬರ್ 1’ ಒಕ್ಕಣೆಯಿಂದ ಈ ಮೋಷನ್ ಪೋಸ್ಟರ್ಶುರುವಾಗುತ್ತದೆ. ಕಾರಿನಲ್ಲಿ ಟ್ರಕ್ವೊಂದನ್ನು ಬೆನ್ನಟ್ಟಿ ಹೋಗುವಜೇಮ್ಸ್ ಪಾತ್ರಧಾರಿ ಪುನೀತ್ ರಾಜ್ಕುಮಾರ್, ಅದನ್ನು ಸೇತುವೆಮೇಲೆ ಅಡ್ಡಗಟ್ಟಿ ಮಿಷನ್ಗನ್ನಿನಿಂದ ಭಸ್ಮ ಮಾಡುವ ದೃಶ್ಯ ಸಿನಿ ರಸಿಕರಿಗೆ ರೋಮಾಂಚನ ನೀಡುವಂತಿದೆ. ಈ ಮೋಷನ್ ಪೋಸ್ಟರ್ ಬಿಡುಗಡೆಯಾದ 11 ನಿಮಿಷಗಳಲ್ಲಿ 27 ಸಾವಿರಕ್ಕೂ ಹೆಚ್ಚು ಮಂದಿ ಯೂಟ್ಯೂಬ್ನಲ್ಲಿ ವೀಕ್ಷಣೆ ಮಾಡಿದ್ದರು.</p>.<p>‘ಬಹದ್ದೂರ್’ ಖ್ಯಾತಿಯ ಚೇತನ್ ಕುಮಾರ್‘ಜೇಮ್ಸ್’ಗೆಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.ಜೇಮ್ಸ್ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವೂ ಚೇತನ್ ಅವರೇ ನಿಭಾಯಿಸಿದ್ದಾರೆ.</p>.<p>ಜೇಮ್ಸ್ಚಿತ್ರದಲ್ಲಿ ಪುನೀತ್ಗೆ ತೆಲುಗಿನ ನಟಿ ನಿಧಿ ಅಗರ್ವಾಲ್ ಅಥವಾ ಬಹುಭಾಷಾ ತಾರೆ ಕನ್ನಡತಿ ಪೂಜಾ ಹೆಗ್ಡೆ ನಾಯಕಿಯಾಗಬಹುದೆಂಬ ಮಾತುಗಳು ಕೇಳಿಬಂದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಟ ಪುನೀತ್ ರಾಜ್ಕುಮಾರ್ ಜನ್ಮ ದಿನದ ಪ್ರಯುಕ್ತ ‘ಜೇಮ್ಸ್’ ಚಿತ್ರ ತಂಡವು ವಿಶೇಷ ರೇಸಿ ಮೋಷನ್ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ಬಿಡುಗಡೆ ಮಾಡಿದೆ.</p>.<p>‘ಕಷ್ಟ ಬಂದಾಗ ಹೆದುರ್ಕೋಳೊರು ಕಾಮನ್ ಎಲ್ಲನೂ ಎದುರಿಸಿ ಮುಂದೆ ನಿಲ್ಲೋನು ನಂಬರ್ 1’ ಒಕ್ಕಣೆಯಿಂದ ಈ ಮೋಷನ್ ಪೋಸ್ಟರ್ಶುರುವಾಗುತ್ತದೆ. ಕಾರಿನಲ್ಲಿ ಟ್ರಕ್ವೊಂದನ್ನು ಬೆನ್ನಟ್ಟಿ ಹೋಗುವಜೇಮ್ಸ್ ಪಾತ್ರಧಾರಿ ಪುನೀತ್ ರಾಜ್ಕುಮಾರ್, ಅದನ್ನು ಸೇತುವೆಮೇಲೆ ಅಡ್ಡಗಟ್ಟಿ ಮಿಷನ್ಗನ್ನಿನಿಂದ ಭಸ್ಮ ಮಾಡುವ ದೃಶ್ಯ ಸಿನಿ ರಸಿಕರಿಗೆ ರೋಮಾಂಚನ ನೀಡುವಂತಿದೆ. ಈ ಮೋಷನ್ ಪೋಸ್ಟರ್ ಬಿಡುಗಡೆಯಾದ 11 ನಿಮಿಷಗಳಲ್ಲಿ 27 ಸಾವಿರಕ್ಕೂ ಹೆಚ್ಚು ಮಂದಿ ಯೂಟ್ಯೂಬ್ನಲ್ಲಿ ವೀಕ್ಷಣೆ ಮಾಡಿದ್ದರು.</p>.<p>‘ಬಹದ್ದೂರ್’ ಖ್ಯಾತಿಯ ಚೇತನ್ ಕುಮಾರ್‘ಜೇಮ್ಸ್’ಗೆಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.ಜೇಮ್ಸ್ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವೂ ಚೇತನ್ ಅವರೇ ನಿಭಾಯಿಸಿದ್ದಾರೆ.</p>.<p>ಜೇಮ್ಸ್ಚಿತ್ರದಲ್ಲಿ ಪುನೀತ್ಗೆ ತೆಲುಗಿನ ನಟಿ ನಿಧಿ ಅಗರ್ವಾಲ್ ಅಥವಾ ಬಹುಭಾಷಾ ತಾರೆ ಕನ್ನಡತಿ ಪೂಜಾ ಹೆಗ್ಡೆ ನಾಯಕಿಯಾಗಬಹುದೆಂಬ ಮಾತುಗಳು ಕೇಳಿಬಂದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>