ಎಎಂಡಿ ಸದ್ಯಕ್ಕೆ ಮರಳಗಾಲ–ಅಲ್ಲಾಪಟ್ಟಣ ಪ್ರದೇಶದಲ್ಲಿ ಮೂರು ಹಂತಗಳ ಪರಿಶೋಧನೆ ಕಾರ್ಯ ಕೈಗೊಂಡಿದೆ. ಈ ಕಾರ್ಯ ಸಂಪೂರ್ಣ ಮುಕ್ತಾಯವಾದ ಮೇಲೆಯೇ ಅಲ್ಲಿನ ಲಿಥಿಯಂ ಗುಣಮಟ್ಟದ ಮಹತ್ವ ಮತ್ತು ಪ್ರಮಾಣವು ಮತ್ತಷ್ಟು ನಿಖರವಾಗಿ ತಿಳಿಯಲಿದೆ. ಜತೆಗೆ, ವಾಣಿಜ್ಯ ಉದ್ದೇಶಕ್ಕಾಗಿ ಅಲ್ಲಿನ ಲಿಥಿಯಂ ಹೊರತೆಗೆಯುವ ಕಾರ್ಯದ ಕುರಿತು ತಾಂತ್ರಿಕ, ಸಾಮಾಜಿಕ ಮತ್ತು ಆರ್ಥಿಕ ಸಾಧ್ಯತೆಗಳನ್ನು ಪರಿಶೀಲಿಸಿದ ಬಳಿಕವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.