<p>‘ಇಂದು ನಾನು ಪೊಂದುವೆನಾನಂದವಾ, ಸಂದೇಹವಿಲ್ಲದೆ ಬಡ ನರರ ಹುರಿದು ಸಂಡಿಗೆಯ ಮಾಡಿ, ಕರುಳಕಿತ್ತು ಶಾವಿಗೆಯ ಪಾಯಸವ ಮಾಡಿ ಕುಡಿಯುವೆ...’ ತುರೇಮಣೆ ನಾಟಕದ ದಿರುಸಿಲ್ಲದೇ ಘೋರ ಶೂರ್ಪನಖಿಯ ಪದ್ಯ ಹಾಡಿಕ್ಯಬತ್ತಿದ್ದರು.</p>.<p>‘ಏನ್ಸಾ, ಏನು ವಿಶೇಷ? ಹೊತ್ನಂತೇ ಗ್ಯಾನಪದ ಗೀತೆ ಹಾಡಿಕ್ಯ ಬತ್ತಿದ್ದರಿ? ಅದ್ಯಾರು ನಿಮ್ಮ ಮೂಗು ಕೂದೋರು?’ ತುರೇಮಣೆಗೆ ಕೇಳಿದೆ.</p>.<p>‘ಯಾರಿಗೇಳನಪ್ಪಾ ನಮ್ಮ ಪ್ರಾಬ್ಲಮ್ಮು. ರಾಜಕೀಯದ ಕಲಬೆರಕೆಯ ಹೊಡೆತಕ್ಕೆ ನಮ್ಮ ಮೂಗು-ಬಾಯಿ, ನಾಲಿಗೆ, ಕಣ್ಣು ಕೆಟ್ಟು ಕೆರ ಹಿಡಿದೋಗ್ಯವೆ. ಬಾಯಲ್ಲಿ ಮಾತ್ರ ಜನದ ಆಶಯವೇ ಮುಖ್ಯ ಅಂತರೆ ಕನೋ. ಬರೀ ಗಾಳಿಗಂಟಲು, ಗಿಲೀಟು ಮಾತು, ಚಿತಾವಣೆ, ಬಂಡಾಟ’ ನಿಟ್ಟುಸಿರುಬುಟ್ಟರು.</p>.<p>‘ಸರ್ಕಾರದ ಎಲ್ಲಾ ನಿಗಮ-ಮಂಡಳಿಗಳು ಕುಲಗೆಟ್ಟು ಹಗರಣ ಮಾಡಿಕ್ಯಂದವೆ. ನೇಮಕಾತಿಗಳಲ್ಲಿ ಭ್ರಷ್ಟಾಚಾರ ಬೇರುಬುಟ್ಟದೆ. ರಾಜಕಾರಣಿಗಳ ಹೆಸರು ಬರೆದು ನೇಣಾಕ್ಕ್ಯಂದರೂ ಕ್ರಮ ಇಲ್ಲ. ಬರೀ ಟ್ವಿಸ್ಟ್ ಮಾತ್ರ. ಹನಿಟ್ರಾಪ್ ಅಂತರೆ, ಸುಮ್ಮಗಾಯ್ತರೆ. ಸುಳ್ಳು ಮಾತಾಡಿ ಮಾತಾಡಿ ತಳ್ಳಾಯ್ತರೆ’ ಬೇಜಾರು ಮಾಡಿಕ್ಯಂದೆ.</p>.<p>‘ರಾಜಕೀಯದೋರ ತೆವಲಿಗೆ ಹಾಲು-ನೀರು, ಕರಂಟು, ಎಣ್ಣೆ, ಡೀಜೆಲ್ಲು, ಟೋಲು ರೇಟು ಮ್ಯಾಕ್ಕೋಗಿ ಅಟ್ಟ ಸೇರಿಕ್ಯಂಡವೆ. ಅಷ್ಟೇ ಯಾಕೆ ಮಂಜಮ್ಮನಂತಾ ಮಂಜಮ್ಮನೂ ಟೀ ರೇಟು ಏರಿಸ್ತಳಂತೆ. ಮೊನ್ನೆ ಮಲ್ಲೇಶಣ್ಣ ಹಂಗಂತಿದ್ದ’ ಯಂಟಪ್ಪಣ್ಣ ಸಾರಣೆ ಮಾಡಿತು.</p>.<p>‘ಅಧಿಕಾರ ಸಿಕ್ಕೂಗಂಟ ಆಕ್ರೋಶ. ಸಿಂಹಾಸನ ಸಿಕ್ಕಿದ ಮೇಲೆ ಗಡಿಬಿಡಿ. ಇಕ್ಕಡೆ ಮೈತ್ರಿಯಲ್ಲಿ ಅಹಂ-ಖಾರ ಕಾಣ್ತಾ ಅದೆ’ ಅಂತಂದೆ.</p>.<p>‘ರಾಜಕಾರಣಿಗಳು ಅಧಿಕಾರ ಕೊಡ್ಲಿ ಅಂತ ಗುನ್ನಂಪಟ್ಟೆ ಇಕ್ಕ್ಯಂದು ದಿಲ್ಲಿಗೋಗಿ ‘ನಾನು ಯಾವುದೇ ಹೊಣೆ ಹೊರಲು ಸಿದ್ಧ’ ಅಂತ ನುಲಿಯದು ಕಂಡಿಲ್ಲವಾ?’ ತುರೇಮಣೆ ವಿವರಿಸಿದರು.</p>.<p>‘ದಿಟ ಕನೇಳಿ ಸಾ. ಕಾಸು ಮಾಡಕ್ಕೆ ಕೋಡ್ವರ್ಡ್ ಮಾಡಿಕ್ಯಂದವೆ. ಉಪ್ಪುಖಂಡ ಎಲ್ಲಾ ರಾಜಕೀಯದೋರಿಗೆ. ನಮಗೆ ಮಾತ್ರ ಉಪ್ಪೆಸರು-ರಾಗಿಮುದ್ದೇನೇ ಗತಿ. ಸಾಲಾಯ ತಸ್ಮೈ ನಮಃ’ ಅಂತ ನಗಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಇಂದು ನಾನು ಪೊಂದುವೆನಾನಂದವಾ, ಸಂದೇಹವಿಲ್ಲದೆ ಬಡ ನರರ ಹುರಿದು ಸಂಡಿಗೆಯ ಮಾಡಿ, ಕರುಳಕಿತ್ತು ಶಾವಿಗೆಯ ಪಾಯಸವ ಮಾಡಿ ಕುಡಿಯುವೆ...’ ತುರೇಮಣೆ ನಾಟಕದ ದಿರುಸಿಲ್ಲದೇ ಘೋರ ಶೂರ್ಪನಖಿಯ ಪದ್ಯ ಹಾಡಿಕ್ಯಬತ್ತಿದ್ದರು.</p>.<p>‘ಏನ್ಸಾ, ಏನು ವಿಶೇಷ? ಹೊತ್ನಂತೇ ಗ್ಯಾನಪದ ಗೀತೆ ಹಾಡಿಕ್ಯ ಬತ್ತಿದ್ದರಿ? ಅದ್ಯಾರು ನಿಮ್ಮ ಮೂಗು ಕೂದೋರು?’ ತುರೇಮಣೆಗೆ ಕೇಳಿದೆ.</p>.<p>‘ಯಾರಿಗೇಳನಪ್ಪಾ ನಮ್ಮ ಪ್ರಾಬ್ಲಮ್ಮು. ರಾಜಕೀಯದ ಕಲಬೆರಕೆಯ ಹೊಡೆತಕ್ಕೆ ನಮ್ಮ ಮೂಗು-ಬಾಯಿ, ನಾಲಿಗೆ, ಕಣ್ಣು ಕೆಟ್ಟು ಕೆರ ಹಿಡಿದೋಗ್ಯವೆ. ಬಾಯಲ್ಲಿ ಮಾತ್ರ ಜನದ ಆಶಯವೇ ಮುಖ್ಯ ಅಂತರೆ ಕನೋ. ಬರೀ ಗಾಳಿಗಂಟಲು, ಗಿಲೀಟು ಮಾತು, ಚಿತಾವಣೆ, ಬಂಡಾಟ’ ನಿಟ್ಟುಸಿರುಬುಟ್ಟರು.</p>.<p>‘ಸರ್ಕಾರದ ಎಲ್ಲಾ ನಿಗಮ-ಮಂಡಳಿಗಳು ಕುಲಗೆಟ್ಟು ಹಗರಣ ಮಾಡಿಕ್ಯಂದವೆ. ನೇಮಕಾತಿಗಳಲ್ಲಿ ಭ್ರಷ್ಟಾಚಾರ ಬೇರುಬುಟ್ಟದೆ. ರಾಜಕಾರಣಿಗಳ ಹೆಸರು ಬರೆದು ನೇಣಾಕ್ಕ್ಯಂದರೂ ಕ್ರಮ ಇಲ್ಲ. ಬರೀ ಟ್ವಿಸ್ಟ್ ಮಾತ್ರ. ಹನಿಟ್ರಾಪ್ ಅಂತರೆ, ಸುಮ್ಮಗಾಯ್ತರೆ. ಸುಳ್ಳು ಮಾತಾಡಿ ಮಾತಾಡಿ ತಳ್ಳಾಯ್ತರೆ’ ಬೇಜಾರು ಮಾಡಿಕ್ಯಂದೆ.</p>.<p>‘ರಾಜಕೀಯದೋರ ತೆವಲಿಗೆ ಹಾಲು-ನೀರು, ಕರಂಟು, ಎಣ್ಣೆ, ಡೀಜೆಲ್ಲು, ಟೋಲು ರೇಟು ಮ್ಯಾಕ್ಕೋಗಿ ಅಟ್ಟ ಸೇರಿಕ್ಯಂಡವೆ. ಅಷ್ಟೇ ಯಾಕೆ ಮಂಜಮ್ಮನಂತಾ ಮಂಜಮ್ಮನೂ ಟೀ ರೇಟು ಏರಿಸ್ತಳಂತೆ. ಮೊನ್ನೆ ಮಲ್ಲೇಶಣ್ಣ ಹಂಗಂತಿದ್ದ’ ಯಂಟಪ್ಪಣ್ಣ ಸಾರಣೆ ಮಾಡಿತು.</p>.<p>‘ಅಧಿಕಾರ ಸಿಕ್ಕೂಗಂಟ ಆಕ್ರೋಶ. ಸಿಂಹಾಸನ ಸಿಕ್ಕಿದ ಮೇಲೆ ಗಡಿಬಿಡಿ. ಇಕ್ಕಡೆ ಮೈತ್ರಿಯಲ್ಲಿ ಅಹಂ-ಖಾರ ಕಾಣ್ತಾ ಅದೆ’ ಅಂತಂದೆ.</p>.<p>‘ರಾಜಕಾರಣಿಗಳು ಅಧಿಕಾರ ಕೊಡ್ಲಿ ಅಂತ ಗುನ್ನಂಪಟ್ಟೆ ಇಕ್ಕ್ಯಂದು ದಿಲ್ಲಿಗೋಗಿ ‘ನಾನು ಯಾವುದೇ ಹೊಣೆ ಹೊರಲು ಸಿದ್ಧ’ ಅಂತ ನುಲಿಯದು ಕಂಡಿಲ್ಲವಾ?’ ತುರೇಮಣೆ ವಿವರಿಸಿದರು.</p>.<p>‘ದಿಟ ಕನೇಳಿ ಸಾ. ಕಾಸು ಮಾಡಕ್ಕೆ ಕೋಡ್ವರ್ಡ್ ಮಾಡಿಕ್ಯಂದವೆ. ಉಪ್ಪುಖಂಡ ಎಲ್ಲಾ ರಾಜಕೀಯದೋರಿಗೆ. ನಮಗೆ ಮಾತ್ರ ಉಪ್ಪೆಸರು-ರಾಗಿಮುದ್ದೇನೇ ಗತಿ. ಸಾಲಾಯ ತಸ್ಮೈ ನಮಃ’ ಅಂತ ನಗಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>