<p>ಋತುಮಾನ ಬದಲಾದ ಹಾಗೆ ವಾತಾವರಣದಲ್ಲಿ ಉಷ್ಣತೆ, ತೇವಾಂಶ ಬದಲಾಗುತ್ತದೆ. ಉಷ್ಣಾಂಶ ಹೆಚ್ಚಾದಂತೆ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರುತ್ತದೆ. </p><p>ದೇಹವನ್ನು ಉಷ್ಣತೆಯಿಂದ ಕಾಪಾಡಿಕೊಳ್ಳಲು ಅನೇಕರು ರಾಸಯನಿಕಯುಕ್ತ ತಂಪು ಪಾನೀಯವನ್ನು ಸೇವಿಸುತ್ತಾರೆ. ಈ ಪಾನೀಯ ಸೇವನೆಯಿಂದ ಆ ಕ್ಷಣಕ್ಕೆ ದೇಹ ತಂಪು ಎನಿಸಿಬಹುದು. ಆದರೆ, ಧೀರ್ಘಕಾದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ದೇಹವನ್ನು ತಂಪಾಗಿಸರಿಸಿಕೊಳ್ಳುವುದು ಉತ್ತಮ.</p>.<h2>ದೇಹ ತಂಪಾಗಿರಿಸಲು ರಾಗಿ ಉಪಯುಕ್ತ</h2>.<p>ರಾಗಿಯಲ್ಲಿ ನಾರಿನಂಶ, ಪ್ರೋಟಿನ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳಿವೆ. ಅಷ್ಟೇ ಅಲ್ಲದೆ, ವಿಟಮಿನ್ ಬಿ, ವಿಟಮಿನ್ ಡಿ, ಮೆಗ್ನೀಶಿಯಂ ಖನಿಜ ಸತ್ವಗಳನ್ನು ಹೊಂದಿದೆ. </p><p>ಬೇಸಿಗೆ ಸಮಯದಲ್ಲಿ ನಿಯಮಿತವಾಗಿ ರಾಗಿ ಮಾಲ್ಟ್, ಅಂಬಲಿ, ಮುದ್ದೆ ಸೇವನೆ ಮಾಡುವುದರಿಂದ ದೇಹವನ್ನು ಉಷ್ಣತೆಯಿಂದ ರಕ್ಷಿಸಿ ನಿರ್ಜಲೀಕರಣದಿಂದ ಪಾರು ಮಾಡಲು ಸಹಕರಿಯಾಗಲಿದೆ. </p>.<h2>ಮೊಳಕೆ ಕಾಳು ಸೇವನೆ</h2>.<p>ಮೊಳಕೆ ಕಾಳುಗಳು ಎಲ್ಲಾ ಕಾಲಕ್ಕೂ ಸೂಕ್ತ ಆಹಾರವಾಗಿದೆ. ಅದರಲ್ಲೂ ಮುಖ್ಯವಾಗಿ ಬೇಸಿಗೆ ಸಮಯದಲ್ಲಿ ಪ್ರತಿದಿನ ನಿಯಮಿತವಾಗಿ ಮೊಳಕೆ ಕಟ್ಟಿದ ಕಾಳುಗಳನ್ನು ಸೇವನೆ ಮಾಡುವುದರಿಂದ ದೇಹವನ್ನು ತಂಪಾಗಿಸುವ ಜತೆಗೆ ಶಕ್ತಿ ಹೆಚ್ಚಳಕ್ಕೆ ಉಪಯುಕ್ತವಾಗಲಿದೆ. </p>.<h2>ತಂಪು ಪಾನೀಯಗಳ ಸೇವನೆ</h2>.<p>ಎಳನೀರು, ಸೌತೆಕಾಯಿ, ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲು ಕುಡಿಯುವುದರಿಂದ ದೇಹವನ್ನು ತಂಪಾಗಿರಿಸುತ್ತದೆ. ಅಲ್ಲದೆ ಉತ್ತಮ ಆರೋಗ್ಯಕ್ಕೂ ಸಹಕರಿಸಲಿದೆ.</p>.<h2>ನಿಯಮಿತ ನೀರು ಕುಡಿಯುವುದು</h2>.<p>ಪ್ರತಿದಿನ 3–4 ಲೀಟರ್ ನೀರು ಸೇವನೆ ಮಾಡುವುದರಿಂದ ಬಾಯಾರಿಕೆ ಹೋಗಾಲಾಡಿಸುವುದರ ಜೊತೆಗೆ ನಿರ್ಜಲೀಕರಣವನ್ನು ತಡೆಯುತ್ತದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಋತುಮಾನ ಬದಲಾದ ಹಾಗೆ ವಾತಾವರಣದಲ್ಲಿ ಉಷ್ಣತೆ, ತೇವಾಂಶ ಬದಲಾಗುತ್ತದೆ. ಉಷ್ಣಾಂಶ ಹೆಚ್ಚಾದಂತೆ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರುತ್ತದೆ. </p><p>ದೇಹವನ್ನು ಉಷ್ಣತೆಯಿಂದ ಕಾಪಾಡಿಕೊಳ್ಳಲು ಅನೇಕರು ರಾಸಯನಿಕಯುಕ್ತ ತಂಪು ಪಾನೀಯವನ್ನು ಸೇವಿಸುತ್ತಾರೆ. ಈ ಪಾನೀಯ ಸೇವನೆಯಿಂದ ಆ ಕ್ಷಣಕ್ಕೆ ದೇಹ ತಂಪು ಎನಿಸಿಬಹುದು. ಆದರೆ, ಧೀರ್ಘಕಾದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ದೇಹವನ್ನು ತಂಪಾಗಿಸರಿಸಿಕೊಳ್ಳುವುದು ಉತ್ತಮ.</p>.<h2>ದೇಹ ತಂಪಾಗಿರಿಸಲು ರಾಗಿ ಉಪಯುಕ್ತ</h2>.<p>ರಾಗಿಯಲ್ಲಿ ನಾರಿನಂಶ, ಪ್ರೋಟಿನ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳಿವೆ. ಅಷ್ಟೇ ಅಲ್ಲದೆ, ವಿಟಮಿನ್ ಬಿ, ವಿಟಮಿನ್ ಡಿ, ಮೆಗ್ನೀಶಿಯಂ ಖನಿಜ ಸತ್ವಗಳನ್ನು ಹೊಂದಿದೆ. </p><p>ಬೇಸಿಗೆ ಸಮಯದಲ್ಲಿ ನಿಯಮಿತವಾಗಿ ರಾಗಿ ಮಾಲ್ಟ್, ಅಂಬಲಿ, ಮುದ್ದೆ ಸೇವನೆ ಮಾಡುವುದರಿಂದ ದೇಹವನ್ನು ಉಷ್ಣತೆಯಿಂದ ರಕ್ಷಿಸಿ ನಿರ್ಜಲೀಕರಣದಿಂದ ಪಾರು ಮಾಡಲು ಸಹಕರಿಯಾಗಲಿದೆ. </p>.<h2>ಮೊಳಕೆ ಕಾಳು ಸೇವನೆ</h2>.<p>ಮೊಳಕೆ ಕಾಳುಗಳು ಎಲ್ಲಾ ಕಾಲಕ್ಕೂ ಸೂಕ್ತ ಆಹಾರವಾಗಿದೆ. ಅದರಲ್ಲೂ ಮುಖ್ಯವಾಗಿ ಬೇಸಿಗೆ ಸಮಯದಲ್ಲಿ ಪ್ರತಿದಿನ ನಿಯಮಿತವಾಗಿ ಮೊಳಕೆ ಕಟ್ಟಿದ ಕಾಳುಗಳನ್ನು ಸೇವನೆ ಮಾಡುವುದರಿಂದ ದೇಹವನ್ನು ತಂಪಾಗಿಸುವ ಜತೆಗೆ ಶಕ್ತಿ ಹೆಚ್ಚಳಕ್ಕೆ ಉಪಯುಕ್ತವಾಗಲಿದೆ. </p>.<h2>ತಂಪು ಪಾನೀಯಗಳ ಸೇವನೆ</h2>.<p>ಎಳನೀರು, ಸೌತೆಕಾಯಿ, ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲು ಕುಡಿಯುವುದರಿಂದ ದೇಹವನ್ನು ತಂಪಾಗಿರಿಸುತ್ತದೆ. ಅಲ್ಲದೆ ಉತ್ತಮ ಆರೋಗ್ಯಕ್ಕೂ ಸಹಕರಿಸಲಿದೆ.</p>.<h2>ನಿಯಮಿತ ನೀರು ಕುಡಿಯುವುದು</h2>.<p>ಪ್ರತಿದಿನ 3–4 ಲೀಟರ್ ನೀರು ಸೇವನೆ ಮಾಡುವುದರಿಂದ ಬಾಯಾರಿಕೆ ಹೋಗಾಲಾಡಿಸುವುದರ ಜೊತೆಗೆ ನಿರ್ಜಲೀಕರಣವನ್ನು ತಡೆಯುತ್ತದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>