ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದತ್ಯನಾಥ ಅವರು ಇರುವ 29 ನಿಮಿಷಗಳ ವಿಡಿಯೊವೊಂದು ವೈರಲ್ ಆಗಿದೆ. ಆದಿತ್ಯನಾಥ ಅವರು ಬೂದಿಯನ್ನು ತಮ್ಮ ಹಣೆಗೆ ಹಚ್ಚಿಕೊಳ್ಳುವುದು ಮತ್ತು ಇತರರ ಹಣೆಗೆ ಹಚ್ಚುವುದು ವಿಡಿಯೊದಲ್ಲಿ ಸೆರೆ ಆಗಿದೆ. ಉತ್ತರ ಪ್ರದೇಶದ ಯೋಧರೊಬ್ಬರು ಹುತಾತ್ಮರಾದರು. ಯೋಧನನ್ನು ಸಂಸ್ಕಾರ ಮಾಡಿದ ಬೂದಿಯನ್ನು ಹಣೆಗೆ ಹಚ್ಚಿಕೊಳ್ಳುವ ಮೂಲಕ ಯೋಧನಿಗೆ ಅವರು ಗೌರವ ತೋರಿದ್ದಾರೆ.ಯೋಗಿ ಅವರು ಬಹುದೊಡ್ಡ ಸಂತರು ಎಂಬ ಮಾಹಿತಿ ಜೊತೆಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.