<p><strong>ಅಂಬಾಲಾ (ಹರ್ಯಾಣ):</strong> ಅಧಿಕ ಪ್ರಮಾಣದಲ್ಲಿ ಸರಕುಗಳನ್ನು ಹೇರಿಕೊಂಡು ಬರುತ್ತಿದ್ದ ಟ್ರಕ್ಗಳ ತಪಾಸಣೆ ನಡೆಸಿ ದಂಡ ವಿಧಿಸಿದ ಅಂಬಾಲಾದ ಹೆಚ್ಚುವರಿ ಉಪ ಆಯುಕ್ತರಾದ ಪ್ರೀತಿ ಅವರ ಬೆಂಗಾವಲು ವಾಹನಗಳ ಮೇಲೆ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.</p>.<p>ಗುರುವಾರ ರಾತ್ರಿ ಆರ್ಟಿಎ ಕಾರ್ಯದರ್ಶಿ ಕೂಡಾ ಆಗಿರುವ ಪ್ರೀತಿ ಅವರು ಅಂಬಾಲ -ನರೇನ್ಗಢ್ ಹೆದ್ದಾರಿಯಲ್ಲಿ ಟ್ರಕ್ಗಳ ತಪಾಸಣೆ ನಡೆಸುತ್ತಿದ್ದರು. ಅಧಿಕ ಪ್ರಮಾಣದಲ್ಲಿ ಸರಕು ಹೇರಿಕೊಂಡು ಬಂದ ಟ್ರಕ್ ಮತ್ತು ಇತರ ವಾಹನಗಳಿಗೂ ಅವರು ದಂಡ ವಿಧಿಸಿದ್ದರು.<br />ಕೆಲವು ಟ್ರಕ್ಗಳನ್ನು ಹರ್ಯಾಣ- ಪಂಜಾಬ್ ಗಡಿ ಪ್ರದೇಶದಲ್ಲಿರುವ ಹಂಡೆಸರಾ ಗ್ರಾಮದಲ್ಲಿ ನಿಲ್ಲಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದ್ದು ಕೆಲಸ ಮುುಗಿಸಿ ಕಾಲಾ ಅಂಬ್ನಿಂದ ಆರ್ಟಿಎ ಸಹೋದ್ಯೋಗಿಗಳೊಂದಿಗೆ ಅಂಬಾಲಾ ನಗರಕ್ಕೆ ತೆರಳಿದ್ದರು.</p>.<p>ಅಲ್ಲಿಗೆ ತಲುಪಿದಾಗದ ಸುಮಾರು 60- 70 ಮಂದಿದುಷ್ಕರ್ಮಿಗಳು ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಆರ್ಟಿಎ ಇಲಾಖೆಯ ಎರಡು ವಾಹನಗಳನ್ನು ದುಷ್ಕರ್ಮಿಗಳುಹಾನಿ ಮಾಡಿದ್ದಾರೆ. ತಕ್ಷಣವೇ ಪ್ರೀತಿ ಅವರು ಅಲ್ಲಿಂದ ತಪ್ಪಿಸಿಕೊಂಡು ಪಂಜೋಕ್ರಾ ಪೊಲೀಸ್ ಠಾಣೆಗೆ ತಲುಪಿದರು ಎಂದು ಪೊಲೀಸರು ಹೇಳಿದ್ದಾರೆ.</p>.<p>ಘಟನೆಯ ಮಾಹಿತಿ ಸಿಕ್ಕಿದ ಕೂಡಲೇ ಮೂವರು ಡಿಎಸ್ಪಿ ಮತ್ತು ಉಪ ವಿಭಾಗೀಯ ಮೆಜಿಸ್ಟ್ರೇಟರ್ ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.</p>.<p>ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರೀತಿ, ಸುಮಾರು 60-70 ಮಂದಿಯ ತಂಡ ತಮ್ಮ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿ, ಸರಕು ವಾಹನಗಳ ಮೇಲೆ ಕ್ರಮ ಜರುಗಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿರುವುದಾಗಿ ಹೇಳಿದ್ದಾರೆ. ಈಬಗ್ಗೆ ಕೇಸು ದಾಖಲಿಸಿದ್ದು ತನಿಖೆ ನಡೆಯುತ್ತಿದೆ ಎಂದು ಡಿಎಸ್ಪಿ ಸುಲ್ತಾನ್ ಸಿಂಗ್ ಹೇಳಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಂಬಾಲಾ (ಹರ್ಯಾಣ):</strong> ಅಧಿಕ ಪ್ರಮಾಣದಲ್ಲಿ ಸರಕುಗಳನ್ನು ಹೇರಿಕೊಂಡು ಬರುತ್ತಿದ್ದ ಟ್ರಕ್ಗಳ ತಪಾಸಣೆ ನಡೆಸಿ ದಂಡ ವಿಧಿಸಿದ ಅಂಬಾಲಾದ ಹೆಚ್ಚುವರಿ ಉಪ ಆಯುಕ್ತರಾದ ಪ್ರೀತಿ ಅವರ ಬೆಂಗಾವಲು ವಾಹನಗಳ ಮೇಲೆ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.</p>.<p>ಗುರುವಾರ ರಾತ್ರಿ ಆರ್ಟಿಎ ಕಾರ್ಯದರ್ಶಿ ಕೂಡಾ ಆಗಿರುವ ಪ್ರೀತಿ ಅವರು ಅಂಬಾಲ -ನರೇನ್ಗಢ್ ಹೆದ್ದಾರಿಯಲ್ಲಿ ಟ್ರಕ್ಗಳ ತಪಾಸಣೆ ನಡೆಸುತ್ತಿದ್ದರು. ಅಧಿಕ ಪ್ರಮಾಣದಲ್ಲಿ ಸರಕು ಹೇರಿಕೊಂಡು ಬಂದ ಟ್ರಕ್ ಮತ್ತು ಇತರ ವಾಹನಗಳಿಗೂ ಅವರು ದಂಡ ವಿಧಿಸಿದ್ದರು.<br />ಕೆಲವು ಟ್ರಕ್ಗಳನ್ನು ಹರ್ಯಾಣ- ಪಂಜಾಬ್ ಗಡಿ ಪ್ರದೇಶದಲ್ಲಿರುವ ಹಂಡೆಸರಾ ಗ್ರಾಮದಲ್ಲಿ ನಿಲ್ಲಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದ್ದು ಕೆಲಸ ಮುುಗಿಸಿ ಕಾಲಾ ಅಂಬ್ನಿಂದ ಆರ್ಟಿಎ ಸಹೋದ್ಯೋಗಿಗಳೊಂದಿಗೆ ಅಂಬಾಲಾ ನಗರಕ್ಕೆ ತೆರಳಿದ್ದರು.</p>.<p>ಅಲ್ಲಿಗೆ ತಲುಪಿದಾಗದ ಸುಮಾರು 60- 70 ಮಂದಿದುಷ್ಕರ್ಮಿಗಳು ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಆರ್ಟಿಎ ಇಲಾಖೆಯ ಎರಡು ವಾಹನಗಳನ್ನು ದುಷ್ಕರ್ಮಿಗಳುಹಾನಿ ಮಾಡಿದ್ದಾರೆ. ತಕ್ಷಣವೇ ಪ್ರೀತಿ ಅವರು ಅಲ್ಲಿಂದ ತಪ್ಪಿಸಿಕೊಂಡು ಪಂಜೋಕ್ರಾ ಪೊಲೀಸ್ ಠಾಣೆಗೆ ತಲುಪಿದರು ಎಂದು ಪೊಲೀಸರು ಹೇಳಿದ್ದಾರೆ.</p>.<p>ಘಟನೆಯ ಮಾಹಿತಿ ಸಿಕ್ಕಿದ ಕೂಡಲೇ ಮೂವರು ಡಿಎಸ್ಪಿ ಮತ್ತು ಉಪ ವಿಭಾಗೀಯ ಮೆಜಿಸ್ಟ್ರೇಟರ್ ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.</p>.<p>ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರೀತಿ, ಸುಮಾರು 60-70 ಮಂದಿಯ ತಂಡ ತಮ್ಮ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿ, ಸರಕು ವಾಹನಗಳ ಮೇಲೆ ಕ್ರಮ ಜರುಗಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿರುವುದಾಗಿ ಹೇಳಿದ್ದಾರೆ. ಈಬಗ್ಗೆ ಕೇಸು ದಾಖಲಿಸಿದ್ದು ತನಿಖೆ ನಡೆಯುತ್ತಿದೆ ಎಂದು ಡಿಎಸ್ಪಿ ಸುಲ್ತಾನ್ ಸಿಂಗ್ ಹೇಳಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>