<p>ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ 12ನೇ ಆವೃತ್ತಿ ಭಾನುವಾರ ಆರಂಭಗೊಂಡಿದೆ. ಈ ಬಾರಿಯ ಬಿಗ್ಬಾಸ್ಗೆ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. </p>.ಬಿಗ್ಬಾಸ್ ಮನೆಗೆ ಕಾಲಿಟ್ಟ ದಿನವೇ ಈ 3 ಸ್ಪರ್ಧಿಗಳಿಗೆ ಶಾಕ್: ಅಂತದ್ದೇನಾಯ್ತು? .ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಎರಡನೇ ಸ್ಪರ್ಧಿ: ಯಾರು ಈ ಮಂಜು ಭಾಷಿಣಿ?.<p>ಕಿಚ್ಚ ಸುದೀಪ್ ಅವರು ಬಿಗ್ಬಾಸ್ ವೇದಿಕೆಗೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದರು. ಕಿಚ್ಚ ಸುದೀಪ್ ವೇದಿಕೆಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಕಿಚ್ಚ.. ಕಿಚ್ಚ ಎಂದು ಕೂಗಿದ್ದಾರೆ. ಜೊತೆಗೆ ಬಿಗ್ಬಾಸ್ ಕೂಡ ಕಿಚ್ಚ ಸುದೀಪ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.</p><p><strong>‘ಪ್ರೀತಿಯ ಸುದೀಪ್.. ಬಿಗ್ಬಾಸ್ ಸೀಸನ್ 12ಕ್ಕೆ ನಿಮಗೆ ಸ್ವಾಗತ. ಕನ್ನಡ ಪರಂಪರೆಯ ರೂವಾರಿಗಳಾಗಿರುವ ನೀವು ಈ ಕಾರ್ಯಕ್ರಮದಲ್ಲಿ ಮುಂದುವರೆಯುತ್ತಿರುವುದು ಬಿಗ್ಬಾಸ್ ಹಾಗೂ ತಂಡಕ್ಕೆ ಇನ್ನಷ್ಟೂ ಹುರುಪು ತಂದಿದೆ. ಕೋಟ್ಯಂತರ ಅಭಿಮಾನಿಗಳ ಮಧ್ಯೆ ನಿಮ್ಮ ಅತಿ ದೊಡ್ಡ ಅಭಿಮಾನಿ ನಿಮ್ಮ ತಾಯಿ ಸರೋಜಾರವರ ಹಾರೈಕೆ ಇಲ್ಲದೆ ಈ ಸೀಸನ್ ಆರಂಭವಾಗುತ್ತಿರುವುದು ನಿಮ್ಮ ಜೊತೆಗೆ ಬಿಗ್ಬಾಸ್ ತಂಡಕ್ಕೆ ನೋವು ಉಂಟಾಗಿದೆ. ಪ್ರತ್ಯಕ್ಷವಾಗಿ ಅವರು ನಮ್ಮ ಜೊತೆಗೆ ಇಲ್ಲವಾದರೂ ಪರೋಕ್ಷವಾಗಿ ಅವರ ನೆನಪುಗಳು ಸದಾ ನಿಮ್ಮ ಹಾಗೂ ನಮ್ಮ ಜೊತೆಗೆ ಇರಲಿ ಎಂದು ಬಿಗ್ಬಾಸ್ ಬಯಸುತ್ತಾರೆ’ ಎಂದರು.</strong></p>.<p>ಶೋ ಆರಂಭಕ್ಕೂ ಮುನ್ನ ಬಿಗ್ಬಾಸ್ ತಂಡ ಕಿಚ್ಚ ಸುದೀಪ್ ಅವರಿಗೆ ಕುಂಕುಮ, ವಿಭೂತಿ ಹಾಗೂ ತಾಯಿ ಸರೋಜಾ ಅವರು ಧರಿಸಿಕೊಳ್ಳುತ್ತಿದ್ದ ಶಾಲ್ ಅನ್ನು ವೇದಿಕೆಗೆ ತಂದು ಕೊಟ್ಟಿದ್ದಾರೆ. ಆಗ ಕಿಚ್ಚ ಸುದೀಪ್ ಕುಂಕುಮ ಹಾಗೂ ವಿಭೂತಿಯನ್ನು ಹಣೆಗೆ ಇಟ್ಟುಕೊಂಡಿದ್ದಾರೆ.</p><p>ಇದಾದ ಬಳಿಕ ಮಾತಾಡಿದ ಕಿಚ್ಚ, ಈ ಎರಡು ಡಬ್ಬದಲ್ಲಿ ಸಾಯಿಬಾಬಾ ಅವರ ವಿಭೂತಿ, ಇನ್ನೊಂದರಲ್ಲಿ ಆಂಜನೇಯ ಕುಂಕುಮವನ್ನು ನನ್ನ ತಾಯಿ ಇಡುತ್ತಿದ್ದರು ಎಂದರು. ಆಗ ಟಿವಿ ಪರದೆ ಮೇಲೆ ಕಿಚ್ಚ ಸುದೀಪ್ ತಾಯಿ ಅದೇ ಶಾಲ್ ಧರಿಸಿಕೊಂಡು ಕುಳಿತುಕೊಂಡ ಫೋಟೊವನ್ನು ಹಾಕಲಾಯಿತು. ಈ ಫೋಟೊ ನೋಡುತ್ತಿದ್ದಂತೆ ಕಿಚ್ಚ ಸುದೀಪ್ ಭಾವುಕರಾದರು. </p>.<p>ಸದ್ಯ ಈ ಬಾರಿಯ ಬಿಗ್ಬಾಸ್ ಮನೆಗೆ ಒಟ್ಟು 19 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈ ಸಲ ಬಿಗ್ಬಾಸ್ ‘ಒಂಟಿ ವರ್ಸಸ್ ಜಂಟಿ’ ಎಂಬ ಪರಿಕಲ್ಪನೆಯನ್ನು ಒಳಗೊಂಡಿದೆ. ಈಗಾಗಲೇ ಒಂಟಿ ತಂಡದಲ್ಲಿ ಕಾಕ್ರೋಚ್ ಸುಧಿ, ಜಾಹ್ನವಿ, ಧ್ರುವಂತ್, ಮಲ್ಲಮ್ಮ, ಅಶ್ವಿನಿ ಗೌಡ ಹಾಗೂ ಧನುಷ್ ಗೌಡ ಇದ್ದಾರೆ. </p><p>ಇನ್ನು, ಜಂಟಿ ತಂಡದಲ್ಲಿ ಕರಿಬಸಪ್ಪ– ಅಮಿತ್ ಪವಾರ್, ರಾಶಿಕಾ ಶೆಟ್ಟಿ - ಮಂಜು ಭಾಷಿಣಿ, ಡಾಗ್ ಸತೀಶ್ - ಚಂದ್ರಪ್ರಭ, ಗಿಲ್ಲಿ ನಟ - ಕಾವ್ಯ ಶೈವ, ಅಶ್ವಿನಿ - ಅಭಿಷೇಕ್ ಶ್ರೀಕಾಂತ್ ಜಂಟಿಯಾಗಿದ್ದಾರೆ. ಅಲ್ಲದೆ ಸ್ಪಂದನಾ ಸೋಮಣ್ಣ, ರಕ್ಷಿತಾ ಶೆಟ್ಟಿ ಹಾಗೂ ಮಾಳು ನಿಪನಾಳ ಇಂದು ರಾತ್ರಿಯ ಸಂಚಿಕೆಯಲ್ಲಿ ಯಾವ ತಂಡಕ್ಕೆ ಹೋಗುತ್ತಾರೆ ಎಂದು ಗೊತ್ತಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ 12ನೇ ಆವೃತ್ತಿ ಭಾನುವಾರ ಆರಂಭಗೊಂಡಿದೆ. ಈ ಬಾರಿಯ ಬಿಗ್ಬಾಸ್ಗೆ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. </p>.ಬಿಗ್ಬಾಸ್ ಮನೆಗೆ ಕಾಲಿಟ್ಟ ದಿನವೇ ಈ 3 ಸ್ಪರ್ಧಿಗಳಿಗೆ ಶಾಕ್: ಅಂತದ್ದೇನಾಯ್ತು? .ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಎರಡನೇ ಸ್ಪರ್ಧಿ: ಯಾರು ಈ ಮಂಜು ಭಾಷಿಣಿ?.<p>ಕಿಚ್ಚ ಸುದೀಪ್ ಅವರು ಬಿಗ್ಬಾಸ್ ವೇದಿಕೆಗೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದರು. ಕಿಚ್ಚ ಸುದೀಪ್ ವೇದಿಕೆಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಕಿಚ್ಚ.. ಕಿಚ್ಚ ಎಂದು ಕೂಗಿದ್ದಾರೆ. ಜೊತೆಗೆ ಬಿಗ್ಬಾಸ್ ಕೂಡ ಕಿಚ್ಚ ಸುದೀಪ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.</p><p><strong>‘ಪ್ರೀತಿಯ ಸುದೀಪ್.. ಬಿಗ್ಬಾಸ್ ಸೀಸನ್ 12ಕ್ಕೆ ನಿಮಗೆ ಸ್ವಾಗತ. ಕನ್ನಡ ಪರಂಪರೆಯ ರೂವಾರಿಗಳಾಗಿರುವ ನೀವು ಈ ಕಾರ್ಯಕ್ರಮದಲ್ಲಿ ಮುಂದುವರೆಯುತ್ತಿರುವುದು ಬಿಗ್ಬಾಸ್ ಹಾಗೂ ತಂಡಕ್ಕೆ ಇನ್ನಷ್ಟೂ ಹುರುಪು ತಂದಿದೆ. ಕೋಟ್ಯಂತರ ಅಭಿಮಾನಿಗಳ ಮಧ್ಯೆ ನಿಮ್ಮ ಅತಿ ದೊಡ್ಡ ಅಭಿಮಾನಿ ನಿಮ್ಮ ತಾಯಿ ಸರೋಜಾರವರ ಹಾರೈಕೆ ಇಲ್ಲದೆ ಈ ಸೀಸನ್ ಆರಂಭವಾಗುತ್ತಿರುವುದು ನಿಮ್ಮ ಜೊತೆಗೆ ಬಿಗ್ಬಾಸ್ ತಂಡಕ್ಕೆ ನೋವು ಉಂಟಾಗಿದೆ. ಪ್ರತ್ಯಕ್ಷವಾಗಿ ಅವರು ನಮ್ಮ ಜೊತೆಗೆ ಇಲ್ಲವಾದರೂ ಪರೋಕ್ಷವಾಗಿ ಅವರ ನೆನಪುಗಳು ಸದಾ ನಿಮ್ಮ ಹಾಗೂ ನಮ್ಮ ಜೊತೆಗೆ ಇರಲಿ ಎಂದು ಬಿಗ್ಬಾಸ್ ಬಯಸುತ್ತಾರೆ’ ಎಂದರು.</strong></p>.<p>ಶೋ ಆರಂಭಕ್ಕೂ ಮುನ್ನ ಬಿಗ್ಬಾಸ್ ತಂಡ ಕಿಚ್ಚ ಸುದೀಪ್ ಅವರಿಗೆ ಕುಂಕುಮ, ವಿಭೂತಿ ಹಾಗೂ ತಾಯಿ ಸರೋಜಾ ಅವರು ಧರಿಸಿಕೊಳ್ಳುತ್ತಿದ್ದ ಶಾಲ್ ಅನ್ನು ವೇದಿಕೆಗೆ ತಂದು ಕೊಟ್ಟಿದ್ದಾರೆ. ಆಗ ಕಿಚ್ಚ ಸುದೀಪ್ ಕುಂಕುಮ ಹಾಗೂ ವಿಭೂತಿಯನ್ನು ಹಣೆಗೆ ಇಟ್ಟುಕೊಂಡಿದ್ದಾರೆ.</p><p>ಇದಾದ ಬಳಿಕ ಮಾತಾಡಿದ ಕಿಚ್ಚ, ಈ ಎರಡು ಡಬ್ಬದಲ್ಲಿ ಸಾಯಿಬಾಬಾ ಅವರ ವಿಭೂತಿ, ಇನ್ನೊಂದರಲ್ಲಿ ಆಂಜನೇಯ ಕುಂಕುಮವನ್ನು ನನ್ನ ತಾಯಿ ಇಡುತ್ತಿದ್ದರು ಎಂದರು. ಆಗ ಟಿವಿ ಪರದೆ ಮೇಲೆ ಕಿಚ್ಚ ಸುದೀಪ್ ತಾಯಿ ಅದೇ ಶಾಲ್ ಧರಿಸಿಕೊಂಡು ಕುಳಿತುಕೊಂಡ ಫೋಟೊವನ್ನು ಹಾಕಲಾಯಿತು. ಈ ಫೋಟೊ ನೋಡುತ್ತಿದ್ದಂತೆ ಕಿಚ್ಚ ಸುದೀಪ್ ಭಾವುಕರಾದರು. </p>.<p>ಸದ್ಯ ಈ ಬಾರಿಯ ಬಿಗ್ಬಾಸ್ ಮನೆಗೆ ಒಟ್ಟು 19 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈ ಸಲ ಬಿಗ್ಬಾಸ್ ‘ಒಂಟಿ ವರ್ಸಸ್ ಜಂಟಿ’ ಎಂಬ ಪರಿಕಲ್ಪನೆಯನ್ನು ಒಳಗೊಂಡಿದೆ. ಈಗಾಗಲೇ ಒಂಟಿ ತಂಡದಲ್ಲಿ ಕಾಕ್ರೋಚ್ ಸುಧಿ, ಜಾಹ್ನವಿ, ಧ್ರುವಂತ್, ಮಲ್ಲಮ್ಮ, ಅಶ್ವಿನಿ ಗೌಡ ಹಾಗೂ ಧನುಷ್ ಗೌಡ ಇದ್ದಾರೆ. </p><p>ಇನ್ನು, ಜಂಟಿ ತಂಡದಲ್ಲಿ ಕರಿಬಸಪ್ಪ– ಅಮಿತ್ ಪವಾರ್, ರಾಶಿಕಾ ಶೆಟ್ಟಿ - ಮಂಜು ಭಾಷಿಣಿ, ಡಾಗ್ ಸತೀಶ್ - ಚಂದ್ರಪ್ರಭ, ಗಿಲ್ಲಿ ನಟ - ಕಾವ್ಯ ಶೈವ, ಅಶ್ವಿನಿ - ಅಭಿಷೇಕ್ ಶ್ರೀಕಾಂತ್ ಜಂಟಿಯಾಗಿದ್ದಾರೆ. ಅಲ್ಲದೆ ಸ್ಪಂದನಾ ಸೋಮಣ್ಣ, ರಕ್ಷಿತಾ ಶೆಟ್ಟಿ ಹಾಗೂ ಮಾಳು ನಿಪನಾಳ ಇಂದು ರಾತ್ರಿಯ ಸಂಚಿಕೆಯಲ್ಲಿ ಯಾವ ತಂಡಕ್ಕೆ ಹೋಗುತ್ತಾರೆ ಎಂದು ಗೊತ್ತಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>