<p>‘ನಾಡಪ್ರಭುಗಳೇ ತಾವು!?’ ಅಚ್ಚರಿಯಿಂದ ಎದ್ದು ಕುಳಿತರು ಬಿಬಿಎಂಪಿ ಡೆಪ್ಯುಟಿ ಕಮಿಷನರ್. </p>.<p>‘ಹೌದು ನಾನೇ, ಈ ಬೆಂಗಳೂರು ನಗರ ನಿರ್ಮಾಣವಾಗಿದ್ದು ನನ್ನ ಅವಧಿಯಲ್ಲೇ’ ಕೆಂಪೇಗೌಡರು ಹೇಳಿದರು. </p>.<p>‘ಗೊತ್ತು ಸ್ವಾಮಿ, ನನ್ನ ಕನಸಿನಲ್ಲಿ ಬರಲು ಕಾರಣ?’ </p>.<p>‘ಏನಿಲ್ಲ, ನೀನು ಸೂಟ್ ಮೇಲೆ ಸೂಟ್ ಖರೀದಿಸು ತ್ತಿದ್ದುದನ್ನ ಗಮನಿಸ್ತಿದ್ದೆ. ಕುತೂಹಲವೆನಿಸಿತು. ನೇರವಾಗಿ ಮಾತನಾಡಿಕೊಂಡು ಹೋಗೋಣ ಎಂದು ಬಂದೆ’.</p>.<p>‘ನೀವು ಕಟ್ಟಿದ ಬೆಂಗಳೂರನ್ನ ಈಗ ಐದು ಭಾಗ ಮಾಡಿದ್ದಾರೆ. ಅಂದ್ರೆ ಐದು ಕಾರ್ಪೊರೇಷನ್ಗಳು ತಲೆ ಎತ್ತಲಿವೆ. ಈಗ ಇದು ಗ್ರೇಟರ್ ಬೆಂಗಳೂರು!’ </p>.<p>‘ಅದಕ್ಕೆ, ನಿನಗೇಕೆ ಖುಷಿ?’ </p>.<p>‘ನಾನು ಉಪ ಆಯುಕ್ತ ಬದಲು, ಆಯುಕ್ತ ಆಗ್ತೀನಿ. ಅದೇ ಖುಷಿ’.</p>.<p>‘ಅದು ಸರಿ, ಎಷ್ಟೋ ಜನ ತಮ್ಮ ಹೆಸರ ಮುಂದಿನ ‘ಉಪ’ ನಾಮ ತೆಗೆಸಿಕೊಳ್ಳಲು ಕಸರತ್ತನ್ನೇ ಮಾಡುತ್ತಿದ್ದಾರೆ, ನಿನಗೆ ಕುಳಿತಲ್ಲೇ ಆ ಅದೃಷ್ಟ ಒಲಿದಿದೆ’ ನಕ್ಕರು ಗೌಡರು. </p>.<p>‘ನಾಡಪ್ರಭುಗಳು ಬಳಲಿದಂತೆ ಕಾಣುತ್ತಿದ್ದೀರಲ್ಲ, ನಿಮ್ಮ ಕುದುರೆಗಳೆಲ್ಲಿ?’ </p>.<p>‘ಮೂರ್ಖ, ಈಗಲೂ ಕುದುರೆ ಮೇಲೆ ಬರಲಾಗುತ್ತದೆಯೇ? ನಾನು ಬೈಕ್ನಲ್ಲಿ ಬಂದೆ’.</p>.<p>‘ಸ್ವರ್ಗದಿಂದ ಬರುವುದು ಕಷ್ಟವಾಯಿತೇನೋ?’</p>.<p>‘ಸ್ವರ್ಗದಿಂದ ಬರುವುದು ಕಷ್ಟವಾಗಲಿಲ್ಲ, ಆದರೆ, ನಿಮ್ಮ ಗ್ರೇಟರ್ ಬೆಂಗಳೂರು ಪ್ರವೇಶಿಸಿದ ತಕ್ಷಣ, ಆಳೆತ್ತರದ ಗುಂಡಿಯಲ್ಲಿ ನನ್ನ ಬೈಕ್ ಎದ್ದು, ಬಿದ್ದು ಬರುವುದರಲ್ಲೇ ಸುಸ್ತಾಗಿ ಹೋಯಿತು’.</p>.<p>‘ಪ್ರಭುಗಳೇ, ನೀವು ಬರುವುದು ಗೊತ್ತಿದ್ದರೆ ಅಲ್ಲಲ್ಲಿ ಪ್ಯಾಚ್ ಹಾಕಿಸಿ, ಜೀರೊ ಟ್ರಾಫಿಕ್ ಮಾಡಿಸುತ್ತಿದ್ದೆ’.</p>.<p>‘ನಿಮ್ಮ ಬೆಂಗಳೂರು ಟ್ರಾಫಿಕ್ಗೆ ಎಂಥ ಹೀರೊಗಳೂ ಜೀರೊಗಳಾಗುತ್ತಾರೆ ಬಿಡು’ ಎಂದ ಕೆಂಪೇಗೌಡರು, ‘ಐದು ಕಾರ್ಪೊರೇಷನ್ ಮಾಡೋದರಿಂದ ತಕ್ಷಣದ ಒಂದು ಅನುಕೂಲ ಹೇಳು ನೋಡೋಣ’ ಎಂದರು.</p>.<p>‘ಟೇಬಲ್ಗಳ ಸಂಖ್ಯೆ ಜಾಸ್ತಿ ಆಗುತ್ತೆ ಸಾರ್’ ಎಂದು ಅಧಿಕಾರಿ ಹೇಳುತ್ತಿದ್ದಂತೆ, ಮಾಯವಾದರು ನಾಡಪ್ರಭುಗಳು! </p>.ಚುರುಮುರಿ Podcast: ಕೆಂಪೇಗೌಡರು ಬಂದರು! .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನಾಡಪ್ರಭುಗಳೇ ತಾವು!?’ ಅಚ್ಚರಿಯಿಂದ ಎದ್ದು ಕುಳಿತರು ಬಿಬಿಎಂಪಿ ಡೆಪ್ಯುಟಿ ಕಮಿಷನರ್. </p>.<p>‘ಹೌದು ನಾನೇ, ಈ ಬೆಂಗಳೂರು ನಗರ ನಿರ್ಮಾಣವಾಗಿದ್ದು ನನ್ನ ಅವಧಿಯಲ್ಲೇ’ ಕೆಂಪೇಗೌಡರು ಹೇಳಿದರು. </p>.<p>‘ಗೊತ್ತು ಸ್ವಾಮಿ, ನನ್ನ ಕನಸಿನಲ್ಲಿ ಬರಲು ಕಾರಣ?’ </p>.<p>‘ಏನಿಲ್ಲ, ನೀನು ಸೂಟ್ ಮೇಲೆ ಸೂಟ್ ಖರೀದಿಸು ತ್ತಿದ್ದುದನ್ನ ಗಮನಿಸ್ತಿದ್ದೆ. ಕುತೂಹಲವೆನಿಸಿತು. ನೇರವಾಗಿ ಮಾತನಾಡಿಕೊಂಡು ಹೋಗೋಣ ಎಂದು ಬಂದೆ’.</p>.<p>‘ನೀವು ಕಟ್ಟಿದ ಬೆಂಗಳೂರನ್ನ ಈಗ ಐದು ಭಾಗ ಮಾಡಿದ್ದಾರೆ. ಅಂದ್ರೆ ಐದು ಕಾರ್ಪೊರೇಷನ್ಗಳು ತಲೆ ಎತ್ತಲಿವೆ. ಈಗ ಇದು ಗ್ರೇಟರ್ ಬೆಂಗಳೂರು!’ </p>.<p>‘ಅದಕ್ಕೆ, ನಿನಗೇಕೆ ಖುಷಿ?’ </p>.<p>‘ನಾನು ಉಪ ಆಯುಕ್ತ ಬದಲು, ಆಯುಕ್ತ ಆಗ್ತೀನಿ. ಅದೇ ಖುಷಿ’.</p>.<p>‘ಅದು ಸರಿ, ಎಷ್ಟೋ ಜನ ತಮ್ಮ ಹೆಸರ ಮುಂದಿನ ‘ಉಪ’ ನಾಮ ತೆಗೆಸಿಕೊಳ್ಳಲು ಕಸರತ್ತನ್ನೇ ಮಾಡುತ್ತಿದ್ದಾರೆ, ನಿನಗೆ ಕುಳಿತಲ್ಲೇ ಆ ಅದೃಷ್ಟ ಒಲಿದಿದೆ’ ನಕ್ಕರು ಗೌಡರು. </p>.<p>‘ನಾಡಪ್ರಭುಗಳು ಬಳಲಿದಂತೆ ಕಾಣುತ್ತಿದ್ದೀರಲ್ಲ, ನಿಮ್ಮ ಕುದುರೆಗಳೆಲ್ಲಿ?’ </p>.<p>‘ಮೂರ್ಖ, ಈಗಲೂ ಕುದುರೆ ಮೇಲೆ ಬರಲಾಗುತ್ತದೆಯೇ? ನಾನು ಬೈಕ್ನಲ್ಲಿ ಬಂದೆ’.</p>.<p>‘ಸ್ವರ್ಗದಿಂದ ಬರುವುದು ಕಷ್ಟವಾಯಿತೇನೋ?’</p>.<p>‘ಸ್ವರ್ಗದಿಂದ ಬರುವುದು ಕಷ್ಟವಾಗಲಿಲ್ಲ, ಆದರೆ, ನಿಮ್ಮ ಗ್ರೇಟರ್ ಬೆಂಗಳೂರು ಪ್ರವೇಶಿಸಿದ ತಕ್ಷಣ, ಆಳೆತ್ತರದ ಗುಂಡಿಯಲ್ಲಿ ನನ್ನ ಬೈಕ್ ಎದ್ದು, ಬಿದ್ದು ಬರುವುದರಲ್ಲೇ ಸುಸ್ತಾಗಿ ಹೋಯಿತು’.</p>.<p>‘ಪ್ರಭುಗಳೇ, ನೀವು ಬರುವುದು ಗೊತ್ತಿದ್ದರೆ ಅಲ್ಲಲ್ಲಿ ಪ್ಯಾಚ್ ಹಾಕಿಸಿ, ಜೀರೊ ಟ್ರಾಫಿಕ್ ಮಾಡಿಸುತ್ತಿದ್ದೆ’.</p>.<p>‘ನಿಮ್ಮ ಬೆಂಗಳೂರು ಟ್ರಾಫಿಕ್ಗೆ ಎಂಥ ಹೀರೊಗಳೂ ಜೀರೊಗಳಾಗುತ್ತಾರೆ ಬಿಡು’ ಎಂದ ಕೆಂಪೇಗೌಡರು, ‘ಐದು ಕಾರ್ಪೊರೇಷನ್ ಮಾಡೋದರಿಂದ ತಕ್ಷಣದ ಒಂದು ಅನುಕೂಲ ಹೇಳು ನೋಡೋಣ’ ಎಂದರು.</p>.<p>‘ಟೇಬಲ್ಗಳ ಸಂಖ್ಯೆ ಜಾಸ್ತಿ ಆಗುತ್ತೆ ಸಾರ್’ ಎಂದು ಅಧಿಕಾರಿ ಹೇಳುತ್ತಿದ್ದಂತೆ, ಮಾಯವಾದರು ನಾಡಪ್ರಭುಗಳು! </p>.ಚುರುಮುರಿ Podcast: ಕೆಂಪೇಗೌಡರು ಬಂದರು! .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>