<p><strong>ಬೆಂಗಳೂರು:</strong> ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಎರಡನೇ ಇನಿಂಗ್ಸ್ ಮೂರನೇ ವಾರದಲ್ಲಿ ಅಚ್ಚರಿಯ ಸಾಮಿನೇಶನ್ ಆಗಿದೆ. 9 ಸದಸ್ಯರು ಈ ಬಾರಿ ನಾಮೀನೇಟ್ ಆಗಿದ್ದು, ವೀಕ್ಷಕರ ಅಗ್ನಿಪರೀಕ್ಷೆಗೆ ಸಜ್ಜಾಗಿದ್ದಾರೆ.</p>.<p><strong>ಉರುಡುಗ, ಶುಭಾ ಪೂಂಜಾ ಸೇಫ್: </strong>ಬಿಗ್ ಬಾಸ್<strong></strong>ನಿಯಮದ ಪ್ರಕಾರ ನಾಯಕಿಯನ್ನು ನಾಮಿನೇಟ್ ಮಾಡುವಂತಿಲ್ಲ. ಹಾಗಾಗಿ,ದಿವ್ಯಾ ಉರುಡುಗ ಅವರನ್ನು ಹೊರತುಪಡಿಸಿ ಮನೆಯ ಎಲ್ಲ ಸದಸ್ಯರು ಸಹ ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಬಿಗ್ ಬಾಸ್ ಆದೇಶದ ಮೇರೆಗೆ ನಾಯಕಿಯ ಅಧಿಕಾರ ಬಳಸಿದ ದಿವ್ಯಾ ಉರುಡುಗ ಅವರು ಶುಭಾ ಪೂಂಜಾ ಅವರನ್ನು ಸೇಫ್ ಮಾಡಿದರು. ಇದರಿಂದ ಪ್ರಶಾಂತ್ ಸಂಬರಗಿ ಅಸಮಾಧಾನ ವ್ಯಕ್ತಪಡಿಸಿದ್ದೂ ಕಂಡುಬಂದಿದೆ.</p>.<p>ನಿಯಮ ಬದಲಿಸಿದ್ದಾರೆಂದು ಆರೋಪಿಸಿದ ಅರವಿಂದ್, ಮಂಜು ಹೆಸರನ್ನು ನಾಮಿನೇಟ್ ಮಾಡಿದರು. ಮಂಜು ಪಾವಗಡ ಅವರಿಂದ ಗುಂಪುಗಾರಿಕೆ ನಡೆಯುತ್ತಿದೆ ಎಂದು ಶಮಂತ್ ನಾಮಿನೇಟ್ ಮಾಡಿದರೆ, ಕಾಂಪಿಟೇಟರ್ ಎಂಬ ಕಾರಣಕ್ಕೆ ರಘು, ಮಂಜು ಹೆಸರನ್ನು ಸೂಚಿಸಿದರು.</p>.<p>ಮನೆಯಲ್ಲಿ ವಾತಾವರಣ ಹಾಳು ಮಾಡುತ್ತಾರೆ ಎಂಬ ಕಾರಣ ನೀಡಿ ಪ್ರಿಯಾಂಕಾ, ವೈಷ್ಣವಿ, ದಿವ್ಯಾ ಸುರೇಶ್, ಮಂಜು ಪಾವಗಡ ಮತ್ತಿತರರು ಚಕ್ರವರ್ತಿ ಚಂದ್ರಚೂಡ್ ಹೆಸರು ಹೇಳಿದರು. ಇದೇ ಕಾರಣಕ್ಕೆ ಪ್ರಶಾಂತ್ ಸಂಬರಗಿ ಹೆಸರು ಸಹ ಮುನ್ನಲೆಗೆ ಬಂದಿತು.</p>.<p>ಅವರ ನಡವಳಿಕೆ ನಾಟಕೀಯವಾಗಿದೆ ಎಂದು ದಿವ್ಯಾ ಸುರೇಶ್ ಹೆಸರನ್ನು ಅರವಿಂದ್ ಸೂಚಿಸಿದರು. ಪ್ರಶಾಂತ್ ಮತ್ತು ಚಂದ್ರಚೂಡ್ ಅವರು ಶುಭಾ ಅವರನ್ನು ನಾಮಿನೇಟ್ ಮಾಡಿದರಾದರೂ ಅವರ ಪ್ರಯತ್ನ ಫಲ ನೀಡಲಿಲ್ಲ.</p>.<p>ಹೀಗಾಗಿ, ಮೊದಲೇ ನಿಧಿ ಸುಬ್ಬಯ್ಯ ಅವರಿಂದ ನಾಮಿನೇಟ್ ಆಗಿದ್ದ ಕೆ.ಪಿ. ಅರವಿಂದ್ ಜೊತೆಗೆದಿವ್ಯಾ ಸುರೇಶ್, ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಪ್ರಿಯಾಂಕಾ ತಿಮ್ಮೇಶ್, ರಘು, ವೈಷ್ಣವಿ ಮತ್ತು ಶಮಂತ್ ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ವೀಕ್ಷಕರು ಹಾಕುವ ಮತಗಳ ಮೇಲೆ ಸೇಫ್ ಆಗುತ್ತಾರೆ. ಕಡಿಮೆ ಮತ ಪಡೆದವರು ಮನೆಯಿಂದ ಹೊರಹೋಗುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಎರಡನೇ ಇನಿಂಗ್ಸ್ ಮೂರನೇ ವಾರದಲ್ಲಿ ಅಚ್ಚರಿಯ ಸಾಮಿನೇಶನ್ ಆಗಿದೆ. 9 ಸದಸ್ಯರು ಈ ಬಾರಿ ನಾಮೀನೇಟ್ ಆಗಿದ್ದು, ವೀಕ್ಷಕರ ಅಗ್ನಿಪರೀಕ್ಷೆಗೆ ಸಜ್ಜಾಗಿದ್ದಾರೆ.</p>.<p><strong>ಉರುಡುಗ, ಶುಭಾ ಪೂಂಜಾ ಸೇಫ್: </strong>ಬಿಗ್ ಬಾಸ್<strong></strong>ನಿಯಮದ ಪ್ರಕಾರ ನಾಯಕಿಯನ್ನು ನಾಮಿನೇಟ್ ಮಾಡುವಂತಿಲ್ಲ. ಹಾಗಾಗಿ,ದಿವ್ಯಾ ಉರುಡುಗ ಅವರನ್ನು ಹೊರತುಪಡಿಸಿ ಮನೆಯ ಎಲ್ಲ ಸದಸ್ಯರು ಸಹ ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಬಿಗ್ ಬಾಸ್ ಆದೇಶದ ಮೇರೆಗೆ ನಾಯಕಿಯ ಅಧಿಕಾರ ಬಳಸಿದ ದಿವ್ಯಾ ಉರುಡುಗ ಅವರು ಶುಭಾ ಪೂಂಜಾ ಅವರನ್ನು ಸೇಫ್ ಮಾಡಿದರು. ಇದರಿಂದ ಪ್ರಶಾಂತ್ ಸಂಬರಗಿ ಅಸಮಾಧಾನ ವ್ಯಕ್ತಪಡಿಸಿದ್ದೂ ಕಂಡುಬಂದಿದೆ.</p>.<p>ನಿಯಮ ಬದಲಿಸಿದ್ದಾರೆಂದು ಆರೋಪಿಸಿದ ಅರವಿಂದ್, ಮಂಜು ಹೆಸರನ್ನು ನಾಮಿನೇಟ್ ಮಾಡಿದರು. ಮಂಜು ಪಾವಗಡ ಅವರಿಂದ ಗುಂಪುಗಾರಿಕೆ ನಡೆಯುತ್ತಿದೆ ಎಂದು ಶಮಂತ್ ನಾಮಿನೇಟ್ ಮಾಡಿದರೆ, ಕಾಂಪಿಟೇಟರ್ ಎಂಬ ಕಾರಣಕ್ಕೆ ರಘು, ಮಂಜು ಹೆಸರನ್ನು ಸೂಚಿಸಿದರು.</p>.<p>ಮನೆಯಲ್ಲಿ ವಾತಾವರಣ ಹಾಳು ಮಾಡುತ್ತಾರೆ ಎಂಬ ಕಾರಣ ನೀಡಿ ಪ್ರಿಯಾಂಕಾ, ವೈಷ್ಣವಿ, ದಿವ್ಯಾ ಸುರೇಶ್, ಮಂಜು ಪಾವಗಡ ಮತ್ತಿತರರು ಚಕ್ರವರ್ತಿ ಚಂದ್ರಚೂಡ್ ಹೆಸರು ಹೇಳಿದರು. ಇದೇ ಕಾರಣಕ್ಕೆ ಪ್ರಶಾಂತ್ ಸಂಬರಗಿ ಹೆಸರು ಸಹ ಮುನ್ನಲೆಗೆ ಬಂದಿತು.</p>.<p>ಅವರ ನಡವಳಿಕೆ ನಾಟಕೀಯವಾಗಿದೆ ಎಂದು ದಿವ್ಯಾ ಸುರೇಶ್ ಹೆಸರನ್ನು ಅರವಿಂದ್ ಸೂಚಿಸಿದರು. ಪ್ರಶಾಂತ್ ಮತ್ತು ಚಂದ್ರಚೂಡ್ ಅವರು ಶುಭಾ ಅವರನ್ನು ನಾಮಿನೇಟ್ ಮಾಡಿದರಾದರೂ ಅವರ ಪ್ರಯತ್ನ ಫಲ ನೀಡಲಿಲ್ಲ.</p>.<p>ಹೀಗಾಗಿ, ಮೊದಲೇ ನಿಧಿ ಸುಬ್ಬಯ್ಯ ಅವರಿಂದ ನಾಮಿನೇಟ್ ಆಗಿದ್ದ ಕೆ.ಪಿ. ಅರವಿಂದ್ ಜೊತೆಗೆದಿವ್ಯಾ ಸುರೇಶ್, ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಪ್ರಿಯಾಂಕಾ ತಿಮ್ಮೇಶ್, ರಘು, ವೈಷ್ಣವಿ ಮತ್ತು ಶಮಂತ್ ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ವೀಕ್ಷಕರು ಹಾಕುವ ಮತಗಳ ಮೇಲೆ ಸೇಫ್ ಆಗುತ್ತಾರೆ. ಕಡಿಮೆ ಮತ ಪಡೆದವರು ಮನೆಯಿಂದ ಹೊರಹೋಗುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>