<p>ಎಸ್.ಎಲ್.ಭೈರಪ್ಪ (91) ಅವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ ಹೃದಾಯಾಘಾತದಿಂದ ನಿಧನರಾಗಿದ್ದಾರೆ. ಅವರು ಅನೇಕ ಕಾದಂಬರಿಗಳನ್ನು ರಚಿಸಿದ್ದು, ಅವುಗಳಲ್ಲಿ ಕೆಲವು ಸಿನಿಮಾಗಳಾಗಿ ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡಿವೆ.</p><p><strong>ವಂಶವೃಕ್ಷ</strong></p><p>ಕಾದಂಬರಿ ಆಧಾರಿತ ವಂಶವೃಕ್ಷ ಚಲನಚಿತ್ರವು 1972ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ಕಾತ್ಯಾಯಿನಿ ಪಾತ್ರ ಪ್ರಮುಖ ಕಥಾವಸ್ತುವಾಗಿದೆ.</p><p>ಕಾತ್ಯಾಯಿನಿ ಎಂಬ ವಿಧವೆಯು ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ಕುಟುಂಬದ ಗೌರವದ ನಡುವೆ ಭಾವನಾತ್ಮಕ ಸಂಘರ್ಷವನ್ನು ಈ ಚಿತ್ರದಲ್ಲಿ ಕಾಣಬಹುದು.</p><p>ಒಬ್ಬ ವಿಧವೆ ಮರು ವಿವಾಹ ಆದರೆ ಸಮಾಜ ಅವಳನ್ನು ನೋಡುವ ದೃಷ್ಟಿಕೋನದ ಸಾಮಾಜಿಕ ಪೀಡುಗಳ ಬಗ್ಗೆ ಈ ಸಿನಿಮಾದಲ್ಲಿ ಕಾಣಬಹುದು.</p><p>ವಂಶವೃಕ್ಷ ಚಿತ್ರದ ಚಿತ್ರಕಥೆ ಹಾಗೂ ನಿರ್ದೇಶನವನ್ನು ಬಿ.ವಿ. ಕಾರಂತ ಮತ್ತು ಗಿರೀಶ್ ಕಾರ್ನಾಡ್ ಮಾಡಿದ್ದಾರೆ.</p><p>ಎಲ್. ವಿ. ಶಾರದಾ, ವಿಷ್ಣುವರ್ಧನ್ ಮತ್ತು ಉಮಾ ಶಿವಕುಮಾರ್ ಅನೇಕರು ಬಣ್ಣ ಹಚ್ಚಿದ್ದಾರೆ.</p><p>ಸಿನಿಮಾವು ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಮೂರು ಫಿಲ್ಮ್ಫೇರ್ ಪ್ರಶಸ್ತಿ, ಅತ್ಯುತ್ತಮ ಕನ್ನಡ ಚಿತ್ರ , ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.</p><p><strong>ತಬ್ಬಲಿಯು ನೀನಾದೆ ಮಗನೆ</strong></p><p>1977 ರಲ್ಲಿ ಬಿಡುಗಡೆಯಾದ ‘ತಬ್ಬಲಿಯು ನೀನಾದೆ ಮಗನೆ‘ ಚಿತ್ರವನ್ನು ಗಿರೀಶ್ ಕಾರ್ನಾಡ್ ಮತ್ತು ಬಿ.ವಿ. ಕಾರಂತ್ ನಿರ್ದೇಶಿಸಿದ್ದಾರೆ. </p><p>ಈ ಸಿನಿಮಾದಲ್ಲಿ ಕಾಳಿಂಗ ಎಂಬ ಯುವಕ ಹಾಗೂ ಅಮೇರಿಕನ್ ಮಹಿಳೆ ಹಿಲ್ಡಾ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. </p><p>ವಿದೇಶಿ ಮಹಿಳೆಯನ್ನು ವಿವಾಹ ಆದ ಬಳಿಕ ಗ್ರಾಮಸ್ಥರ ನಿಂದನೆಗೆ ಒಳಗಾವುದು. ಧಾರ್ಮಿಕ ವಿಧಿಗಳನ್ನು ಪಾಲಿಸದ ಅವಳನ್ನು ಸಮಾಜದಿಂದ ದೂರ ಇಡಲು ಪ್ರಯತ್ನಿಸಿದಾಗ ಅವಳ ನಿಲುವುಗಳನ್ನು ಸಿನಿಮಾದಲ್ಲಿ ತೋರಿಸಲಾಗುತ್ತದೆ. </p><p>ಈ ಚಿತ್ರದಲ್ಲಿ ನಾಸಿರುದ್ದೀನ್ ಶಾ, ಲಕ್ಷ್ಮೀ ಕೃಷ್ಣಮೂರ್ತಿ, ಪೌಲಾ ಲಿಂಡ್ಸೆ ಸೇರಿದಂತೆ ಅನೇಕರು ನಟಿಸಿದ್ದಾರೆ.</p><p>ಫಿಲ್ಮ್ಫೇರ್ ಪ್ರಶಸ್ತಿ, 'ಅತ್ಯುತ್ತಮ ನಟ', 'ಅತ್ಯುತ್ತಮ ಸಿನಿಮಾಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ </p><p>ಎಸ್.ಪಿ. ರಾಮನಾಥನ್ ಅತ್ಯುತ್ತಮ ಧ್ವನಿಮುದ್ರಿಕೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.</p><p><strong>ನಾಯಿ ನೆರಳು</strong></p><p>ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ನಾಯಿ ನೆರಳು‘ ಸಿನಿಮಾವು 2006ರಲ್ಲಿ ಬಿಡುಗಡೆಯಾಯಿತು. ಪವಿತ್ರಾ ಲೋಕೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.</p><p>ಹಿಂದೂ ಧರ್ಮದಲ್ಲಿನ ಮೂಢನಂಬಿಕೆ, ಜಾತಿ ವ್ಯವಸ್ಥೆಯ ಹಾಗೂ ಸ್ತ್ರೀಯರ ಸಂಕಷ್ಟ, ವೈಚಾರಿಕತೆಯ ಕೊರತೆ, ಹಾಗೂ ವ್ಯಕ್ತಿಗಳ ನಡುವಿನ ಸಂಬಂಧಗಳಲ್ಲಿನ ಗೊಂದಲ ಈ ಚಿತ್ರದಲ್ಲಿ ಕಾಣಬಹದು. ಇದು ಜನ್ಮಾಂತರದ ಕಲ್ಪನೆ ಮತ್ತು ಅದರ ಸುತ್ತ ಬೆಳೆಯುವ ಗೊಂದಲಗಳ ಅನ್ವೇಷಣೆಯೂ ಆಗಿದೆ. </p><p>ಈ ಚಿತ್ರವು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.</p><p><strong>ಮತದಾನ</strong></p><p>ಕಾದಂಬರಿ ಆಧಾರಿತ ‘ಮತದಾನ‘ 2001ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಟಿ.ಎನ್. ಸೀತಾರಾಮ್ ನಿರ್ದೇಶಿಸಿದ್ದಾರೆ. </p><p>ಈ ಚಿತ್ರದಲ್ಲಿ ಒಬ್ಬ ವ್ಯಕ್ತಿಗೆ ಅಧಿಕಾರ ಸಿಕ್ಕಾಗ ಸದುಪಯೋಗಕ್ಕಿಂತ ಹೆಚ್ಚಾಗಿ ದುರುಪಯೋಗ ಪಡಿಸಿಕೊಳ್ಳುವ ರಾಜಕಾರಣಿಗಳ ಬಗ್ಗೆ ಹೇಳುವಂತಿದೆ.</p><p>ಈ ಸಿನಿಮಾವು ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.</p><p>ಅನಂತ್ ನಾಗ್, ದೇವರಾಜ್, ತಾರಾ, ಅವಿನಾಶ್ ಸೇರಿದಂತೆ ಅನೇಕರು ನಟಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎಸ್.ಎಲ್.ಭೈರಪ್ಪ (91) ಅವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ ಹೃದಾಯಾಘಾತದಿಂದ ನಿಧನರಾಗಿದ್ದಾರೆ. ಅವರು ಅನೇಕ ಕಾದಂಬರಿಗಳನ್ನು ರಚಿಸಿದ್ದು, ಅವುಗಳಲ್ಲಿ ಕೆಲವು ಸಿನಿಮಾಗಳಾಗಿ ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡಿವೆ.</p><p><strong>ವಂಶವೃಕ್ಷ</strong></p><p>ಕಾದಂಬರಿ ಆಧಾರಿತ ವಂಶವೃಕ್ಷ ಚಲನಚಿತ್ರವು 1972ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ಕಾತ್ಯಾಯಿನಿ ಪಾತ್ರ ಪ್ರಮುಖ ಕಥಾವಸ್ತುವಾಗಿದೆ.</p><p>ಕಾತ್ಯಾಯಿನಿ ಎಂಬ ವಿಧವೆಯು ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ಕುಟುಂಬದ ಗೌರವದ ನಡುವೆ ಭಾವನಾತ್ಮಕ ಸಂಘರ್ಷವನ್ನು ಈ ಚಿತ್ರದಲ್ಲಿ ಕಾಣಬಹುದು.</p><p>ಒಬ್ಬ ವಿಧವೆ ಮರು ವಿವಾಹ ಆದರೆ ಸಮಾಜ ಅವಳನ್ನು ನೋಡುವ ದೃಷ್ಟಿಕೋನದ ಸಾಮಾಜಿಕ ಪೀಡುಗಳ ಬಗ್ಗೆ ಈ ಸಿನಿಮಾದಲ್ಲಿ ಕಾಣಬಹುದು.</p><p>ವಂಶವೃಕ್ಷ ಚಿತ್ರದ ಚಿತ್ರಕಥೆ ಹಾಗೂ ನಿರ್ದೇಶನವನ್ನು ಬಿ.ವಿ. ಕಾರಂತ ಮತ್ತು ಗಿರೀಶ್ ಕಾರ್ನಾಡ್ ಮಾಡಿದ್ದಾರೆ.</p><p>ಎಲ್. ವಿ. ಶಾರದಾ, ವಿಷ್ಣುವರ್ಧನ್ ಮತ್ತು ಉಮಾ ಶಿವಕುಮಾರ್ ಅನೇಕರು ಬಣ್ಣ ಹಚ್ಚಿದ್ದಾರೆ.</p><p>ಸಿನಿಮಾವು ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಮೂರು ಫಿಲ್ಮ್ಫೇರ್ ಪ್ರಶಸ್ತಿ, ಅತ್ಯುತ್ತಮ ಕನ್ನಡ ಚಿತ್ರ , ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.</p><p><strong>ತಬ್ಬಲಿಯು ನೀನಾದೆ ಮಗನೆ</strong></p><p>1977 ರಲ್ಲಿ ಬಿಡುಗಡೆಯಾದ ‘ತಬ್ಬಲಿಯು ನೀನಾದೆ ಮಗನೆ‘ ಚಿತ್ರವನ್ನು ಗಿರೀಶ್ ಕಾರ್ನಾಡ್ ಮತ್ತು ಬಿ.ವಿ. ಕಾರಂತ್ ನಿರ್ದೇಶಿಸಿದ್ದಾರೆ. </p><p>ಈ ಸಿನಿಮಾದಲ್ಲಿ ಕಾಳಿಂಗ ಎಂಬ ಯುವಕ ಹಾಗೂ ಅಮೇರಿಕನ್ ಮಹಿಳೆ ಹಿಲ್ಡಾ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. </p><p>ವಿದೇಶಿ ಮಹಿಳೆಯನ್ನು ವಿವಾಹ ಆದ ಬಳಿಕ ಗ್ರಾಮಸ್ಥರ ನಿಂದನೆಗೆ ಒಳಗಾವುದು. ಧಾರ್ಮಿಕ ವಿಧಿಗಳನ್ನು ಪಾಲಿಸದ ಅವಳನ್ನು ಸಮಾಜದಿಂದ ದೂರ ಇಡಲು ಪ್ರಯತ್ನಿಸಿದಾಗ ಅವಳ ನಿಲುವುಗಳನ್ನು ಸಿನಿಮಾದಲ್ಲಿ ತೋರಿಸಲಾಗುತ್ತದೆ. </p><p>ಈ ಚಿತ್ರದಲ್ಲಿ ನಾಸಿರುದ್ದೀನ್ ಶಾ, ಲಕ್ಷ್ಮೀ ಕೃಷ್ಣಮೂರ್ತಿ, ಪೌಲಾ ಲಿಂಡ್ಸೆ ಸೇರಿದಂತೆ ಅನೇಕರು ನಟಿಸಿದ್ದಾರೆ.</p><p>ಫಿಲ್ಮ್ಫೇರ್ ಪ್ರಶಸ್ತಿ, 'ಅತ್ಯುತ್ತಮ ನಟ', 'ಅತ್ಯುತ್ತಮ ಸಿನಿಮಾಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ </p><p>ಎಸ್.ಪಿ. ರಾಮನಾಥನ್ ಅತ್ಯುತ್ತಮ ಧ್ವನಿಮುದ್ರಿಕೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.</p><p><strong>ನಾಯಿ ನೆರಳು</strong></p><p>ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ನಾಯಿ ನೆರಳು‘ ಸಿನಿಮಾವು 2006ರಲ್ಲಿ ಬಿಡುಗಡೆಯಾಯಿತು. ಪವಿತ್ರಾ ಲೋಕೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.</p><p>ಹಿಂದೂ ಧರ್ಮದಲ್ಲಿನ ಮೂಢನಂಬಿಕೆ, ಜಾತಿ ವ್ಯವಸ್ಥೆಯ ಹಾಗೂ ಸ್ತ್ರೀಯರ ಸಂಕಷ್ಟ, ವೈಚಾರಿಕತೆಯ ಕೊರತೆ, ಹಾಗೂ ವ್ಯಕ್ತಿಗಳ ನಡುವಿನ ಸಂಬಂಧಗಳಲ್ಲಿನ ಗೊಂದಲ ಈ ಚಿತ್ರದಲ್ಲಿ ಕಾಣಬಹದು. ಇದು ಜನ್ಮಾಂತರದ ಕಲ್ಪನೆ ಮತ್ತು ಅದರ ಸುತ್ತ ಬೆಳೆಯುವ ಗೊಂದಲಗಳ ಅನ್ವೇಷಣೆಯೂ ಆಗಿದೆ. </p><p>ಈ ಚಿತ್ರವು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.</p><p><strong>ಮತದಾನ</strong></p><p>ಕಾದಂಬರಿ ಆಧಾರಿತ ‘ಮತದಾನ‘ 2001ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಟಿ.ಎನ್. ಸೀತಾರಾಮ್ ನಿರ್ದೇಶಿಸಿದ್ದಾರೆ. </p><p>ಈ ಚಿತ್ರದಲ್ಲಿ ಒಬ್ಬ ವ್ಯಕ್ತಿಗೆ ಅಧಿಕಾರ ಸಿಕ್ಕಾಗ ಸದುಪಯೋಗಕ್ಕಿಂತ ಹೆಚ್ಚಾಗಿ ದುರುಪಯೋಗ ಪಡಿಸಿಕೊಳ್ಳುವ ರಾಜಕಾರಣಿಗಳ ಬಗ್ಗೆ ಹೇಳುವಂತಿದೆ.</p><p>ಈ ಸಿನಿಮಾವು ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.</p><p>ಅನಂತ್ ನಾಗ್, ದೇವರಾಜ್, ತಾರಾ, ಅವಿನಾಶ್ ಸೇರಿದಂತೆ ಅನೇಕರು ನಟಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>