ಆರೋಗ್ಯಕರ ಚರ್ಚೆ, ದಿನಾಂಕ ಮತ್ತು ಸಮಯವನ್ನು ನಿರ್ಧರಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಆದಾಗ್ಯೂ ಸ್ಥಳವನ್ನು ನಾವು ನಿರ್ಧರಿಸಲಿದ್ದೇವೆ ಎಂದು ತಿಳಿಸಿದೆ.
ರಾಮದೇವ್ ಹೇಳಿಕೆಯಿಂದಾಗಿ ಅಲೋಪಥಿ ಹಾಗೂ ಆಯುರ್ವೇದ ನಡುವಣ ಸಾಮರಸ್ಯಕ್ಕೆ ಧಕ್ಕೆ ಉಂಟಾಗಿದೆ. ಹಾಗಾಗಿ ಇದನ್ನು ಮರು ಸ್ಥಾಪಿಸಬೇಕಿದೆ. ಮಗದೊಂದು ಪತ್ರದಲ್ಲಿ ಪತಂಜಲಿ ಔಷಧಿಯನ್ನು ಯಾವೆಲ್ಲ ಆಸ್ಪತ್ರೆಗಳಲ್ಲಿ ಬಳಕೆ ಮಾಡಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ವಿವರಣೆಯನ್ನು ಕೋರಲಾಗಿದೆ.