<p><strong>ಪಾಟ್ನಾ:</strong> ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ಶನಿವಾರ ₹ 1.11 ಲಕ್ಷ ದೇಣಿಗೆ ನೀಡಿದ್ದು, ಈ ನಿಟ್ಟಿನಲ್ಲಿ ಮುಂದಾಗುವುದು ಸಮಾಜದ ವಂಚಿತ ವರ್ಗಕ್ಕೆ ಸೇರಿದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.</p>.<p>ಸುದೀರ್ಘ ಕಾಲ ಎನ್ಡಿಎ ಭಾಗವಾಗಿದ್ದ ಎಲ್ಜೆಪಿಯ ಮುಖ್ಯಸ್ಥ ಪಾಸ್ವಾನ್ ಅವರು, ತಮ್ಮನ್ನು ತಾವು ಭಗವಾನ್ ರಾಮನ ಭಕ್ತೆಯಾಗಿದ್ದರು ಎಂದು ನಂಬಲಾಗಿರುವ ಶಬರಿಯ ವಂಶಸ್ಥನೆಂದು ಬಣ್ಣಿಸಿಕೊಂಡಿದ್ದಾರೆ.</p>.<p>ಶಬರಿಯು ಸಮಾಜದ ವಂಚಿತ ಸಮುದಾಯದಿಂದ ಬಂದವರಾಗಿದ್ದರು. ಅವರ ವಂಶಸ್ಥರಾದ ನಾವು ದೇವಾಲಯದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಟ್ವೀಟ್ಗಳಲ್ಲಿ ತಿಳಿಸಿದ್ದಾರೆ.</p>.<p>ಭಗವಾನ್ ಶ್ರೀರಾಮ ಮತ್ತು ಶಬರಿ ನಡುವಿನ ಸಂಬಂಧದಂತಹ ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು ದಲಿತರಿಗೆ ವಾತ್ಸಲ್ಯ ಮತ್ತು ಗೌರವ ಬೇಕಾಗಿದೆ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಟ್ನಾ:</strong> ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ಶನಿವಾರ ₹ 1.11 ಲಕ್ಷ ದೇಣಿಗೆ ನೀಡಿದ್ದು, ಈ ನಿಟ್ಟಿನಲ್ಲಿ ಮುಂದಾಗುವುದು ಸಮಾಜದ ವಂಚಿತ ವರ್ಗಕ್ಕೆ ಸೇರಿದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.</p>.<p>ಸುದೀರ್ಘ ಕಾಲ ಎನ್ಡಿಎ ಭಾಗವಾಗಿದ್ದ ಎಲ್ಜೆಪಿಯ ಮುಖ್ಯಸ್ಥ ಪಾಸ್ವಾನ್ ಅವರು, ತಮ್ಮನ್ನು ತಾವು ಭಗವಾನ್ ರಾಮನ ಭಕ್ತೆಯಾಗಿದ್ದರು ಎಂದು ನಂಬಲಾಗಿರುವ ಶಬರಿಯ ವಂಶಸ್ಥನೆಂದು ಬಣ್ಣಿಸಿಕೊಂಡಿದ್ದಾರೆ.</p>.<p>ಶಬರಿಯು ಸಮಾಜದ ವಂಚಿತ ಸಮುದಾಯದಿಂದ ಬಂದವರಾಗಿದ್ದರು. ಅವರ ವಂಶಸ್ಥರಾದ ನಾವು ದೇವಾಲಯದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಟ್ವೀಟ್ಗಳಲ್ಲಿ ತಿಳಿಸಿದ್ದಾರೆ.</p>.<p>ಭಗವಾನ್ ಶ್ರೀರಾಮ ಮತ್ತು ಶಬರಿ ನಡುವಿನ ಸಂಬಂಧದಂತಹ ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು ದಲಿತರಿಗೆ ವಾತ್ಸಲ್ಯ ಮತ್ತು ಗೌರವ ಬೇಕಾಗಿದೆ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>