ಹುಲಿವಾನ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದ್ದ ಅವರು, ವಿಜ್ಞಾನ ಪದವೀಧರರಾಗಿದ್ದರು. ‘ಗ್ಲೋಬ್ ಥಿಯೇಟರ್’ ಎಂಬ ರಂಗತಂಡವನ್ನು ಕಟ್ಟಿ, 55 ವರ್ಷ ಕಾಲ ರಂಗಸೇವೆಯಲ್ಲಿ ತೊಡಗಿದ್ದರು. ಶೂದ್ರ ತಪಸ್ವಿ, ಚೋಮ, ಆಸ್ಫೋಟ, ಪ್ರಚಂಡ ರಾವಣದಂತಹ ಹಲವು ನಾಟಕಗಳನ್ನು ಈ ರಂಗತಂಡ ಪ್ರದರ್ಶಿಸಿದೆ. ಕುವೆಂಪು ಅವರ ‘ಜಲಗಾರ’ ನಾಟಕವನ್ನು ಅವರೆದುರೇ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದರು. ‘ಧರ್ಮದ ಸೆರೆಯಿಂದ’ ನಾಟಕ ರಚಿಸುವ ಮೂಲಕ ನಾಟಕಕಾರರಾಗಿಯೂ ಗುರುತಿಸಿಕೊಂಡಿದ್ದರು.