ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ರೈಲಿನಲ್ಲಿ ಬೆಂಕಿ ವದಂತಿ: ಇಳಿದು ಪಕ್ಕದ ಹಳಿಗೆ ಹೋದವರ ಮೇಲೆ ಹರಿದ ಎಕ್ಸ್‌ಪ್ರೆಸ್

Published : 22 ಜನವರಿ 2025, 12:44 IST
Last Updated : 22 ಜನವರಿ 2025, 12:44 IST
ಫಾಲೋ ಮಾಡಿ
Comments
ಆಗಿದ್ದೇನು?
‘ಪುಷ್ಪಕ್‌ ಎಕ್ಸ್‌ಪ್ರೆಸ್‌ನ ಜನರಲ್ ಬೋಗಿಯೊಂದರ ಆಕ್ಸೆಲ್‌ ತೀವ್ರವಾಗಿ ಬಿಸಿಯಾಗಿತ್ತು. ಆದ್ದರಿಂದ ಆಕ್ಸೆಲ್‌ನಲ್ಲಿ ಕಿಡಿ ಹೊತ್ತಿಕೊಂಡಿತು. ಇದರಿಂದ ಹೊಗೆ ಎದ್ದಿತು. ಹೊಗೆ ನೋಡುತ್ತಿದ್ದಂತೆಯೇ ಜನರು ಭೀತರಾದರು. ಯಾರೋ ಒಬ್ಬರು ರೈಲಿನ ಚೈನ್‌ ಎಳೆದರು. ಕೆಲವರು ರೈಲಿನಿಂದ ಹಾರಿ ಪಕ್ಕದ ಹಳಿಯ ಮೇಲಿದ್ದರು. ಇದೇ ವೇಳೆ ಪುಷ್ಪಕ್‌ ಎಕ್ಸ್‌ಪ್ರೆಸ್‌ಗೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ಗೆ ಸಿಕ್ಕಿ ಹಲವರು ಮೃತಪಟ್ಟರು’ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ 8 ಆಂಬುಲೆನ್ಸ್‌ ಕಳುಹಿಸಲಾಗಿದೆ. ಗಾಯಾಳುಗಳ ಚಿಕಿತ್ಸೆಗೆ ತಯಾರಾಗಿರಿ ಎಂದು ಸುತ್ತಮುತ್ತಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ.
–ದೇವೇಂದ್ರ ಘಡಣವೀಸ್‌, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT