ಮಧುರ ದಾಂಪತ್ಯಕ್ಕೆ ಉದಾಹರಣೆಯಾಗಿದ್ದ ಮುದ್ದು ಲಕ್ಷ್ಮಿ ಹಾಗೂ ಧೃವಂತ್ ದಂಪತಿಗಳು ಬೇರೆಯಾಗಿ ಸಾಕಷ್ಟು ಸಮಯವಾಗಿದೆ. ಆದರೆ, ಬದುಕು ಗಂಡ -ಹೆಂಡತಿ ಇಬ್ಬರಿಗೂ ಈಗ ಮತ್ತೆ ಒಂದಾಗುವ ಅವಕಾಶ ಕಲ್ಪಿಸಿದೆ. ಆದರೆ, ಮತ್ತೊಮ್ಮ ಇವರಿಬ್ಬರ ಬದುಕಲ್ಲಿ ಮುಳ್ಳಾಗಲಿದ್ದಾಳೆ ಶಾರ್ವರಿ. ಮುದ್ದು ಲಕ್ಷ್ಮಿ ಹಾಗೂ ಧೃವಂತ್ ಒಂದಾಗಲಿದ್ದಾರೆ ಎಂಬ ಸತ್ಯ ಗೊತ್ತಾಗುತ್ತಿದ್ದ ಹಾಗೆ ಮುದ್ದುಲಕ್ಷ್ಮಿಯ ಮಗಳು ದೃಷ್ಟಿಯನ್ನು ಶಾರ್ವರಿ ಅಪಹರಿಸುತ್ತಾಳೆ. ಲಕ್ಷ್ಮಿಯನ್ನು ಬ್ಲ್ಯಾಕ್ ಮೇಲ್ ಮಾಡಿ ಮುದ್ದು ಲಕ್ಷ್ಮಿ ಮತ್ತುಧೃವಂತ್ ಒಂದಾಗದ ಹಾಗೆ ತಂತ್ರ ಮಾಡುತ್ತಾಳೆ. ಆದರೆ, ಅಪಹರಣವಾದದೃಷ್ಟಿ ‘ಪ್ರೇಮಲೋಕ’ದ ನಾಯಕ ಸೂರ್ಯನಿಗೆ ಸಿಗುತ್ತಾಳೆ. ದೃಷ್ಟಿಯನ್ನು ಮುದ್ದುಲಕ್ಷ್ಮಿಗೆ ವಾಪಾಸು ತಲುಪಿಸುವ ಪ್ರಯತ್ನ ಮಾಡಿ ತಾನೇ ದೊಡ್ಡ ಸಂಕಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾನೆ ಸೂರ್ಯ. ಅಂತಿಮವಾಗಿ ಶಾರ್ವರಿ ಶಕುನಿ ತಂತ್ರಗಾರಿಕೆ ಪ್ರಯೋಗ ಮಾಡಿ, ಎಲ್ಲಾ ಅಡೆತಡೆಗಳನ್ನು ದಾಟಿ ಮುದ್ದು ಬದುಕಿಗೆ ಮುಂಚಿಗಿಂತಲೂ ದೊಡ್ಡ ಸಮಸ್ಯೆಯಾಗಿ ಕಾಡುತ್ತಾಳೆ.