ದೆಹಲಿ–ಹರಿಯಾಣ ಗಡಿಯಲ್ಲಿ ಬೃಹತ್ ಸಂಖ್ಯೆಯ ರೈತರು ಬೀಡುಬಿಟ್ಟಿದ್ದು, ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಭಾರತದ ರಾಷ್ಟ್ರಧ್ವಜಕ್ಕೆ ರೈತರೊಬ್ಬರು ಅಪಮಾನ ಮಾಡಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇವರು ನಿಜವಾಗಿಯೂ ರೈತರೇ? ಎಂದು ಪ್ರಶ್ನಿಸಿರುವ ಸಾಮಾಜಿಕ ಜಾಲತಾಣ ಬಳಕೆದಾರರು, ಇದು ದೇಶದ್ರೋಹಕ್ಕೆ ಸಮ ಎಂದು ಕಿಡಿ ಕಾರಿದ್ದಾರೆ.