<p>ಋತುವಿಗೆ ತಕ್ಕಂತೆ ಮನುಷ್ಯನ ದೇಹದಲ್ಲಿಯೂ ಬದಲಾವಣೆ ಸಹಜ. ಅದಕ್ಕೆ ಪೂರಕವಾಗಿ ಆರೋಗ್ಯಕರವಾದ ಆಹಾರ ವಿಹಾರಗಳನ್ನು ಪಾಲಿಸುವುದೇ ಋತುಚರ್ಯೆ. ಮಾನಸಿಕ ದೈಹಿಕ ಸ್ವಸ್ಥತೆಯನ್ನು ಸದಾ ಕಾಲ ಕಾಪಾಡಿಕೊಳ್ಳುವುದೇ ಆಯುರ್ವೇದದ ಮೊದಲ ಧ್ಯೇಯ; ದಿನಚರ್ಯೆ, ಋತುಚರ್ಯೆಗಳ ಪಾಲನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು.</p>.<p>ರೋಗಕ್ಕೆ ಮೊದಲ ಆಹ್ವಾನವೇ ಋತುಚರ್ಯವನ್ನು ಪಾಲಿಸದಿರುವುದು. ಇದನ್ನು ಈಗಿನ ಯುಗದಲ್ಲಿ ‘ಲೈಫ್ ಸ್ಟೈಲ್ ಡಿಸೀಸಸ್’ ಎಂದು ಕರೆಯಲಾಗುತ್ತಿದೆ. ಉದಾ: ರಕ್ತದ ಒತ್ತಡ, ಥೈರಾಯ್ಡ್ ಸಮಸ್ಯೆ, ಸಕ್ಕರೆಕಾಯಿಲೆ ಮುಂತಾದವು. ಋತುಗಳು ಆರು; ಪ್ರತಿ ಎರಡು ತಿಂಗಳಿಗೊಂದರಂತೆ; ಅವೇ ಶಿಶಿರ, ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ.</p>.<p><strong>ಋತುಚರ್ಯೆಗಳು ಮತ್ತು ಅವುಗಳ ಪಾಲನೆ</strong></p>.<p>ಹೇಮಂತಋತು (ನವೆಂಬರ್ ಮಧ್ಯಭಾಗದಿಂದ - ಜನವರಿಯ ಮಧ್ಯಭಾಗದವರೆಗೆ)</p>.<p>ಶಿಶಿರಋತು (ಜನವರಿ ಮಧ್ಯಭಾಗದಿಂದ- ಮಾರ್ಚ್ ಮಧ್ಯಭಾಗದವರೆಗೆ):</p>.<p><strong>ಋತುವಿನ ಗುಣಧರ್ಮ:</strong></p>.<p>ಈ ಚಳಿಗಾಲದಲ್ಲಿ ತಂಗಾಳಿಯಿಂದಾಗಿ ದೇಹದ ಜೀರ್ಣಶಕ್ತಿಯು ವರ್ಧಿಸುತ್ತದೆ. ತೀಕ್ಷ್ಣ ಸೂರ್ಯಕಿರಣಗಳಿಂದ ಶುಷ್ಕತೆ ಹೆಚ್ಚುತ್ತದೆ.</p>.<p>ಆಹಾರ: ಆಹಾರದಲ್ಲಿ ಜಿಡ್ಡಿನ ಅಂಶ ಉಳ್ಳ ಪದಾರ್ಥಗಳು, ಹಾಲಿನ ಉತ್ಪನ್ನಗಳು, ಬಿಸಿ ನೀರು, ಕಬ್ಬಿನ ಹಾಲು, ಉಪ್ಪು, ಹುಳಿ ಅಂಶಗಳ ಆಹಾರ, ಮಾಂಸಸೇವನೆ.</p>.<p>ವಿಹಾರ: ಅಭ್ಯಂಗ (ಮಸಾಜ್), ಬೆಚ್ಚನೆಯ ಬಟ್ಟೆಗಳನ್ನು ಧರಿಸುವುದು.</p>.<p>ನಿಷಿದ್ಧ: ತೀಕ್ಷ್ಣ (ಖಾರ) ಕಟು, ತಂಪಾದ ಆಹಾರ ಸೇವನೆ. ಹಗಲಿನಲ್ಲಿ ನಿದ್ರೆ ಮಾಡುವುದು.</p>.<p>ವಸಂತಋತು (ಮಾರ್ಚ್ ಮಧ್ಯ ಭಾಗದಿಂದ ಮೇ ಮಧ್ಯ ಭಾಗದವರೆಗೆ)</p>.<p>ಗುಣ: ಪ್ರಖರವಾದ ಸೂರ್ಯನ ಬಿಸಿಲು. ಇದರಿಂದಾಗಿ ಜೀರ್ಣ ಶಕ್ತಿ ಕಡಿಮೆಯಾಗುತ್ತದೆ.</p>.<p>ಆಹಾರ: ಲಘು ಆಹಾರಸೇವನೆ, ಬಾರ್ಲಿ, ಗೋಧಿ.</p>.<p>ವಿಹಾರ: ವ್ಯಾಯಾಮ.</p>.<p>ನಿಷಿದ್ಧ: ಜೀರ್ಣವಾಗಲು ತುಂಬಾ ಸಮಯ ತೆಗೆದುಕೊಳ್ಳುವ ಸಿಹಿ ಪದಾರ್ಥಗಳು, ಜಿಡ್ಡಿನ ಆಹಾರ. ಹಗಲಿನಲ್ಲಿ ನಿದ್ರೆ ಮಾಡುವುದು.</p>.<p><strong>ಗ್ರೀಷ್ಮಋತು (ಮೇ ಮಧ್ಯಭಾಗದಿಂದ - ಜುಲೈ ಮಧ್ಯ ಭಾಗದವರೆಗೆ)</strong></p>.<p>ಗುಣ: ಸೂರ್ಯನ ತೀಕ್ಷ್ಣಕಿರಣಗಳು ಭೂಮಿಯ ಮೇಲಿನ ನೀರಿನ ಅಂಶವನ್ನು ಆವಿಯಾಗಿಸುವುದರಿಂದ ದೇಹಬಲ ಕಡಿಮೆಯಾಗುತ್ತದೆ.</p>.<p>ಆಹಾರ: ಸಿಹಿ ಆಹಾರ ಪದಾರ್ಥಗಳು, ತಂಪು ಪಾನೀಯಗಳು, ಜಿಡ್ಡು ಪದಾರ್ಥಗಳು, ತುಪ್ಪ, ಹಾಲು ಸೇವನೆ ಹಿತಕರ.</p>.<p>ವಿಹಾರ: ಹಗಲಿನಲ್ಲಿ ತಂಪಾದ ಸ್ಥಳದಲ್ಲಿ ನಿದ್ರೆ ಹಿತವನ್ನು ಉಂಟುಮಾಡುತ್ತದೆ. ಚಂದನದಂತಹ ತಂಪಾದ ದ್ರವ್ಯಗಳ ಲೇಪನ.</p>.<p>ನಿಷಿದ್ಧ: ವ್ಯಾಯಾಮ, ಹೆಚ್ಚು ಬಿಸಿಯಾದ, ಮಸಾಲೆ ಪದಾರ್ಥಗಳುಳ್ಳ ಆಹಾರ.</p>.<p><strong>ವರ್ಷಋತು (ಜುಲೈ ಮಧ್ಯಭಾಗದಿಂದ - ಸೆಪ್ಟೆಂಬರ್ ಮಧ್ಯಭಾಗದವರೆಗೆ)</strong></p>.<p>ಗುಣ: ಮಳೆಗಾಲ; ದೇಹದಲ್ಲಿ ಜೀರ್ಣಶಕ್ತಿ, ದೇಹ ಬಲ, ರೋಗನಿರೋಧಕ ಶಕ್ತಿ ಅತ್ಯಂತ ಕಡಿಮೆಯಾಗಿರುತ್ತದೆ.</p>.<p>ಆಹಾರ: ಬಾರ್ಲಿ, ಗೋಧಿ, ಜೀರ್ಣಕ್ಕೆ ಸುಲಭವಾಗುವ ಆಹಾರ. ಕುಡಿಯುವ ನೀರಿನೊಂದಿಗೆ ಜೇನುತುಪ್ಪವನ್ನು ಸೇರಿಸಿ ಸೇವಿಸುವುದು ಹಿತಕರ.</p>.<p>ವಿಹಾರ: ಔಷಧೀಯ ಚೂರ್ಣಗಳ ಲೇಪ.</p>.<p>ನಿಷಿದ್ಧ: ತಂಪು ಪಾನೀಯಗಳು, ಹಗಲುನಿದ್ರೆ.</p>.<p><strong>ಶರತ್ ಋತು (ಸೆಪ್ಟೆಂಬರ್ ಮಧ್ಯಭಾಗದಿಂದ - ನವೆಂಬರ್ ಮಧ್ಯಭಾಗದ ವರೆಗೆ)</strong></p>.<p>ಗುಣ: ಮಳೆ ಕಡಿಮೆಯಾಗಿ, ಉಷ್ಣತೆಯು ಹೆಚ್ಚುವ ಕಾಲ.</p>.<p>ಆಹಾರ: ಜೀರ್ಣಕ್ರಿಯೆಗೆ ಸುಲಭವಾಗುವ ಆಹಾರ, ತುಪ್ಪದ ಸೇವನೆ ಅತ್ಯಂತ ಹಿತಕರ.</p>.<p>ವಿಹಾರ: ಅಭ್ಯಂಗನಿಷಿದ್ಧ, ಮಸಾಲೆ ಆಹಾರ ಪದಾರ್ಥಗಳು.</p>.<p>ಹಿತಮಿತವಾದ ಆಹಾರ–ವಿಹಾರ, ದಿನಚರ್ಯ ಋತುಚರ್ಯೆಗಳ ಪಾಲನೆ, ಸದ್ವಿಚಾರಗಳ ಚಿಂತನೆಗಳಿಂದ ಈಗಿನ ಧಾವಂತದ ಜೀವನಕ್ರಮದಲ್ಲೂ ಮನುಷ್ಯ ಸ್ವಸ್ಥನಾಗಿರಲು ಸಾಧ್ಯ.</p>.<p><strong>ಆಹಾರಕ್ರಮ</strong></p>.<p><strong>ಶಿಶಿರ</strong></p>.<p>ಪಥ್ಯ ಆಹಾರ: ಅಕ್ಕಿ, ಗೋಧಿ, ಎಳ್ಳು, ಹಾಲು, ಹಾಲಿನ ಉತ್ಪನ್ನ, ಕಬ್ಬು, ಬೆಲ್ಲ, ಜಿಡ್ಡಿನ ಪದಾರ್ಥಗಳು, ಹಿಟ್ಟಿನಿಂದ ತಯಾರಿಸಿದ ತಿನಿಸುಗಳು. ಶುಂಠಿ, ಬೆಳ್ಳುಳ್ಳಿ, ಅಳಲೆಕಾಯಿ, ಹಿಪ್ಪಲಿ.<br />ಅಪಥ್ಯ ಆಹಾರ: ತಂಪು ಪಾನೀಯಗಳು, ಕಡಲೆಕಾಳು, ಉದ್ದಿನ ಬೇಳೆ, ಅವಲಕ್ಕಿ.</p>.<p><strong>ವಸಂತ</strong></p>.<p><strong>ಪಥ್ಯ ಆಹಾರ:</strong> ಅಕ್ಕಿ, ಗೋಧಿ, ಜೋಳ, ಮೆಕ್ಕೆಜೋಳ, ಹೆಸರುಬೇಳೆ, ತೊಗರಿಬೇಳೆ, ಮಸೂರ, ಬಾರ್ಲಿ, ಜೇನುತುಪ್ಪ ಬೇರೆಸಿದ ನೀರು,<br />ಶುಂಠಿ, ಅರಿಶಿಣ, ತುಳಸಿ, ಬೇವು, ಖದಿರ, ಮುಸ್ತಾ, ಕೊತ್ತಂಬರಿ, ಜೀರಿಗೆ, ಮೆಂತ್ಯ.<br />ಅಪಥ್ಯ ಆಹಾರ: ತಂಪು ಪಾನೀಯಗಳು, ಸಿಹಿ ತಿನಿಸುಗಳು, ಹುಳಿ ಮೊಸರಿನಿಂದ ತಯಾರಿಸಿದ ಆಹಾರ, ಎಣ್ಣೆ ಜಿಡ್ಡಿನ ಪದಾರ್ಥಗಳು, ಮಾಂಸಾಹಾರ, ಉದ್ದಿನ ಬೇಳೆ.</p>.<p><strong>ಗ್ರೀಷ್ಮ</strong></p>.<p><strong>ಪಥ್ಯ: </strong>ಅಕ್ಕಿ, ಹೆಸರು ಬೇಳೆ, ಸೌತೆಕಾಯಿ, ಮಾವಿನ ಹಣ್ಣು, ಕಲ್ಲಂಗಡಿ ಹಣ್ಣು, ಹಣ್ಣಿನ ರಸ, ಎಳನೀರು, ಮಜ್ಜಿಗೆ, ಕಾಳುಮೆಣಸಿನ ಪುಡಿ ಸೇರಿಸಿದ ಮೊಸರು, ಮಾಂಸರಸ, ಮೆಂತ್ಯೆ.<br />ಅಪಥ್ಯ: ಮೆಣಸಿನಕಾಯಿ, ಮಸಾಲೆ ಪದಾರ್ಥಗಳು, ಅತ್ಯಂತ ಬಿಸಿಯಾದ ಆಹಾರಸೇವನೆ,<br />ಅತಿಯಾದ ಮಾಂಸಸೇವನೆ.</p>.<p><strong>ವರ್ಷ<br />ಪಥ್ಯ</strong>: ಬಿಸಿಯಾದ ತಾಜಾ ಆಹಾರ, ಶುಂಠಿ, ನಿಂಬೆ, ಹಿಪ್ಪಲಿ, ಸೈಂಧವ ಲವಣ, ಕಾಳು ಮೆಣಸು, ಮಾಂಸ ರಸ, ವಿವಿಧ ತರಕಾರಿಗಳ ಸೂಪ್.<br />ಅಪಥ್ಯ: ಉಪ್ಪಿನಂಶ ಅಧಿಕವುಳ್ಳ ಆಹಾರ, ಹುದುಗಿಸಿದ ಆಹಾರ.</p>.<p><strong>ಶರತ್<br />ಪಥ್ಯ:</strong> ಗೋಧಿ, ಹೆಸರು ಬೇಳೆ, ಸಿಹಿ ತಿನಿಸುಗಳು, ತುಪ್ಪ, ಪಡವಲಕಾಯಿ, ಸೊಪ್ಪುಗಳು, ಕಂದಮೂಲಗಳು.<br />ಅಪಥ್ಯ: ಹುದುಗಿಸಿದ ಆಹಾರ. ಮೆಣಸಿನ ಕಾಯಿ.</p>.<p><strong>ಹೇಮಂತ<br />ಪಥ್ಯ: </strong>ಹೆಸರು ಬೇಳೆ, ಧಾನ್ಯಗಳು, ಜೋಳ, ಹಾಲಿನ ಉತ್ಪನ್ನಗಳು, ಪಾಲಕ್, ಖರ್ಜೂರ.<br />ಶುಂಠಿ, ಹಿಪ್ಪಲಿ, ಮೆಣಸು.<br />ಅಪಥ್ಯ: ಉದ್ದಿನ ಬೇಳೆ, ಕಡಲೆ ಕಾಳು.</p>.<p>ಋತು ಸಂಧಿ ಎನ್ನುವುದು ಎರಡು ಋತುಗಳು ಸಂಧಿಸುವ ಕಾಲ. ಹಿಂದಿನ ಋತುವಿನ ಕೊನೆಯ ಏಳು ದಿನಗಳು ಮತ್ತು ಮುಂಬರುವ ಋತುವಿನ ಆರಂಭದ ಏಳು ದಿವಸಗಳು. ಈ ಸಮಯದಲ್ಲಿ ಕಳೆದ ಋತುವಿನ ಆಹಾರಪದ್ಧತಿಯನ್ನು ನಿಧಾನವಾಗಿ ಬದಲಾಯಿಸುತ್ತಾ ಮುಂದಿನ ಋತುವಿನ ಆಹಾರಪದ್ಧತಿಗೆ ಒಗ್ಗಿಕೊಳ್ಳಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಋತುವಿಗೆ ತಕ್ಕಂತೆ ಮನುಷ್ಯನ ದೇಹದಲ್ಲಿಯೂ ಬದಲಾವಣೆ ಸಹಜ. ಅದಕ್ಕೆ ಪೂರಕವಾಗಿ ಆರೋಗ್ಯಕರವಾದ ಆಹಾರ ವಿಹಾರಗಳನ್ನು ಪಾಲಿಸುವುದೇ ಋತುಚರ್ಯೆ. ಮಾನಸಿಕ ದೈಹಿಕ ಸ್ವಸ್ಥತೆಯನ್ನು ಸದಾ ಕಾಲ ಕಾಪಾಡಿಕೊಳ್ಳುವುದೇ ಆಯುರ್ವೇದದ ಮೊದಲ ಧ್ಯೇಯ; ದಿನಚರ್ಯೆ, ಋತುಚರ್ಯೆಗಳ ಪಾಲನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು.</p>.<p>ರೋಗಕ್ಕೆ ಮೊದಲ ಆಹ್ವಾನವೇ ಋತುಚರ್ಯವನ್ನು ಪಾಲಿಸದಿರುವುದು. ಇದನ್ನು ಈಗಿನ ಯುಗದಲ್ಲಿ ‘ಲೈಫ್ ಸ್ಟೈಲ್ ಡಿಸೀಸಸ್’ ಎಂದು ಕರೆಯಲಾಗುತ್ತಿದೆ. ಉದಾ: ರಕ್ತದ ಒತ್ತಡ, ಥೈರಾಯ್ಡ್ ಸಮಸ್ಯೆ, ಸಕ್ಕರೆಕಾಯಿಲೆ ಮುಂತಾದವು. ಋತುಗಳು ಆರು; ಪ್ರತಿ ಎರಡು ತಿಂಗಳಿಗೊಂದರಂತೆ; ಅವೇ ಶಿಶಿರ, ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ.</p>.<p><strong>ಋತುಚರ್ಯೆಗಳು ಮತ್ತು ಅವುಗಳ ಪಾಲನೆ</strong></p>.<p>ಹೇಮಂತಋತು (ನವೆಂಬರ್ ಮಧ್ಯಭಾಗದಿಂದ - ಜನವರಿಯ ಮಧ್ಯಭಾಗದವರೆಗೆ)</p>.<p>ಶಿಶಿರಋತು (ಜನವರಿ ಮಧ್ಯಭಾಗದಿಂದ- ಮಾರ್ಚ್ ಮಧ್ಯಭಾಗದವರೆಗೆ):</p>.<p><strong>ಋತುವಿನ ಗುಣಧರ್ಮ:</strong></p>.<p>ಈ ಚಳಿಗಾಲದಲ್ಲಿ ತಂಗಾಳಿಯಿಂದಾಗಿ ದೇಹದ ಜೀರ್ಣಶಕ್ತಿಯು ವರ್ಧಿಸುತ್ತದೆ. ತೀಕ್ಷ್ಣ ಸೂರ್ಯಕಿರಣಗಳಿಂದ ಶುಷ್ಕತೆ ಹೆಚ್ಚುತ್ತದೆ.</p>.<p>ಆಹಾರ: ಆಹಾರದಲ್ಲಿ ಜಿಡ್ಡಿನ ಅಂಶ ಉಳ್ಳ ಪದಾರ್ಥಗಳು, ಹಾಲಿನ ಉತ್ಪನ್ನಗಳು, ಬಿಸಿ ನೀರು, ಕಬ್ಬಿನ ಹಾಲು, ಉಪ್ಪು, ಹುಳಿ ಅಂಶಗಳ ಆಹಾರ, ಮಾಂಸಸೇವನೆ.</p>.<p>ವಿಹಾರ: ಅಭ್ಯಂಗ (ಮಸಾಜ್), ಬೆಚ್ಚನೆಯ ಬಟ್ಟೆಗಳನ್ನು ಧರಿಸುವುದು.</p>.<p>ನಿಷಿದ್ಧ: ತೀಕ್ಷ್ಣ (ಖಾರ) ಕಟು, ತಂಪಾದ ಆಹಾರ ಸೇವನೆ. ಹಗಲಿನಲ್ಲಿ ನಿದ್ರೆ ಮಾಡುವುದು.</p>.<p>ವಸಂತಋತು (ಮಾರ್ಚ್ ಮಧ್ಯ ಭಾಗದಿಂದ ಮೇ ಮಧ್ಯ ಭಾಗದವರೆಗೆ)</p>.<p>ಗುಣ: ಪ್ರಖರವಾದ ಸೂರ್ಯನ ಬಿಸಿಲು. ಇದರಿಂದಾಗಿ ಜೀರ್ಣ ಶಕ್ತಿ ಕಡಿಮೆಯಾಗುತ್ತದೆ.</p>.<p>ಆಹಾರ: ಲಘು ಆಹಾರಸೇವನೆ, ಬಾರ್ಲಿ, ಗೋಧಿ.</p>.<p>ವಿಹಾರ: ವ್ಯಾಯಾಮ.</p>.<p>ನಿಷಿದ್ಧ: ಜೀರ್ಣವಾಗಲು ತುಂಬಾ ಸಮಯ ತೆಗೆದುಕೊಳ್ಳುವ ಸಿಹಿ ಪದಾರ್ಥಗಳು, ಜಿಡ್ಡಿನ ಆಹಾರ. ಹಗಲಿನಲ್ಲಿ ನಿದ್ರೆ ಮಾಡುವುದು.</p>.<p><strong>ಗ್ರೀಷ್ಮಋತು (ಮೇ ಮಧ್ಯಭಾಗದಿಂದ - ಜುಲೈ ಮಧ್ಯ ಭಾಗದವರೆಗೆ)</strong></p>.<p>ಗುಣ: ಸೂರ್ಯನ ತೀಕ್ಷ್ಣಕಿರಣಗಳು ಭೂಮಿಯ ಮೇಲಿನ ನೀರಿನ ಅಂಶವನ್ನು ಆವಿಯಾಗಿಸುವುದರಿಂದ ದೇಹಬಲ ಕಡಿಮೆಯಾಗುತ್ತದೆ.</p>.<p>ಆಹಾರ: ಸಿಹಿ ಆಹಾರ ಪದಾರ್ಥಗಳು, ತಂಪು ಪಾನೀಯಗಳು, ಜಿಡ್ಡು ಪದಾರ್ಥಗಳು, ತುಪ್ಪ, ಹಾಲು ಸೇವನೆ ಹಿತಕರ.</p>.<p>ವಿಹಾರ: ಹಗಲಿನಲ್ಲಿ ತಂಪಾದ ಸ್ಥಳದಲ್ಲಿ ನಿದ್ರೆ ಹಿತವನ್ನು ಉಂಟುಮಾಡುತ್ತದೆ. ಚಂದನದಂತಹ ತಂಪಾದ ದ್ರವ್ಯಗಳ ಲೇಪನ.</p>.<p>ನಿಷಿದ್ಧ: ವ್ಯಾಯಾಮ, ಹೆಚ್ಚು ಬಿಸಿಯಾದ, ಮಸಾಲೆ ಪದಾರ್ಥಗಳುಳ್ಳ ಆಹಾರ.</p>.<p><strong>ವರ್ಷಋತು (ಜುಲೈ ಮಧ್ಯಭಾಗದಿಂದ - ಸೆಪ್ಟೆಂಬರ್ ಮಧ್ಯಭಾಗದವರೆಗೆ)</strong></p>.<p>ಗುಣ: ಮಳೆಗಾಲ; ದೇಹದಲ್ಲಿ ಜೀರ್ಣಶಕ್ತಿ, ದೇಹ ಬಲ, ರೋಗನಿರೋಧಕ ಶಕ್ತಿ ಅತ್ಯಂತ ಕಡಿಮೆಯಾಗಿರುತ್ತದೆ.</p>.<p>ಆಹಾರ: ಬಾರ್ಲಿ, ಗೋಧಿ, ಜೀರ್ಣಕ್ಕೆ ಸುಲಭವಾಗುವ ಆಹಾರ. ಕುಡಿಯುವ ನೀರಿನೊಂದಿಗೆ ಜೇನುತುಪ್ಪವನ್ನು ಸೇರಿಸಿ ಸೇವಿಸುವುದು ಹಿತಕರ.</p>.<p>ವಿಹಾರ: ಔಷಧೀಯ ಚೂರ್ಣಗಳ ಲೇಪ.</p>.<p>ನಿಷಿದ್ಧ: ತಂಪು ಪಾನೀಯಗಳು, ಹಗಲುನಿದ್ರೆ.</p>.<p><strong>ಶರತ್ ಋತು (ಸೆಪ್ಟೆಂಬರ್ ಮಧ್ಯಭಾಗದಿಂದ - ನವೆಂಬರ್ ಮಧ್ಯಭಾಗದ ವರೆಗೆ)</strong></p>.<p>ಗುಣ: ಮಳೆ ಕಡಿಮೆಯಾಗಿ, ಉಷ್ಣತೆಯು ಹೆಚ್ಚುವ ಕಾಲ.</p>.<p>ಆಹಾರ: ಜೀರ್ಣಕ್ರಿಯೆಗೆ ಸುಲಭವಾಗುವ ಆಹಾರ, ತುಪ್ಪದ ಸೇವನೆ ಅತ್ಯಂತ ಹಿತಕರ.</p>.<p>ವಿಹಾರ: ಅಭ್ಯಂಗನಿಷಿದ್ಧ, ಮಸಾಲೆ ಆಹಾರ ಪದಾರ್ಥಗಳು.</p>.<p>ಹಿತಮಿತವಾದ ಆಹಾರ–ವಿಹಾರ, ದಿನಚರ್ಯ ಋತುಚರ್ಯೆಗಳ ಪಾಲನೆ, ಸದ್ವಿಚಾರಗಳ ಚಿಂತನೆಗಳಿಂದ ಈಗಿನ ಧಾವಂತದ ಜೀವನಕ್ರಮದಲ್ಲೂ ಮನುಷ್ಯ ಸ್ವಸ್ಥನಾಗಿರಲು ಸಾಧ್ಯ.</p>.<p><strong>ಆಹಾರಕ್ರಮ</strong></p>.<p><strong>ಶಿಶಿರ</strong></p>.<p>ಪಥ್ಯ ಆಹಾರ: ಅಕ್ಕಿ, ಗೋಧಿ, ಎಳ್ಳು, ಹಾಲು, ಹಾಲಿನ ಉತ್ಪನ್ನ, ಕಬ್ಬು, ಬೆಲ್ಲ, ಜಿಡ್ಡಿನ ಪದಾರ್ಥಗಳು, ಹಿಟ್ಟಿನಿಂದ ತಯಾರಿಸಿದ ತಿನಿಸುಗಳು. ಶುಂಠಿ, ಬೆಳ್ಳುಳ್ಳಿ, ಅಳಲೆಕಾಯಿ, ಹಿಪ್ಪಲಿ.<br />ಅಪಥ್ಯ ಆಹಾರ: ತಂಪು ಪಾನೀಯಗಳು, ಕಡಲೆಕಾಳು, ಉದ್ದಿನ ಬೇಳೆ, ಅವಲಕ್ಕಿ.</p>.<p><strong>ವಸಂತ</strong></p>.<p><strong>ಪಥ್ಯ ಆಹಾರ:</strong> ಅಕ್ಕಿ, ಗೋಧಿ, ಜೋಳ, ಮೆಕ್ಕೆಜೋಳ, ಹೆಸರುಬೇಳೆ, ತೊಗರಿಬೇಳೆ, ಮಸೂರ, ಬಾರ್ಲಿ, ಜೇನುತುಪ್ಪ ಬೇರೆಸಿದ ನೀರು,<br />ಶುಂಠಿ, ಅರಿಶಿಣ, ತುಳಸಿ, ಬೇವು, ಖದಿರ, ಮುಸ್ತಾ, ಕೊತ್ತಂಬರಿ, ಜೀರಿಗೆ, ಮೆಂತ್ಯ.<br />ಅಪಥ್ಯ ಆಹಾರ: ತಂಪು ಪಾನೀಯಗಳು, ಸಿಹಿ ತಿನಿಸುಗಳು, ಹುಳಿ ಮೊಸರಿನಿಂದ ತಯಾರಿಸಿದ ಆಹಾರ, ಎಣ್ಣೆ ಜಿಡ್ಡಿನ ಪದಾರ್ಥಗಳು, ಮಾಂಸಾಹಾರ, ಉದ್ದಿನ ಬೇಳೆ.</p>.<p><strong>ಗ್ರೀಷ್ಮ</strong></p>.<p><strong>ಪಥ್ಯ: </strong>ಅಕ್ಕಿ, ಹೆಸರು ಬೇಳೆ, ಸೌತೆಕಾಯಿ, ಮಾವಿನ ಹಣ್ಣು, ಕಲ್ಲಂಗಡಿ ಹಣ್ಣು, ಹಣ್ಣಿನ ರಸ, ಎಳನೀರು, ಮಜ್ಜಿಗೆ, ಕಾಳುಮೆಣಸಿನ ಪುಡಿ ಸೇರಿಸಿದ ಮೊಸರು, ಮಾಂಸರಸ, ಮೆಂತ್ಯೆ.<br />ಅಪಥ್ಯ: ಮೆಣಸಿನಕಾಯಿ, ಮಸಾಲೆ ಪದಾರ್ಥಗಳು, ಅತ್ಯಂತ ಬಿಸಿಯಾದ ಆಹಾರಸೇವನೆ,<br />ಅತಿಯಾದ ಮಾಂಸಸೇವನೆ.</p>.<p><strong>ವರ್ಷ<br />ಪಥ್ಯ</strong>: ಬಿಸಿಯಾದ ತಾಜಾ ಆಹಾರ, ಶುಂಠಿ, ನಿಂಬೆ, ಹಿಪ್ಪಲಿ, ಸೈಂಧವ ಲವಣ, ಕಾಳು ಮೆಣಸು, ಮಾಂಸ ರಸ, ವಿವಿಧ ತರಕಾರಿಗಳ ಸೂಪ್.<br />ಅಪಥ್ಯ: ಉಪ್ಪಿನಂಶ ಅಧಿಕವುಳ್ಳ ಆಹಾರ, ಹುದುಗಿಸಿದ ಆಹಾರ.</p>.<p><strong>ಶರತ್<br />ಪಥ್ಯ:</strong> ಗೋಧಿ, ಹೆಸರು ಬೇಳೆ, ಸಿಹಿ ತಿನಿಸುಗಳು, ತುಪ್ಪ, ಪಡವಲಕಾಯಿ, ಸೊಪ್ಪುಗಳು, ಕಂದಮೂಲಗಳು.<br />ಅಪಥ್ಯ: ಹುದುಗಿಸಿದ ಆಹಾರ. ಮೆಣಸಿನ ಕಾಯಿ.</p>.<p><strong>ಹೇಮಂತ<br />ಪಥ್ಯ: </strong>ಹೆಸರು ಬೇಳೆ, ಧಾನ್ಯಗಳು, ಜೋಳ, ಹಾಲಿನ ಉತ್ಪನ್ನಗಳು, ಪಾಲಕ್, ಖರ್ಜೂರ.<br />ಶುಂಠಿ, ಹಿಪ್ಪಲಿ, ಮೆಣಸು.<br />ಅಪಥ್ಯ: ಉದ್ದಿನ ಬೇಳೆ, ಕಡಲೆ ಕಾಳು.</p>.<p>ಋತು ಸಂಧಿ ಎನ್ನುವುದು ಎರಡು ಋತುಗಳು ಸಂಧಿಸುವ ಕಾಲ. ಹಿಂದಿನ ಋತುವಿನ ಕೊನೆಯ ಏಳು ದಿನಗಳು ಮತ್ತು ಮುಂಬರುವ ಋತುವಿನ ಆರಂಭದ ಏಳು ದಿವಸಗಳು. ಈ ಸಮಯದಲ್ಲಿ ಕಳೆದ ಋತುವಿನ ಆಹಾರಪದ್ಧತಿಯನ್ನು ನಿಧಾನವಾಗಿ ಬದಲಾಯಿಸುತ್ತಾ ಮುಂದಿನ ಋತುವಿನ ಆಹಾರಪದ್ಧತಿಗೆ ಒಗ್ಗಿಕೊಳ್ಳಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>