<p><strong>ದಾಬಸ್ ಪೇಟೆ:</strong> ಹೋಬಳಿಯ ರಾಮೇನಹಳ್ಳಿ ಗ್ರಾಮದ ಸಮೀಪ ಚಿರತೆ ಕಾಣಿಸಿಕೊಂಡಿದ್ದು, ನಾಯಿಗಳು ಜೋರಾಗಿ ಬೊಗಳಿವೆ. ಆ ಶಬ್ದಕ್ಕೆ ಜನರು ಎಚ್ಚರಗೊಂಡಿದ್ದರಿಂದ ಗದ್ದಲವಾಗಿ ಚಿರತೆ ಓಡಿ ಹೋಗಿದೆ. ಈ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.</p>.<p>ರಾಮದೇವರ ಬೆಟ್ಟದ ಕಾಡಿಗೆ ಹೊಂದಿಕೊಂಡಂತೆ ರಾಮನಹಳ್ಳಿ ಗ್ರಾಮವಿದೆ. ಬುಧವಾರ ಮುಂಜಾನೆ 4.57ರ ಸುಮಾರಿಗೆ ಈ ಘಟನೆ ನಡೆದಿದ್ದು, ಗ್ರಾಮದ ನೇಚರ್ ವಿಲ್ಲಾದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಓಡಾಡಿರುವ ದೃಶ್ಯ ಸೆರೆಯಾಗಿದೆ.</p>.<p>ಕಾಡಿನಲ್ಲಿ ಚಿರತೆಗಳಿರುವುದನ್ನು ದನ-ಮೇಕೆ ಮೇಯಿಸುವವರು ಗುರುತಿಸಿದ್ದಾರೆ. ಚನ್ನೋಹಳ್ಳಿ ಮೂಲಕ ರಾಯರಪಾಳ್ಯ, ಮಧುಗಿರಿ ರಸ್ತೆಗಳಲ್ಲಿ ಚಿರತೆಗಳು ಕಾಣಿಸಿಕೊಂಡಿವೆ. ಬೆಟ್ಟದ ಮೇಲೆ ದೇವಾಲಯವಿದೆ. ಪ್ರತಿ ಶನಿವಾರ, ಹಬ್ಬಗಳು ಹಾಗೂ ಸಂಕ್ರಾಂತಿಯಲ್ಲಿ ಪೂಜೆ ನಡೆಯುತ್ತವೆ.</p>.<p>‘ರಾಮದೇವರ ಬೆಟ್ಟದ ತಪ್ಪಲಿಗೆ ಹೊಂದಿಕೊಂಡಂತೆ ತೋಟ ಹಾಗೂ ಮನೆಗಳಿವೆ. ಹೈನುಗಾರಿಕೆ ಮಾಡುತ್ತಾ ಬಂದಿದ್ದೇವೆ. ಇಲ್ಲಿ ಚಿರತೆ, ಕರಡಿಗಳು ಇದ್ದು ಸಂಜೆಯ ವೇಳೆ ಓಡಾಡಲು ಭಯವಾಗುತ್ತದೆ‘ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಂ.ಜಿ. ಗಂಗಾಧರ್ ಹೇಳುತ್ತಾರೆ. </p>.ದಾಬಸ್ ಪೇಟೆ: ಮತ್ತೆ ಹೆಗ್ಗುಂದ ಬೆಟ್ಟದ ಮೇಲೆ ಚಿರತೆ ಪ್ರತ್ಯಕ್ಷ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾಬಸ್ ಪೇಟೆ:</strong> ಹೋಬಳಿಯ ರಾಮೇನಹಳ್ಳಿ ಗ್ರಾಮದ ಸಮೀಪ ಚಿರತೆ ಕಾಣಿಸಿಕೊಂಡಿದ್ದು, ನಾಯಿಗಳು ಜೋರಾಗಿ ಬೊಗಳಿವೆ. ಆ ಶಬ್ದಕ್ಕೆ ಜನರು ಎಚ್ಚರಗೊಂಡಿದ್ದರಿಂದ ಗದ್ದಲವಾಗಿ ಚಿರತೆ ಓಡಿ ಹೋಗಿದೆ. ಈ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.</p>.<p>ರಾಮದೇವರ ಬೆಟ್ಟದ ಕಾಡಿಗೆ ಹೊಂದಿಕೊಂಡಂತೆ ರಾಮನಹಳ್ಳಿ ಗ್ರಾಮವಿದೆ. ಬುಧವಾರ ಮುಂಜಾನೆ 4.57ರ ಸುಮಾರಿಗೆ ಈ ಘಟನೆ ನಡೆದಿದ್ದು, ಗ್ರಾಮದ ನೇಚರ್ ವಿಲ್ಲಾದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಓಡಾಡಿರುವ ದೃಶ್ಯ ಸೆರೆಯಾಗಿದೆ.</p>.<p>ಕಾಡಿನಲ್ಲಿ ಚಿರತೆಗಳಿರುವುದನ್ನು ದನ-ಮೇಕೆ ಮೇಯಿಸುವವರು ಗುರುತಿಸಿದ್ದಾರೆ. ಚನ್ನೋಹಳ್ಳಿ ಮೂಲಕ ರಾಯರಪಾಳ್ಯ, ಮಧುಗಿರಿ ರಸ್ತೆಗಳಲ್ಲಿ ಚಿರತೆಗಳು ಕಾಣಿಸಿಕೊಂಡಿವೆ. ಬೆಟ್ಟದ ಮೇಲೆ ದೇವಾಲಯವಿದೆ. ಪ್ರತಿ ಶನಿವಾರ, ಹಬ್ಬಗಳು ಹಾಗೂ ಸಂಕ್ರಾಂತಿಯಲ್ಲಿ ಪೂಜೆ ನಡೆಯುತ್ತವೆ.</p>.<p>‘ರಾಮದೇವರ ಬೆಟ್ಟದ ತಪ್ಪಲಿಗೆ ಹೊಂದಿಕೊಂಡಂತೆ ತೋಟ ಹಾಗೂ ಮನೆಗಳಿವೆ. ಹೈನುಗಾರಿಕೆ ಮಾಡುತ್ತಾ ಬಂದಿದ್ದೇವೆ. ಇಲ್ಲಿ ಚಿರತೆ, ಕರಡಿಗಳು ಇದ್ದು ಸಂಜೆಯ ವೇಳೆ ಓಡಾಡಲು ಭಯವಾಗುತ್ತದೆ‘ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಂ.ಜಿ. ಗಂಗಾಧರ್ ಹೇಳುತ್ತಾರೆ. </p>.ದಾಬಸ್ ಪೇಟೆ: ಮತ್ತೆ ಹೆಗ್ಗುಂದ ಬೆಟ್ಟದ ಮೇಲೆ ಚಿರತೆ ಪ್ರತ್ಯಕ್ಷ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>