ಸಂಭವನೀಯ ಮೂರನೇ ಅಲೆಯನ್ನು ನಿಭಾಯಿಸಲು ಪ್ರತಿ ಜಿಲ್ಲೆಯು ತಕ್ಷಣದ, ಮಧ್ಯಂತರ ಮತ್ತು ದೀರ್ಘಕಾಲೀನ ಕ್ರಿಯಾ ಯೋಜನೆಯನ್ನು ಹೊಂದಬೇಕು. ಪ್ರತಿ ಜಿಲ್ಲೆಯಲ್ಲಿಯೂ 4,000 ರಿಂದ 5,000 ಹೆಚ್ಚುವರಿ ಆಮ್ಲಜನಕ ಸಿಲಿಂಡರ್ಗಳನ್ನು ಹೊಂದಿರಬೇಕು. ಆಸ್ಪತ್ರೆಗಳು ಸದ್ಯ ಹೊಂದಿರುವ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.