<p><strong>ಸುಕ್ಮಾ:</strong> ತಲೆಗೆ ₹36 ಬಹುಮಾನ ಘೋಷಣೆಯಾಗಿದ್ದ 6 ನಕ್ಸಲರು ಗುರುವಾರ ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.</p><p>ದುಧಿ ಪೊಜ್ಜ ಹಾಗೂ ಅವರ ಪತ್ನಿ ದುಧಿ ಪೊಜ್ಜೆ, ಅಯಾಟೆ ಕೊರ್ಸೆ ಅಲಿಯಾಸ್ ಜಯಕ್ಕಾ, ಕವಾಸಿ ಮುಡ, ಕರಮ್ ನರಣ್ಣ ಅಲಿಯಾಸ್ ಭೂಮಾ ಹಾಗೂ ಮಡ್ಕಂ ಸುಕ್ಕ ಅಲಿಯಾಸ್ ರೈನು ಶರಣಾದ ನಕ್ಸಲರು.</p>.ಛತ್ತೀಸಗಢ ಗಡಿಯಲ್ಲಿ ನಕ್ಸಲ್ ಶಿಬಿರದ ಮೇಲೆ ದಾಳಿ: ಜಿಲೆಟಿನ್, ಸ್ಫೋಟಕ ವಶ.<p>ಮಾವೋವಾದಿ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ ಬೆಟಾಲಿಯನ್ ನಂಬರ್ 1 ಹಾಗೂ ಪೀಪಲ್ಸ್ ಪಾರ್ಟಿ ಕಮಿಟಿ ಸದಸ್ಯರಾಗಿದ್ದ ಪೊಜ್ಜ ಅವರ ತಲೆಗೆ ₹8 ಲಕ್ಷ ಹಾಗೂ ಅವರ ಪತ್ನಿ ಪೊಜ್ಜೆ ಅವರ ತಲೆಗೂ ₹8 ಲಕ್ಷ ಬಹುಮಾನ ಘೋಷಣೆಯಾಗಿತ್ತು ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ತಿಳಿಸಿದ್ದಾರೆ.</p><p>ಕಿಸ್ತರಾಮ್ ಸಮಿತಿಯ ಕಾಮ್ರೆಡ್ ಹಾಗೂ ಏರಿಯಾ ಕಮಿಟಿ ಸದಸ್ಯರಾದ ಜಯಕ್ಕ ಅವರ ತಲೆಗೆ ₹5 ಲಕ್ಷ, ಮುಡ ಹಾಗೂ ಭೂಮಾ ತಲೆಗೆ ₹15 ಲಕ್ಷ ಬಹುಮಾನ ಘೋಷಿಸಲಾಗಿತ್ತು.</p>.ಶಂಕಿತ ನಕ್ಸಲ್ ಸುರೇಶ್ ಬಂಧನ: ಐಸಿಯುನಲ್ಲಿ ಚಿಕಿತ್ಸೆ.<p>ನಕ್ಸಲರಿಗೆ ಪುನರ್ವಸತಿ ಕಲ್ಪಿಸುವ ಜಿಲ್ಲಾ ಪೊಲೀಸರ ‘ಹೊಸ ಉದಯ’ ಯೋಜನೆಯಿಂದ ಪ್ರೇರಣೆಗೊಂಡು ಇವರು ಶರಣಾಗಿದ್ದಾರೆ. ರಾಜ್ಯ ಸರ್ಕಾರದ ಶರಣಾಗತಿ ಹಾಗೂ ಪುನರ್ವಸತಿ ನೀತಿಯಡಿ ಅವರಿಗೆ ಸೌಲಭ್ಯಗಳನ್ನು ನೀಡಲಾಗುವುದು ಎಂದು ಚವಾಣ್ ತಿಳಿಸಿದ್ದಾರೆ.</p> .ನಕ್ಸಲ್ ನಿಗ್ರಹ ಕಾರ್ಯಾಚರಣೆ: ಮಗು ಸಾವು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಕ್ಮಾ:</strong> ತಲೆಗೆ ₹36 ಬಹುಮಾನ ಘೋಷಣೆಯಾಗಿದ್ದ 6 ನಕ್ಸಲರು ಗುರುವಾರ ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.</p><p>ದುಧಿ ಪೊಜ್ಜ ಹಾಗೂ ಅವರ ಪತ್ನಿ ದುಧಿ ಪೊಜ್ಜೆ, ಅಯಾಟೆ ಕೊರ್ಸೆ ಅಲಿಯಾಸ್ ಜಯಕ್ಕಾ, ಕವಾಸಿ ಮುಡ, ಕರಮ್ ನರಣ್ಣ ಅಲಿಯಾಸ್ ಭೂಮಾ ಹಾಗೂ ಮಡ್ಕಂ ಸುಕ್ಕ ಅಲಿಯಾಸ್ ರೈನು ಶರಣಾದ ನಕ್ಸಲರು.</p>.ಛತ್ತೀಸಗಢ ಗಡಿಯಲ್ಲಿ ನಕ್ಸಲ್ ಶಿಬಿರದ ಮೇಲೆ ದಾಳಿ: ಜಿಲೆಟಿನ್, ಸ್ಫೋಟಕ ವಶ.<p>ಮಾವೋವಾದಿ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ ಬೆಟಾಲಿಯನ್ ನಂಬರ್ 1 ಹಾಗೂ ಪೀಪಲ್ಸ್ ಪಾರ್ಟಿ ಕಮಿಟಿ ಸದಸ್ಯರಾಗಿದ್ದ ಪೊಜ್ಜ ಅವರ ತಲೆಗೆ ₹8 ಲಕ್ಷ ಹಾಗೂ ಅವರ ಪತ್ನಿ ಪೊಜ್ಜೆ ಅವರ ತಲೆಗೂ ₹8 ಲಕ್ಷ ಬಹುಮಾನ ಘೋಷಣೆಯಾಗಿತ್ತು ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ತಿಳಿಸಿದ್ದಾರೆ.</p><p>ಕಿಸ್ತರಾಮ್ ಸಮಿತಿಯ ಕಾಮ್ರೆಡ್ ಹಾಗೂ ಏರಿಯಾ ಕಮಿಟಿ ಸದಸ್ಯರಾದ ಜಯಕ್ಕ ಅವರ ತಲೆಗೆ ₹5 ಲಕ್ಷ, ಮುಡ ಹಾಗೂ ಭೂಮಾ ತಲೆಗೆ ₹15 ಲಕ್ಷ ಬಹುಮಾನ ಘೋಷಿಸಲಾಗಿತ್ತು.</p>.ಶಂಕಿತ ನಕ್ಸಲ್ ಸುರೇಶ್ ಬಂಧನ: ಐಸಿಯುನಲ್ಲಿ ಚಿಕಿತ್ಸೆ.<p>ನಕ್ಸಲರಿಗೆ ಪುನರ್ವಸತಿ ಕಲ್ಪಿಸುವ ಜಿಲ್ಲಾ ಪೊಲೀಸರ ‘ಹೊಸ ಉದಯ’ ಯೋಜನೆಯಿಂದ ಪ್ರೇರಣೆಗೊಂಡು ಇವರು ಶರಣಾಗಿದ್ದಾರೆ. ರಾಜ್ಯ ಸರ್ಕಾರದ ಶರಣಾಗತಿ ಹಾಗೂ ಪುನರ್ವಸತಿ ನೀತಿಯಡಿ ಅವರಿಗೆ ಸೌಲಭ್ಯಗಳನ್ನು ನೀಡಲಾಗುವುದು ಎಂದು ಚವಾಣ್ ತಿಳಿಸಿದ್ದಾರೆ.</p> .ನಕ್ಸಲ್ ನಿಗ್ರಹ ಕಾರ್ಯಾಚರಣೆ: ಮಗು ಸಾವು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>