<p>ದಾಳಿಂಬೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆಯುರ್ವೇದದಲ್ಲಿ ದಾಳಿಂಬೆ ಹಣ್ಣಿಗೆ ಬಹುಮುಖ್ಯವಾದ ಸ್ಥಾನವಿದೆ. ಅಜೀರ್ಣ ಸಮಸ್ಯೆ ಇದ್ದಲ್ಲಿ ದಾಳಿಂಬೆ ಬಹು ಉಪಯುಕ್ತ. ಇದು ಅಗ್ನಿಯನ್ನು ದೀಪ್ತಿಗೊಳಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ದಾಳಿಂಬೆಯನ್ನು ಮಿತವಾಗಿ ತಿನ್ನುವುದರಿಂದ ಆರೋಗ್ಯಕ್ಕೆ ಪೋಷಕಾಂಶ ದೊರಕುತ್ತದೆ. </p>.ಮುದ್ದೇಬಿಹಾಳ: ಹುಲುಸಾಗಿ ಬೆಳೆದ ವಿದೇಶಿ ದಾಳಿಂಬೆ ಹಣ್ಣಿನ ಗಿಡಗಳು.ಮಹಾ ಶಿವರಾತ್ರಿ ಹಬ್ಬದ ವಿಶೇಷ: ಹೀಗಿರಲಿ ಭಕ್ತರ ಲಘು ಉಪವಾಸದ ಉಪಾಹಾರ.<p>ಬಾಯಿಯ ಅರುಚಿಯನ್ನು ಕಡಿಮೆ ಮಾಡುತ್ತದೆ. ಅತಿಸಾರ ಅಥವಾ ವಾಂತಿ ಸಮಸ್ಯೆಗೆ ದಾಳಿಂಬೆ ಸಿಪ್ಪೆಯ ಕಷಾಯ ರಾಮಬಾಣ. ಇದು ದೇಹದ ದ್ರವಾಂಶವನ್ನು ಸಮತೋಲನದಲ್ಲಿ ಇಡುತ್ತದೆ. ಮಧುರ ರಸ ಪ್ರಧಾನ ದಾಳಿಂಬೆಯು ಪಿತ್ತ ವಿಕಾರಗಳಲ್ಲಿ ಉಪಯೋಗಿಸಬಹುದು. ನಿಯಮಿತವಾಗಿ ದಾಳಿಂಬೆ ಸೇವನೆಯಿಂದ ರಕ್ತಹೀನತೆ ಕಡಿಮೆಯಾಗಲು ಸಹಕಾರಿಯಾಗುತ್ತದೆ. </p><p>ಇದರಲ್ಲಿ ಇರುವ ಕಬ್ಬಿಣ, ವಿಟಮಿನ್ B9 ಹಾಗೂ ಆ್ಯಂಟಿ ಆಕ್ಸಿಡೆಂಟ್ಗಳು ರಕ್ತದ ಗುಣಮಟ್ಟವನ್ನು ಸುಧಾರಿಸುತ್ತವೆ. ಹೃದಯ ಆರೋಗ್ಯಕ್ಕೂ ದಾಳಿಂಬೆ ಲಾಭಕಾರಿ. ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯ ಸಂಬಂಧಿ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.</p>.<p>ಮತ್ತೊಂದು ಪ್ರಮುಖ ಉಪಯೋಗವೆಂದರೆ, ದಾಳಿಂಬೆಯು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಕಾರಿ. ದಾಳಿಂಬೆಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಈ ಎಲ್ಲ ಬಹುಪ್ರಯೋಜನಗಳಿಂದ ದಾಳಿಂಬೆಯನ್ನು ನಿತ್ಯ ಸೇವನೀಯ ದ್ರವ್ಯ ಎಂದೇ ಪರಿಗಣಿಸಬಹುದು. ಒಟ್ಟಾರೆ, ದಾಳಿಂಬೆ ಒಂದು ಸಮತೋಲನಯುತ ಆಹಾರವಾಗಿ ದೈನಂದಿನ ಆಹಾರಕ್ರಮದಲ್ಲಿ ಸೇರಿಸಿದರೆ, ದೇಹದ ಸಮಗ್ರ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.</p><p><strong>ದಾಳಿಂಬೆ ಸಿಪ್ಪೆಯ ಕಷಾಯ</strong></p><p>ದಾಳಿಂಬೆ ಸಿಪ್ಪೆಯ ಕಷಾಯವು ಅತಿಸಾರ, ವಾಂತಿ, ಕೆಮ್ಮು, ಗಂಟಲು ನೋವು ಮತ್ತು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಅತ್ಯುತ್ತಮ ಆಯುರ್ವೇದ ಮನೆಮದ್ದಾಗಿದೆ. ದಾಳಿಂಬೆ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಒಣಗಿದ ದಾಳಿಂಬೆ ಸಿಪ್ಪೆಯನ್ನು ಪುಡಿಮಾಡಿಕೊಳ್ಳಿ. ಒಂದು ಕಪ್ ನೀರಿಗೆ 1 ಚಮಚ ದಾಳಿಂಬೆ ಸಿಪ್ಪೆಯ ಪುಡಿ ಹಾಕಿ 3-5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿಕೊಳ್ಳಿ. ಸೋಸಿದ ನೀರಿಗೆ ಜೇನುತುಪ್ಪ ಅಥವಾ ಶುಂಠಿ ರಸ ಸೇರಿಸಿ ಉಗುರು ಬೆಚ್ಚಗಿದ್ದಾಗಲೇ ಸೇವಿಸಿ.</p>.<p><em><strong>(ಲೇಖಕರು: ಡಾ. ಸಂಹಿತಾ ಉಲ್ಲೋಡು, ಸಹಾಯಕ ಪ್ರಾಧ್ಯಾಪಕಿ, ಸಂಹಿತಾ ಸಿದ್ಧಾಂತ ವಿಭಾಗ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಅಂಚೆಪಾಳ್ಯ, ಬೆಂಗಳೂರು.)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾಳಿಂಬೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆಯುರ್ವೇದದಲ್ಲಿ ದಾಳಿಂಬೆ ಹಣ್ಣಿಗೆ ಬಹುಮುಖ್ಯವಾದ ಸ್ಥಾನವಿದೆ. ಅಜೀರ್ಣ ಸಮಸ್ಯೆ ಇದ್ದಲ್ಲಿ ದಾಳಿಂಬೆ ಬಹು ಉಪಯುಕ್ತ. ಇದು ಅಗ್ನಿಯನ್ನು ದೀಪ್ತಿಗೊಳಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ದಾಳಿಂಬೆಯನ್ನು ಮಿತವಾಗಿ ತಿನ್ನುವುದರಿಂದ ಆರೋಗ್ಯಕ್ಕೆ ಪೋಷಕಾಂಶ ದೊರಕುತ್ತದೆ. </p>.ಮುದ್ದೇಬಿಹಾಳ: ಹುಲುಸಾಗಿ ಬೆಳೆದ ವಿದೇಶಿ ದಾಳಿಂಬೆ ಹಣ್ಣಿನ ಗಿಡಗಳು.ಮಹಾ ಶಿವರಾತ್ರಿ ಹಬ್ಬದ ವಿಶೇಷ: ಹೀಗಿರಲಿ ಭಕ್ತರ ಲಘು ಉಪವಾಸದ ಉಪಾಹಾರ.<p>ಬಾಯಿಯ ಅರುಚಿಯನ್ನು ಕಡಿಮೆ ಮಾಡುತ್ತದೆ. ಅತಿಸಾರ ಅಥವಾ ವಾಂತಿ ಸಮಸ್ಯೆಗೆ ದಾಳಿಂಬೆ ಸಿಪ್ಪೆಯ ಕಷಾಯ ರಾಮಬಾಣ. ಇದು ದೇಹದ ದ್ರವಾಂಶವನ್ನು ಸಮತೋಲನದಲ್ಲಿ ಇಡುತ್ತದೆ. ಮಧುರ ರಸ ಪ್ರಧಾನ ದಾಳಿಂಬೆಯು ಪಿತ್ತ ವಿಕಾರಗಳಲ್ಲಿ ಉಪಯೋಗಿಸಬಹುದು. ನಿಯಮಿತವಾಗಿ ದಾಳಿಂಬೆ ಸೇವನೆಯಿಂದ ರಕ್ತಹೀನತೆ ಕಡಿಮೆಯಾಗಲು ಸಹಕಾರಿಯಾಗುತ್ತದೆ. </p><p>ಇದರಲ್ಲಿ ಇರುವ ಕಬ್ಬಿಣ, ವಿಟಮಿನ್ B9 ಹಾಗೂ ಆ್ಯಂಟಿ ಆಕ್ಸಿಡೆಂಟ್ಗಳು ರಕ್ತದ ಗುಣಮಟ್ಟವನ್ನು ಸುಧಾರಿಸುತ್ತವೆ. ಹೃದಯ ಆರೋಗ್ಯಕ್ಕೂ ದಾಳಿಂಬೆ ಲಾಭಕಾರಿ. ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯ ಸಂಬಂಧಿ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.</p>.<p>ಮತ್ತೊಂದು ಪ್ರಮುಖ ಉಪಯೋಗವೆಂದರೆ, ದಾಳಿಂಬೆಯು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಕಾರಿ. ದಾಳಿಂಬೆಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಈ ಎಲ್ಲ ಬಹುಪ್ರಯೋಜನಗಳಿಂದ ದಾಳಿಂಬೆಯನ್ನು ನಿತ್ಯ ಸೇವನೀಯ ದ್ರವ್ಯ ಎಂದೇ ಪರಿಗಣಿಸಬಹುದು. ಒಟ್ಟಾರೆ, ದಾಳಿಂಬೆ ಒಂದು ಸಮತೋಲನಯುತ ಆಹಾರವಾಗಿ ದೈನಂದಿನ ಆಹಾರಕ್ರಮದಲ್ಲಿ ಸೇರಿಸಿದರೆ, ದೇಹದ ಸಮಗ್ರ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.</p><p><strong>ದಾಳಿಂಬೆ ಸಿಪ್ಪೆಯ ಕಷಾಯ</strong></p><p>ದಾಳಿಂಬೆ ಸಿಪ್ಪೆಯ ಕಷಾಯವು ಅತಿಸಾರ, ವಾಂತಿ, ಕೆಮ್ಮು, ಗಂಟಲು ನೋವು ಮತ್ತು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಅತ್ಯುತ್ತಮ ಆಯುರ್ವೇದ ಮನೆಮದ್ದಾಗಿದೆ. ದಾಳಿಂಬೆ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಒಣಗಿದ ದಾಳಿಂಬೆ ಸಿಪ್ಪೆಯನ್ನು ಪುಡಿಮಾಡಿಕೊಳ್ಳಿ. ಒಂದು ಕಪ್ ನೀರಿಗೆ 1 ಚಮಚ ದಾಳಿಂಬೆ ಸಿಪ್ಪೆಯ ಪುಡಿ ಹಾಕಿ 3-5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿಕೊಳ್ಳಿ. ಸೋಸಿದ ನೀರಿಗೆ ಜೇನುತುಪ್ಪ ಅಥವಾ ಶುಂಠಿ ರಸ ಸೇರಿಸಿ ಉಗುರು ಬೆಚ್ಚಗಿದ್ದಾಗಲೇ ಸೇವಿಸಿ.</p>.<p><em><strong>(ಲೇಖಕರು: ಡಾ. ಸಂಹಿತಾ ಉಲ್ಲೋಡು, ಸಹಾಯಕ ಪ್ರಾಧ್ಯಾಪಕಿ, ಸಂಹಿತಾ ಸಿದ್ಧಾಂತ ವಿಭಾಗ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಅಂಚೆಪಾಳ್ಯ, ಬೆಂಗಳೂರು.)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>