ಈ ಚಿತ್ರಕ್ಕಾಗಿ ವಿಜಯ್ ಹೆಸರು ಬದಲಿಸಿಕೊಂಡಿದ್ದಾರೆ. ಚಿತ್ರದ ಟೈಟಲ್ ಕಾರ್ಡ್ನಲ್ಲಿ 'ದೇವರಕೊಂಡ ವಿಜಯ್ ಸಾಯಿ' ಎಂದು ಹೆಸರು ಬದಲಾಯಿಸಲಾಗಿದೆ. ಹಿಂದಿನ ಸಿನಿಮಾಗಳ ಸೋಲು ಹೆಸರು ಬದಲಾಗಲು ಕಾರಣ ಎನ್ನಲಾಗುತ್ತಿದೆ. ನೋಟಾ, ಟ್ಯಾಕ್ಸಿವಾಲಾ, ಡಿಯರ್ ಕಾಮ್ರೇಡ್ ಸೋಲಿನಿಂದ ಹೊರಬರಲು ವಿಜಯ್ ಹೆಸರು ಬದಲಾವಣೆಗೆ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಅರ್ಜುನ್ ರೆಡ್ಡಿ ಮತ್ತು ಗೀತ ಗೋವಿಂದಂ ನಂತರ ಬಂದ ವಿಜಯ್ ಅಭಿನಯದ ಚಿತ್ರಗಳು ಹೇಳಿಕೊಳ್ಳುವಂತಹ ಯಶಸ್ಸು ಗಳಿಸಿಲ್ಲ.