‘ಮಹಿಳೆಯ ಸ್ವಾಯತ್ತೆಗೆ ಮಹತ್ವ ನೀಡಲೇಬೇಕು. ಆದರೆ ಇನ್ನೂ ಜನಿಸಿರದ ಮಗುವಿನ ಕಥೆ ಏನು? ಇಲ್ಲಿ ಆ ಮಗುವಿನ ಪರವಾಗಿ ವಾದ ಮಂಡಿಸಲು ಯಾರೂ ಇಲ್ಲ. ಹುಟ್ಟಿರದ ಮಗುವಿನ ಹಕ್ಕುಗಳನ್ನು ಇಲ್ಲಿ ಸಮಾನ ನೆಲೆಯಲ್ಲಿ ಕಾಣುವುದು ಹೇಗೆ’ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರು ಇರುವ ನ್ಯಾಯಪೀಠವು ಕೇಳಿತು.