<p><strong>ವಾರಾಣಸಿ:</strong> ಪ್ರೇಮಿಗಳ ದಿನಾಚರಣೆಯ ಬಳಿಕ ಹೊಸ ವರ್ಷದ ವರ್ಷಾಚರಣೆಗೂ ಬಜರಂಗದಳ ವಿರೋಧ ವ್ಯಕ್ತಪಡಿಸಿದೆ.</p>.<p>ಈ ಕುರಿತು ಕಾಶಿಯಲ್ಲಿ ಹೋಟೆಲ್, ಮಾಲ್ಗಳಲ್ಲಿ ಪೋಸ್ಟರ್ ಅಂಟಿಸಿರುವ ಬಜರಂಗದಳದ ಕಾರ್ಯಕರ್ತರು, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದರ ವಿರುದ್ಧ ಜನರನ್ನು ಎಚ್ಚರಿಸಿದೆ.</p>.<p>ಇದನ್ನೂ ಓದಿ:<a href="https://www.prajavani.net/india-news/rahul-gandhi-brief-visit-to-italy-congress-randeep-singh-surjewala-897784.html" itemprop="url">ರಾಹುಲ್ ಗಾಂಧಿ ಇಟಲಿಗೆ: ಗಾಳಿ ಸುದ್ದಿ ಬೇಡ ಎಂದ ಸುರ್ಜೇವಾಲ </a></p>.<p>ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಚಾರವನ್ನು ಅನೈತಿಕ ಮತ್ತು ಅಧರ್ಮ ಎಂದು ಬಣ್ಣಿಸಿರುವ ಬಜರಂಗದಳವು ಹೊಸ ವರ್ಷಾಚರಣೆಯನ್ನು ಬಲವಾಗಿ ವಿರೋಧಿಸಿದೆ.</p>.<p>ಬಜರಂಗದಳದ ಸಂಚಾಲಕ ನಿಖಿಲ್ ತ್ರಿಪಾಠಿ ರುದ್ರ ಪ್ರತಿಕ್ರಿಯಿಸಿದ್ದು, 'ಹೊಸ ವರ್ಷಾಚರಣೆ ಅರ್ಥಹೀನ ಕಾರ್ಯಕ್ರಮವಾಗಿದೆ. ಇದರಲ್ಲಿ ಯಾವುದೇ ನೈತಿಕತೆ ಇಲ್ಲ ಮತ್ತು ಆಧ್ಮಾತ್ಮಿಕತೆಗೆ ಯಾವುದೇ ಸಂಬಂಧವಿಲ್ಲ. ಇಂತಹ ಆಚರಣೆಗಳು ದೇಶದ ಯುವ ಜನಾಂಗವನ್ನು ತಪ್ಪು ದಾರಿಗೆ ಎಳೆಯುತ್ತವೆ' ಎಂದು ಹೇಳಿದ್ದಾರೆ.<br /><br />'ಹೊಸ ವರ್ಷಾಚರಣೆಯ ನೆಪದಲ್ಲಿ ಮದ್ಯ ಹಾಗೂ ಡ್ರಗ್ ಮಾಫಿಯಾ ಪರಿಸ್ಥಿತಿಯನ್ನು ದುರುಪಯೋಗಪಡಿಸಲು ಪ್ರಯತ್ನಿಸುತ್ತಿದೆ' ಎಂದು ಆರೋಪಿಸಿದರು.</p>.<p>ನಗರದ ಹಲವೆಡೆ ಸಂಭ್ರಮಾಚರಣೆ ನಡೆಯಲಿರುವುದರಿಂದ ಪೊಲೀಸ್ ಅನುಮತಿಯೊಂದಿಗೆ ಶಾಂತಿಯುವಾಗಿ ಕಾನೂನಿನ ಮಿತಿಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.</p>.<p>ಅದೇ ಹೊತ್ತಿಗೆ ಹೋಟೆಲ್, ಕ್ಲಬ್, ಪಬ್, ಬಾರ್ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಬೇಕು ಎಂದು ಬಜರಂಗದಳ ಆಗ್ರಹಿಸಿದೆ.</p>.<p>ಹಾಗಿದ್ದರೂ ಕಾನೂನು ಸುವ್ಯವಸ್ಥೆಯನ್ನು ಹಾನಿ ಮಾಡಲು ಯಾರಿಗೂ ಅನುವು ಮಾಡಿಕೊಳ್ಳುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>'ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ. ಏನೇ ಅಹಿತಕರ ಘಟನೆ ನಡೆದರೂ ಪೊಲೀಸ್ ಕಠಿಣ ಕ್ರಮ ಕೈಗೊಳ್ಳಲಿದೆ. ಶಾಂತಿಯುತವಾಗಿ ಹೊಸ ವರ್ಷಾಚರಣೆ ಆಚರಿಸಲು ಸೂಕ್ತ ವ್ಯವಸ್ಥೆ ಮಾಡಿದ್ದೇವೆ' ಎಂದು ಪೊಲೀಸ್ ಆಯುಕ್ತ ಸತೀಶ್ ಗಣೇಶ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾರಾಣಸಿ:</strong> ಪ್ರೇಮಿಗಳ ದಿನಾಚರಣೆಯ ಬಳಿಕ ಹೊಸ ವರ್ಷದ ವರ್ಷಾಚರಣೆಗೂ ಬಜರಂಗದಳ ವಿರೋಧ ವ್ಯಕ್ತಪಡಿಸಿದೆ.</p>.<p>ಈ ಕುರಿತು ಕಾಶಿಯಲ್ಲಿ ಹೋಟೆಲ್, ಮಾಲ್ಗಳಲ್ಲಿ ಪೋಸ್ಟರ್ ಅಂಟಿಸಿರುವ ಬಜರಂಗದಳದ ಕಾರ್ಯಕರ್ತರು, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದರ ವಿರುದ್ಧ ಜನರನ್ನು ಎಚ್ಚರಿಸಿದೆ.</p>.<p>ಇದನ್ನೂ ಓದಿ:<a href="https://www.prajavani.net/india-news/rahul-gandhi-brief-visit-to-italy-congress-randeep-singh-surjewala-897784.html" itemprop="url">ರಾಹುಲ್ ಗಾಂಧಿ ಇಟಲಿಗೆ: ಗಾಳಿ ಸುದ್ದಿ ಬೇಡ ಎಂದ ಸುರ್ಜೇವಾಲ </a></p>.<p>ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಚಾರವನ್ನು ಅನೈತಿಕ ಮತ್ತು ಅಧರ್ಮ ಎಂದು ಬಣ್ಣಿಸಿರುವ ಬಜರಂಗದಳವು ಹೊಸ ವರ್ಷಾಚರಣೆಯನ್ನು ಬಲವಾಗಿ ವಿರೋಧಿಸಿದೆ.</p>.<p>ಬಜರಂಗದಳದ ಸಂಚಾಲಕ ನಿಖಿಲ್ ತ್ರಿಪಾಠಿ ರುದ್ರ ಪ್ರತಿಕ್ರಿಯಿಸಿದ್ದು, 'ಹೊಸ ವರ್ಷಾಚರಣೆ ಅರ್ಥಹೀನ ಕಾರ್ಯಕ್ರಮವಾಗಿದೆ. ಇದರಲ್ಲಿ ಯಾವುದೇ ನೈತಿಕತೆ ಇಲ್ಲ ಮತ್ತು ಆಧ್ಮಾತ್ಮಿಕತೆಗೆ ಯಾವುದೇ ಸಂಬಂಧವಿಲ್ಲ. ಇಂತಹ ಆಚರಣೆಗಳು ದೇಶದ ಯುವ ಜನಾಂಗವನ್ನು ತಪ್ಪು ದಾರಿಗೆ ಎಳೆಯುತ್ತವೆ' ಎಂದು ಹೇಳಿದ್ದಾರೆ.<br /><br />'ಹೊಸ ವರ್ಷಾಚರಣೆಯ ನೆಪದಲ್ಲಿ ಮದ್ಯ ಹಾಗೂ ಡ್ರಗ್ ಮಾಫಿಯಾ ಪರಿಸ್ಥಿತಿಯನ್ನು ದುರುಪಯೋಗಪಡಿಸಲು ಪ್ರಯತ್ನಿಸುತ್ತಿದೆ' ಎಂದು ಆರೋಪಿಸಿದರು.</p>.<p>ನಗರದ ಹಲವೆಡೆ ಸಂಭ್ರಮಾಚರಣೆ ನಡೆಯಲಿರುವುದರಿಂದ ಪೊಲೀಸ್ ಅನುಮತಿಯೊಂದಿಗೆ ಶಾಂತಿಯುವಾಗಿ ಕಾನೂನಿನ ಮಿತಿಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.</p>.<p>ಅದೇ ಹೊತ್ತಿಗೆ ಹೋಟೆಲ್, ಕ್ಲಬ್, ಪಬ್, ಬಾರ್ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಬೇಕು ಎಂದು ಬಜರಂಗದಳ ಆಗ್ರಹಿಸಿದೆ.</p>.<p>ಹಾಗಿದ್ದರೂ ಕಾನೂನು ಸುವ್ಯವಸ್ಥೆಯನ್ನು ಹಾನಿ ಮಾಡಲು ಯಾರಿಗೂ ಅನುವು ಮಾಡಿಕೊಳ್ಳುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>'ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ. ಏನೇ ಅಹಿತಕರ ಘಟನೆ ನಡೆದರೂ ಪೊಲೀಸ್ ಕಠಿಣ ಕ್ರಮ ಕೈಗೊಳ್ಳಲಿದೆ. ಶಾಂತಿಯುತವಾಗಿ ಹೊಸ ವರ್ಷಾಚರಣೆ ಆಚರಿಸಲು ಸೂಕ್ತ ವ್ಯವಸ್ಥೆ ಮಾಡಿದ್ದೇವೆ' ಎಂದು ಪೊಲೀಸ್ ಆಯುಕ್ತ ಸತೀಶ್ ಗಣೇಶ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>