‘ಭಕ್ತಿಗೆ ಮಿತಿ ಇರಬೇಕು ನಡ್ಡಾ ಜೀ, ಕರ್ನಾಟಕದ ಜನರಿಗೆ ನೀವು ಯಾಕೆ ಬೆದರಿಕೆವೊಡ್ಡುತ್ತೀರಿ ಮತ್ತು ಹೆದರಿಸುತ್ತಿದ್ದೀರಿ? ನಡ್ಡಾ ಅವರು ಶೇ 40 ಕಮಿಷನ್ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಮತ ಚಲಾಯಿಸದಿದ್ದರೆ ಕರ್ನಾಟಕದ ಜನರ ಸಾಂವಿಧಾನಿಕ ಹಕ್ಕುಗಳನ್ನು ನಿರ್ಬಂಧಿಸುವ ಬೆದರಿಕೆ ಹಾಕಿದ್ದಾರೆ. ನಾವು ರಾಜನ ಪ್ರಜೆಗಳಲ್ಲ. ಆದರೆ, ಸಂವಿಧಾನದಿಂದ ನಡೆಯುವ ಒಕ್ಕೂಟ ವ್ಯವಸ್ಥೆಯ ದೇಶದ ನಾಗರಿಕರು. ಕನ್ನಡಿಗರ ಆಶೀರ್ವಾದದೊಂದಿಗೆ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.