<p><strong>ಬೆಂಗಳೂರು: </strong>ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಶನಿವಾರ ನಡೆದ ರೋಚಕ ಪಂದ್ಯದಲ್ಲಿ ಎದುರಾದ ಅಲ್ಪ ಅಂತರದ ಸೋಲಿನ ಹೊಣೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ ಹೊತ್ತುಕೊಂಡಿದ್ದಾರೆ.</p><p>ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ, ವಿರಾಟ್ ಕೊಹ್ಲಿ (62 ರನ್), ಜಾಕೊಬ್ ಬೆಥೆಲ್ (55 ರನ್) ಮತ್ತು ರೊಮೆರಿಯೊ ಶೆಫರ್ಡ್ (ಅಜೇಯ 53 ರನ್) ಸಿಡಿಸಿದ ಬಿರುಸಿನ ಅರ್ಧಶತಕಗಳ ಬಲದಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 213 ರನ್ ಗಳಿಸಿತ್ತು.</p><p>ಕಠಿಣ ಗುರಿ ಬೆನ್ನತ್ತಿದ ಚೆನ್ನೈ ಇನಿಂಗ್ಸ್ಗೆ ಆಯುಷ್ ಮ್ಹಾತ್ರೆ ಬಲ ತುಂಬಿದರು. 48 ಎಸೆತಗಳಲ್ಲಿ 94 ರನ್ ಗಳಿಸಿದ ಅವರು 17ನೇ ಓವರ್ನ 2ನೇ ಎಸೆತದಲ್ಲಿ ಔಟಾದರು. ನಂತರ ಡೇವಿಡ್ ಬ್ರೇವಿಸ್ ಗೋಲ್ಡನ್ ಡಕ್ ಆದರು.</p><p>ಗೆಲ್ಲಲು 21 ಎಸೆತಗಳಲ್ಲಿ 42 ರನ್ ಬೇಕಿದ್ದಾಗ ಕ್ರೀಸ್ಗಿಳಿದ ಧೋನಿ 8 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು. ಕೊನೆವರೆಗೂ ಹೋರಾಡಿದ ರವೀಂದ್ರ ಜಡೇಜ 45 ಎಸೆತಗಳಲ್ಲಿ 77 ರನ್ ಗಳಿಸಿದರೂ, ತಮ್ಮ ತಂಡಕ್ಕೆ ಜಯ ತಂದುಕೊಡಲು ಆಗಲಿಲ್ಲ.</p><p>ಅಂತಿಮವಾಗಿ ನಿಗದಿತ ಓವರ್ಗಳಲ್ಲಿ 5 ವಿಕೆಟ್ಗೆ 211 ರನ್ ಗಳಿಸಿದ ಸಿಎಸ್ಕೆ, 2 ರನ್ ಅಂತರದ ಸೋಲೊಪ್ಪಿಕೊಳ್ಳಬೇಕಾಯಿತು.</p><p>ಪಂದ್ಯದ ನಂತರ ಮಾತನಾಡಿದ ಧೋನಿ, ತಂಡದ ಮೇಲಿನ ಒತ್ತಡ ಕಡಿಮೆ ಮಾಡಲು ತಾವು ಒಂದೆರಡು ದೊಡ್ಡ ಹೊಡೆತ ಪ್ರಯೋಗಿಸಬೇಕಿತ್ತು ಎಂದು ಹೇಳಿದ್ದಾರೆ.</p><p>'ಆಪಾದನೆಯನ್ನು ನಾನೇ ಹೊರುತ್ತೇನೆ' ಎನ್ನುತ್ತಾ ಮಾತು ಶುರು ಮಾಡಿದ ಅವರು, 'ನಾನು ಕ್ರೀಸ್ಗೆ ಇಳಿದಾಗ ಎದುರಿಸಿದ ಎಸೆತಗಳಲ್ಲಿ ರನ್ ಗಳಿಸಬೇಕಿತ್ತು. ಒತ್ತಡವನ್ನು ಕಡಿಮೆ ಮಾಡಲು ಇನ್ನೂ ಒಂದೆರಡು ಎಸೆತಗಳನ್ನು ದೊಡ್ಡ ಹೊಡೆತಗಳಾಗಿ ಪರಿವರ್ತಿಸಬೇಕಿತ್ತು' ಎಂದಿದ್ದಾರೆ.</p>.IPL 2025 | RCB vs CSK: ಬೆಂಗಳೂರು ಬಳಗಕ್ಕೆ ರೋಚಕ ಜಯ.IPL 2025 | RCB vs CSK: ಕೊಹ್ಲಿ, ಧೋನಿ, ಶೆಫರ್ಡ್ ಬರೆದ ದಾಖಲೆಗಳ ವಿವರ ಇಲ್ಲಿದೆ.<p>ಕೆಳಮಟ್ಟದಲ್ಲಿ ಬರುವ ಫುಲ್ಟಾಸ್ ಎಸೆತಗಳನ್ನು ಹೆಚ್ಚಿನ ಬ್ಯಾಟರ್ಗಳು ಸಮರ್ಥವಾಗಿ ಎದುರಿಸಲಾರರು ಎಂದಿರುವ ಧೋನಿ, ಆಧುನಿಕ ಕಾಲ ಘಟ್ಟದಲ್ಲಿ ಬ್ಯಾಟರ್ಗಳು ಅದನ್ನು ಅಭ್ಯಾಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದ್ದಾರೆ. ಹಾಗೆಯೇ, ತಮ್ಮ ತಂಡದ ಬ್ಯಾಟರ್ಗಳು ಆ ರೀತಿಯ ಹೊಡೆತಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.</p><p>ಜಡೇಜ ಉತ್ತಮ ಹೊಡೆತಗಳನ್ನು ಪ್ರಯೋಗಿಸಿದರೂ, ಕೆಳಗೆ ಆಡಲು ಒತ್ತು ನೀಡಿದರು. ಟೂರ್ನಿಯಲ್ಲಿ ನಾವು ಬ್ಯಾಟಿಂಗ್ನಲ್ಲಿ ಹಿನ್ನಡೆ ಅನುಭವಿಸಿದ್ದೇವೆ. ಆದರೆ, ಒಂದು ವಿಭಾಗವಾಗಿ ಇಂದು ಚೆನ್ನಾಗಿಯೇ ಬ್ಯಾಟಿಂಗ್ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.</p><p>ಇದೇವೇಳೆ ಮಾತನಾಡಿದ ಆರ್ಸಿಬಿ ನಾಯಕ ರಜತ್ ಪಾಟೀದಾರ್, ಜಯದ ಶ್ರೇಯವನ್ನು ಬ್ಯಾಟರ್ಗಳು ಮತ್ತು ವೇಗಿ ಯಶ್ ದಯಾಳ್ಗೆ ನೀಡಿದರು.</p><p>ಕೊನೇ ಓವರ್ನಲ್ಲಿ ಗೆಲ್ಲಲು 15 ರನ್ ಬೇಕಿದ್ದಾಗ ಬೌಲಿಂಗ್ ಮಾಡಿದ ದಯಾಳ್, ಒಂದು ಸಿಕ್ಸರ್ ಬಿಟ್ಟುಕೊಟ್ಟರೂ ಧೋನಿ ವಿಕೆಟ್ ಸಹಿತ 12 ರನ್ ಬಿಟ್ಟುಕೊಟ್ಟು ತಂಡದ ಜಯಕ್ಕೆ ಕಾರಣರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಶನಿವಾರ ನಡೆದ ರೋಚಕ ಪಂದ್ಯದಲ್ಲಿ ಎದುರಾದ ಅಲ್ಪ ಅಂತರದ ಸೋಲಿನ ಹೊಣೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ ಹೊತ್ತುಕೊಂಡಿದ್ದಾರೆ.</p><p>ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ, ವಿರಾಟ್ ಕೊಹ್ಲಿ (62 ರನ್), ಜಾಕೊಬ್ ಬೆಥೆಲ್ (55 ರನ್) ಮತ್ತು ರೊಮೆರಿಯೊ ಶೆಫರ್ಡ್ (ಅಜೇಯ 53 ರನ್) ಸಿಡಿಸಿದ ಬಿರುಸಿನ ಅರ್ಧಶತಕಗಳ ಬಲದಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 213 ರನ್ ಗಳಿಸಿತ್ತು.</p><p>ಕಠಿಣ ಗುರಿ ಬೆನ್ನತ್ತಿದ ಚೆನ್ನೈ ಇನಿಂಗ್ಸ್ಗೆ ಆಯುಷ್ ಮ್ಹಾತ್ರೆ ಬಲ ತುಂಬಿದರು. 48 ಎಸೆತಗಳಲ್ಲಿ 94 ರನ್ ಗಳಿಸಿದ ಅವರು 17ನೇ ಓವರ್ನ 2ನೇ ಎಸೆತದಲ್ಲಿ ಔಟಾದರು. ನಂತರ ಡೇವಿಡ್ ಬ್ರೇವಿಸ್ ಗೋಲ್ಡನ್ ಡಕ್ ಆದರು.</p><p>ಗೆಲ್ಲಲು 21 ಎಸೆತಗಳಲ್ಲಿ 42 ರನ್ ಬೇಕಿದ್ದಾಗ ಕ್ರೀಸ್ಗಿಳಿದ ಧೋನಿ 8 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು. ಕೊನೆವರೆಗೂ ಹೋರಾಡಿದ ರವೀಂದ್ರ ಜಡೇಜ 45 ಎಸೆತಗಳಲ್ಲಿ 77 ರನ್ ಗಳಿಸಿದರೂ, ತಮ್ಮ ತಂಡಕ್ಕೆ ಜಯ ತಂದುಕೊಡಲು ಆಗಲಿಲ್ಲ.</p><p>ಅಂತಿಮವಾಗಿ ನಿಗದಿತ ಓವರ್ಗಳಲ್ಲಿ 5 ವಿಕೆಟ್ಗೆ 211 ರನ್ ಗಳಿಸಿದ ಸಿಎಸ್ಕೆ, 2 ರನ್ ಅಂತರದ ಸೋಲೊಪ್ಪಿಕೊಳ್ಳಬೇಕಾಯಿತು.</p><p>ಪಂದ್ಯದ ನಂತರ ಮಾತನಾಡಿದ ಧೋನಿ, ತಂಡದ ಮೇಲಿನ ಒತ್ತಡ ಕಡಿಮೆ ಮಾಡಲು ತಾವು ಒಂದೆರಡು ದೊಡ್ಡ ಹೊಡೆತ ಪ್ರಯೋಗಿಸಬೇಕಿತ್ತು ಎಂದು ಹೇಳಿದ್ದಾರೆ.</p><p>'ಆಪಾದನೆಯನ್ನು ನಾನೇ ಹೊರುತ್ತೇನೆ' ಎನ್ನುತ್ತಾ ಮಾತು ಶುರು ಮಾಡಿದ ಅವರು, 'ನಾನು ಕ್ರೀಸ್ಗೆ ಇಳಿದಾಗ ಎದುರಿಸಿದ ಎಸೆತಗಳಲ್ಲಿ ರನ್ ಗಳಿಸಬೇಕಿತ್ತು. ಒತ್ತಡವನ್ನು ಕಡಿಮೆ ಮಾಡಲು ಇನ್ನೂ ಒಂದೆರಡು ಎಸೆತಗಳನ್ನು ದೊಡ್ಡ ಹೊಡೆತಗಳಾಗಿ ಪರಿವರ್ತಿಸಬೇಕಿತ್ತು' ಎಂದಿದ್ದಾರೆ.</p>.IPL 2025 | RCB vs CSK: ಬೆಂಗಳೂರು ಬಳಗಕ್ಕೆ ರೋಚಕ ಜಯ.IPL 2025 | RCB vs CSK: ಕೊಹ್ಲಿ, ಧೋನಿ, ಶೆಫರ್ಡ್ ಬರೆದ ದಾಖಲೆಗಳ ವಿವರ ಇಲ್ಲಿದೆ.<p>ಕೆಳಮಟ್ಟದಲ್ಲಿ ಬರುವ ಫುಲ್ಟಾಸ್ ಎಸೆತಗಳನ್ನು ಹೆಚ್ಚಿನ ಬ್ಯಾಟರ್ಗಳು ಸಮರ್ಥವಾಗಿ ಎದುರಿಸಲಾರರು ಎಂದಿರುವ ಧೋನಿ, ಆಧುನಿಕ ಕಾಲ ಘಟ್ಟದಲ್ಲಿ ಬ್ಯಾಟರ್ಗಳು ಅದನ್ನು ಅಭ್ಯಾಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದ್ದಾರೆ. ಹಾಗೆಯೇ, ತಮ್ಮ ತಂಡದ ಬ್ಯಾಟರ್ಗಳು ಆ ರೀತಿಯ ಹೊಡೆತಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.</p><p>ಜಡೇಜ ಉತ್ತಮ ಹೊಡೆತಗಳನ್ನು ಪ್ರಯೋಗಿಸಿದರೂ, ಕೆಳಗೆ ಆಡಲು ಒತ್ತು ನೀಡಿದರು. ಟೂರ್ನಿಯಲ್ಲಿ ನಾವು ಬ್ಯಾಟಿಂಗ್ನಲ್ಲಿ ಹಿನ್ನಡೆ ಅನುಭವಿಸಿದ್ದೇವೆ. ಆದರೆ, ಒಂದು ವಿಭಾಗವಾಗಿ ಇಂದು ಚೆನ್ನಾಗಿಯೇ ಬ್ಯಾಟಿಂಗ್ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.</p><p>ಇದೇವೇಳೆ ಮಾತನಾಡಿದ ಆರ್ಸಿಬಿ ನಾಯಕ ರಜತ್ ಪಾಟೀದಾರ್, ಜಯದ ಶ್ರೇಯವನ್ನು ಬ್ಯಾಟರ್ಗಳು ಮತ್ತು ವೇಗಿ ಯಶ್ ದಯಾಳ್ಗೆ ನೀಡಿದರು.</p><p>ಕೊನೇ ಓವರ್ನಲ್ಲಿ ಗೆಲ್ಲಲು 15 ರನ್ ಬೇಕಿದ್ದಾಗ ಬೌಲಿಂಗ್ ಮಾಡಿದ ದಯಾಳ್, ಒಂದು ಸಿಕ್ಸರ್ ಬಿಟ್ಟುಕೊಟ್ಟರೂ ಧೋನಿ ವಿಕೆಟ್ ಸಹಿತ 12 ರನ್ ಬಿಟ್ಟುಕೊಟ್ಟು ತಂಡದ ಜಯಕ್ಕೆ ಕಾರಣರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>