‘ತಾಯಿ–ಮಗಳು, ವಾಜರಹಳ್ಳಿ ಮುಖ್ಯರಸ್ತೆಯಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದರು. ವೇಗದ ಮಿತಿಯನ್ನೂ ದಾಟಿರಲಿಲ್ಲ. ಅದೇ ಮಾರ್ಗದಲ್ಲೇ ಚಾಲಕ ಮಂಜೇಗೌಡ ಲಾರಿಯನ್ನು ವೇಗವಾಗಿ ಚಲಾಯಿಸಿಕೊಂಡು ಹೊರಟಿದ್ದ. ಎದುರಿಗಿದ್ದ ಆಟೊವನ್ನು ಹಿಂದಿಕ್ಕಲು ಮುಂದಾಗಿದ್ದ ಮಂಜೇಗೌಡ, ಲಾರಿಯನ್ನು ಸ್ಕೂಟಿಗೆ ಡಿಕ್ಕಿ ಹೊಡೆಸಿದ್ದ.ಈ ಬಗ್ಗೆ ಚಾಲಕ ಹೇಳಿಕೆ ನೀಡಿದ್ದಾನೆ. ಆತನ ವಿರುದ್ಧ ಎಫ್ಐಆರ್ ದಾಖಲಾಗಿದೆ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.