<p>ಚಳಿಗಾಲದ ಶೀತ ವಾತಾವರಣ ಹಾಗೂ ಶುಷ್ಕ ಗಾಳಿಯಿಂದಾಗಿ ಪಾದಗಳ ಚರ್ಮ ಒಣಗಿ ಬಿರುಕು ಉಂಟಾಗುತ್ತದೆ. ಈ ಬಿರುಕುಗಳು ನೋವು ಉಂಟು ಮಾಡುದರ ಜೊತೆಗೆ ಮುಜೂಗರಕ್ಕೂ ಕಾರಣವಾಗಬಹುದು. ಹಾಗಿದ್ದರೆ, ಚಳಿಗಾಲದಲ್ಲಿ ಪಾದಗಳ ಬಿರುಕಿಗೆ ಕಾರಣ ಮತ್ತು ಪರಿಹಾರಗಳೇನು ಎಂಬುದನ್ನು ತಿಳಿಯೋಣ.</p>.ಚಳಿಗಾಲ: ಆರೋಗ್ಯ ರಕ್ಷಣೆಯೇ ಸವಾಲು.ಚಳಿಗಾಲದಲ್ಲಿ ತ್ವಚೆ, ಕೂದಲಿನ ಆರೈಕೆ ಹೀಗಿರಲಿ.<p><strong>ಪಾದ ಒಡೆಯಲು ಕಾರಣಗಳು: </strong></p><p>ಚಳಿಗಾಲದಲ್ಲಿ ವಾತಾವರಣದಲ್ಲಿರುವ ತೇವಾಂಶ ಕಡಿಮೆಯಾತ್ತದೆ. ಇದರಿಂದಾಗಿ ಚರ್ಮ ತನ್ನ ನೈಸರ್ಗಿಕ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಹೆಚ್ಚು ಬಿಸಿಯುಳ್ಳ ನೀರಿನಲ್ಲಿ ಸ್ನಾನ ಮಾಡುವುದು, ದೇಹಕ್ಕೆ ಸಾಕಾಗುವಷ್ಡು ನೀರು ಕುಡಿಯದಿರುವುದು ಹಾಗೂ ಚರ್ಮದ ಆರೈಕೆಯ ಕೊರತೆ ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಲ್ಲದೇ ಮಧುಮೇಹ ಅಥವಾ ಥೈರಾಯ್ಡ್ ಸಮಸ್ಯೆಗಳು ಕೂಡ ಪಾದಗಳು ಒಡೆಯಲು ಕಾರಣವಾಗಬಹುದು.</p><p><strong>ದೈನಂದಿನ ಆರೈಕೆಯ ವಿಧಾನಗಳು:</strong></p><ul><li><p>ಪ್ರತಿದಿನ ಸಂಜೆ ಸಮಯದಲ್ಲಿ ತುಸು ಬೆಚ್ಚಗಿರುವ ನೀರಿಗೆ ಉಪ್ಪು ಅಥವಾ ಗ್ಲಿಸರಿನ್ ಹಾಕಿ 15 ರಿಂದ 20 ನಿಮಿಷಗಳ ಕಾಲ ಪಾದಗಳನ್ನು ನೆನೆಸಬೇಕು. </p></li><li><p>ನಂತರ ಮೃದುವಾದ ಟವೆಲ್ನಿಂದ ಪಾದಗಳನ್ನು ಒರೆಸಿ. ವಿಶೇಷವಾಗಿ ಬೆರಳುಗಳ ನಡುವಿನ ಭಾಗವನ್ನು ಸ್ವಚ್ಛಗೊಳಿಸಿ. ಬೆರಳುಗಳ ಮಧ್ಯೆ ಶಿಲೀಂಧ್ರದ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ.</p></li></ul><p> <strong>ಪರಿಹಾರಗಳೇನು?</strong> </p><ul><li><p><strong>ತೆಂಗಿನ ಎಣ್ಣೆ ಮತ್ತು ಜೇನುತುಪ್ಪ:</strong> ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆ ಮತ್ತು ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ, ಪಾದಗಳಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಬೇಕು. ಈ ಮಿಶ್ರಣವು ಚರ್ಮಕ್ಕೆ ಪೋಷಣೆ ನೀಡುತ್ತದೆ ಮತ್ತು ಪಾದದ ಬಿರುಕನ್ನು ಗುಣಪಡಿಸುತ್ತದೆ.</p></li><li><p><strong>ಪೆಟ್ರೋಲಿಯಂ ಜೆಲ್ಲಿ:</strong> ಸ್ನಾನದ ನಂತರ ಪಾದಗಳು ತುಸು ತೇವವಿರುವಾಗಲೇ ಪೆಟ್ರೋಲಿಯಂ ಜೆಲ್ಲಿ ಹಚ್ಚುವುದು ಅತ್ಯಂತ ಪರಿಣಾಮಕಾರಿ. ಇದನ್ನು ಹಚ್ಚುವುದರಿಂದ ಚರ್ಮದಲ್ಲಿ ತೇವಾಂಶ ಉಳಿಸಿಕೊಳ್ಳಲು ಸಹಾಯವಾಗುತ್ತದೆ.</p></li><li><p><strong>ಅರಳಿ ಎಣ್ಣೆ:</strong> ಅರಳಿ ಎಣ್ಣೆಯನ್ನು ಉಗುರು ಬೆಚ್ಚಗೆ ಕಾಯಿಸಿ ಪಾದಗಳಿಗೆ ಹಚ್ಚಿ ಮಸಾಜ್ ಮಾಡಿದರೆ ಚರ್ಮವು ಮೃದುವಾಗುತ್ತದೆ. ‘ವಿಟಮಿನ್ ಇ’ ಯುಕ್ತವಾದ ಈ ಎಣ್ಣೆ ಚರ್ಮಕ್ಕೆ ಪೋಷಣೆ ನೀಡುತ್ತದೆ.</p></li><li><p><strong>ಎಕ್ಸ್ಫೋಲಿಯೇಷನ್ ಮತ್ತು ಸ್ಕ್ರಬಿಂಗ್:</strong> ವಾರಕ್ಕೆ ಎರಡು, ಮೂರು ಬಾರಿ ಪಾದಗಳಿಗೆ ಸ್ಕ್ರಬಿಂಗ್ ಮಾಡುವುದು ಅಗತ್ಯ. ಅಕ್ಕಿ ಹಿಟ್ಟು, ಜೇನುತುಪ್ಪ ಮತ್ತು ನಿಂಬೆ ರಸವನ್ನು ಬೆರೆಸಿ ಮನೆಯಲ್ಲಿಯೇ ನೈಸರ್ಗಿಕ ಸ್ಕ್ರಬ್ ತಯಾರಿಸಬಹುದು. ಇದನ್ನು ವೃತ್ತಾಕಾರದ ಚಲನೆಯಲ್ಲಿ ಪಾದಗಳಿಗೆ ಹಚ್ಚಿ, ಬಳಿಕ ಉಜ್ಜಿ ತೊಳೆಯಿರಿ. </p></li><li><p><strong>ಸೂಕ್ತ ಆಹಾರ ಸೇವನೆ ಮತ್ತು ನೀರು ಕುಡಿಯುವುದು:</strong> ಚರ್ಮದ ಆರೋಗ್ಯಕ್ಕೆ ಸರಿಯಾದ ಪೋಷಣೆ ಅತ್ಯಗತ್ಯ. ದಿನಕ್ಕೆ ಕನಿಷ್ಠ 8 ರಿಂದ 10 ಲೋಟ ನೀರು ಕುಡಿಯಬೇಕು. ‘ವಿಟಮಿನ್ ಇ’, ‘ಒಮೆಗಾ-3’ ಹಾಗೂ ‘ಕೊಬ್ಬಿನಾಮ್ಲ’ ಸಮೃದ್ಧವಾಗಿರುವ ಆಹಾರಗಳಾದ ಬೀಜಗಳು, ಒಣ ಹಣ್ಣುಗಳು, ಮೀನು ಮತ್ತು ಹಸಿರು ತರಕಾರಿಗಳನ್ನು ಸೇವಿಸಬೇಕು. </p></li><li><p><strong>ಪಾದರಕ್ಷೆಗಳ ಆಯ್ಕೆ:</strong> ಚಳಿಗಾಲದಲ್ಲಿ ಪಾದಗಳನ್ನು ಸಂಪೂರ್ಣವಾಗಿ ಮುಚ್ಚಿದ, ಆರಾಮದಾಯಕ ಪಾದರಕ್ಷೆಗಳನ್ನು ಧರಿಸಬೇಕು. ಹತ್ತಿ ಅಥವಾ ಉಣ್ಣೆಯ ಸಾಕ್ಸ್ ಧರಿಸುವುದರಿಂದ ಪಾದಗಳು ಬೆಚ್ಚಗೆ ಇಡಲು ಸಹಾಕಾರಿಯಾಗಿದೆ. </p></li><li><p><strong>ವೈದ್ಯಕೀಯ ಸಲಹೆ:</strong> ಒಂದು ವೇಳೆ ಪಾದದ ಬಿರುಕಿನಿಂದ ರಕ್ತಸ್ರಾವವಾದರೆ, ಸೋಂಕು ತಗುಲಿದ ಲಕ್ಷಣ ಕಂಡುಬಂದರೆ ಅಥವಾ ತೀವ್ರ ನೋವು ಇದ್ದರೆ, ತ್ವರಿತವಾಗಿ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ.</p></li><li><p>ವಿಶೇಷವಾಗಿ ಮಧುಮೇಹ ರೋಗಿಗಳು ಪಾದಗಳ ಆರೈಕೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು.</p></li></ul><p><em><strong>(ಡಾ. ಶಿರೀನ್ ಫರ್ಟಾಡೋ, ಹಿರಿಯ ಸಲಹೆಗಾರರು, ವೈದ್ಯಕೀಯ ಮತ್ತು ಸೌಂದರ್ಯ ಚರ್ಮರೋಗ ತಜ್ಞೆ, ಆಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಳಿಗಾಲದ ಶೀತ ವಾತಾವರಣ ಹಾಗೂ ಶುಷ್ಕ ಗಾಳಿಯಿಂದಾಗಿ ಪಾದಗಳ ಚರ್ಮ ಒಣಗಿ ಬಿರುಕು ಉಂಟಾಗುತ್ತದೆ. ಈ ಬಿರುಕುಗಳು ನೋವು ಉಂಟು ಮಾಡುದರ ಜೊತೆಗೆ ಮುಜೂಗರಕ್ಕೂ ಕಾರಣವಾಗಬಹುದು. ಹಾಗಿದ್ದರೆ, ಚಳಿಗಾಲದಲ್ಲಿ ಪಾದಗಳ ಬಿರುಕಿಗೆ ಕಾರಣ ಮತ್ತು ಪರಿಹಾರಗಳೇನು ಎಂಬುದನ್ನು ತಿಳಿಯೋಣ.</p>.ಚಳಿಗಾಲ: ಆರೋಗ್ಯ ರಕ್ಷಣೆಯೇ ಸವಾಲು.ಚಳಿಗಾಲದಲ್ಲಿ ತ್ವಚೆ, ಕೂದಲಿನ ಆರೈಕೆ ಹೀಗಿರಲಿ.<p><strong>ಪಾದ ಒಡೆಯಲು ಕಾರಣಗಳು: </strong></p><p>ಚಳಿಗಾಲದಲ್ಲಿ ವಾತಾವರಣದಲ್ಲಿರುವ ತೇವಾಂಶ ಕಡಿಮೆಯಾತ್ತದೆ. ಇದರಿಂದಾಗಿ ಚರ್ಮ ತನ್ನ ನೈಸರ್ಗಿಕ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಹೆಚ್ಚು ಬಿಸಿಯುಳ್ಳ ನೀರಿನಲ್ಲಿ ಸ್ನಾನ ಮಾಡುವುದು, ದೇಹಕ್ಕೆ ಸಾಕಾಗುವಷ್ಡು ನೀರು ಕುಡಿಯದಿರುವುದು ಹಾಗೂ ಚರ್ಮದ ಆರೈಕೆಯ ಕೊರತೆ ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಲ್ಲದೇ ಮಧುಮೇಹ ಅಥವಾ ಥೈರಾಯ್ಡ್ ಸಮಸ್ಯೆಗಳು ಕೂಡ ಪಾದಗಳು ಒಡೆಯಲು ಕಾರಣವಾಗಬಹುದು.</p><p><strong>ದೈನಂದಿನ ಆರೈಕೆಯ ವಿಧಾನಗಳು:</strong></p><ul><li><p>ಪ್ರತಿದಿನ ಸಂಜೆ ಸಮಯದಲ್ಲಿ ತುಸು ಬೆಚ್ಚಗಿರುವ ನೀರಿಗೆ ಉಪ್ಪು ಅಥವಾ ಗ್ಲಿಸರಿನ್ ಹಾಕಿ 15 ರಿಂದ 20 ನಿಮಿಷಗಳ ಕಾಲ ಪಾದಗಳನ್ನು ನೆನೆಸಬೇಕು. </p></li><li><p>ನಂತರ ಮೃದುವಾದ ಟವೆಲ್ನಿಂದ ಪಾದಗಳನ್ನು ಒರೆಸಿ. ವಿಶೇಷವಾಗಿ ಬೆರಳುಗಳ ನಡುವಿನ ಭಾಗವನ್ನು ಸ್ವಚ್ಛಗೊಳಿಸಿ. ಬೆರಳುಗಳ ಮಧ್ಯೆ ಶಿಲೀಂಧ್ರದ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ.</p></li></ul><p> <strong>ಪರಿಹಾರಗಳೇನು?</strong> </p><ul><li><p><strong>ತೆಂಗಿನ ಎಣ್ಣೆ ಮತ್ತು ಜೇನುತುಪ್ಪ:</strong> ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆ ಮತ್ತು ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ, ಪಾದಗಳಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಬೇಕು. ಈ ಮಿಶ್ರಣವು ಚರ್ಮಕ್ಕೆ ಪೋಷಣೆ ನೀಡುತ್ತದೆ ಮತ್ತು ಪಾದದ ಬಿರುಕನ್ನು ಗುಣಪಡಿಸುತ್ತದೆ.</p></li><li><p><strong>ಪೆಟ್ರೋಲಿಯಂ ಜೆಲ್ಲಿ:</strong> ಸ್ನಾನದ ನಂತರ ಪಾದಗಳು ತುಸು ತೇವವಿರುವಾಗಲೇ ಪೆಟ್ರೋಲಿಯಂ ಜೆಲ್ಲಿ ಹಚ್ಚುವುದು ಅತ್ಯಂತ ಪರಿಣಾಮಕಾರಿ. ಇದನ್ನು ಹಚ್ಚುವುದರಿಂದ ಚರ್ಮದಲ್ಲಿ ತೇವಾಂಶ ಉಳಿಸಿಕೊಳ್ಳಲು ಸಹಾಯವಾಗುತ್ತದೆ.</p></li><li><p><strong>ಅರಳಿ ಎಣ್ಣೆ:</strong> ಅರಳಿ ಎಣ್ಣೆಯನ್ನು ಉಗುರು ಬೆಚ್ಚಗೆ ಕಾಯಿಸಿ ಪಾದಗಳಿಗೆ ಹಚ್ಚಿ ಮಸಾಜ್ ಮಾಡಿದರೆ ಚರ್ಮವು ಮೃದುವಾಗುತ್ತದೆ. ‘ವಿಟಮಿನ್ ಇ’ ಯುಕ್ತವಾದ ಈ ಎಣ್ಣೆ ಚರ್ಮಕ್ಕೆ ಪೋಷಣೆ ನೀಡುತ್ತದೆ.</p></li><li><p><strong>ಎಕ್ಸ್ಫೋಲಿಯೇಷನ್ ಮತ್ತು ಸ್ಕ್ರಬಿಂಗ್:</strong> ವಾರಕ್ಕೆ ಎರಡು, ಮೂರು ಬಾರಿ ಪಾದಗಳಿಗೆ ಸ್ಕ್ರಬಿಂಗ್ ಮಾಡುವುದು ಅಗತ್ಯ. ಅಕ್ಕಿ ಹಿಟ್ಟು, ಜೇನುತುಪ್ಪ ಮತ್ತು ನಿಂಬೆ ರಸವನ್ನು ಬೆರೆಸಿ ಮನೆಯಲ್ಲಿಯೇ ನೈಸರ್ಗಿಕ ಸ್ಕ್ರಬ್ ತಯಾರಿಸಬಹುದು. ಇದನ್ನು ವೃತ್ತಾಕಾರದ ಚಲನೆಯಲ್ಲಿ ಪಾದಗಳಿಗೆ ಹಚ್ಚಿ, ಬಳಿಕ ಉಜ್ಜಿ ತೊಳೆಯಿರಿ. </p></li><li><p><strong>ಸೂಕ್ತ ಆಹಾರ ಸೇವನೆ ಮತ್ತು ನೀರು ಕುಡಿಯುವುದು:</strong> ಚರ್ಮದ ಆರೋಗ್ಯಕ್ಕೆ ಸರಿಯಾದ ಪೋಷಣೆ ಅತ್ಯಗತ್ಯ. ದಿನಕ್ಕೆ ಕನಿಷ್ಠ 8 ರಿಂದ 10 ಲೋಟ ನೀರು ಕುಡಿಯಬೇಕು. ‘ವಿಟಮಿನ್ ಇ’, ‘ಒಮೆಗಾ-3’ ಹಾಗೂ ‘ಕೊಬ್ಬಿನಾಮ್ಲ’ ಸಮೃದ್ಧವಾಗಿರುವ ಆಹಾರಗಳಾದ ಬೀಜಗಳು, ಒಣ ಹಣ್ಣುಗಳು, ಮೀನು ಮತ್ತು ಹಸಿರು ತರಕಾರಿಗಳನ್ನು ಸೇವಿಸಬೇಕು. </p></li><li><p><strong>ಪಾದರಕ್ಷೆಗಳ ಆಯ್ಕೆ:</strong> ಚಳಿಗಾಲದಲ್ಲಿ ಪಾದಗಳನ್ನು ಸಂಪೂರ್ಣವಾಗಿ ಮುಚ್ಚಿದ, ಆರಾಮದಾಯಕ ಪಾದರಕ್ಷೆಗಳನ್ನು ಧರಿಸಬೇಕು. ಹತ್ತಿ ಅಥವಾ ಉಣ್ಣೆಯ ಸಾಕ್ಸ್ ಧರಿಸುವುದರಿಂದ ಪಾದಗಳು ಬೆಚ್ಚಗೆ ಇಡಲು ಸಹಾಕಾರಿಯಾಗಿದೆ. </p></li><li><p><strong>ವೈದ್ಯಕೀಯ ಸಲಹೆ:</strong> ಒಂದು ವೇಳೆ ಪಾದದ ಬಿರುಕಿನಿಂದ ರಕ್ತಸ್ರಾವವಾದರೆ, ಸೋಂಕು ತಗುಲಿದ ಲಕ್ಷಣ ಕಂಡುಬಂದರೆ ಅಥವಾ ತೀವ್ರ ನೋವು ಇದ್ದರೆ, ತ್ವರಿತವಾಗಿ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ.</p></li><li><p>ವಿಶೇಷವಾಗಿ ಮಧುಮೇಹ ರೋಗಿಗಳು ಪಾದಗಳ ಆರೈಕೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು.</p></li></ul><p><em><strong>(ಡಾ. ಶಿರೀನ್ ಫರ್ಟಾಡೋ, ಹಿರಿಯ ಸಲಹೆಗಾರರು, ವೈದ್ಯಕೀಯ ಮತ್ತು ಸೌಂದರ್ಯ ಚರ್ಮರೋಗ ತಜ್ಞೆ, ಆಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>