ಈ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ’ಹೆತ್ತವರ ಕಣ್ಣೀರು ಒಂದು ವಿಷಯವನ್ನು ಹೇಳುತ್ತಿದೆ. ಅವರ ಮಗಳು, ಈ ದೇಶದ ಮಗಳು ನ್ಯಾಯಕ್ಕೆ ಅರ್ಹಳು. ನ್ಯಾಯದ ಹಾದಿಯಲ್ಲಿ ನಾನು ಅವರೊಂದಿಗೆ ಇದ್ದೇನೆ,‘ ಎಂದು ಬರೆದುಕೊಂಡಿದ್ದರು. ಆದರೆ, ಆ ಟ್ವೀಟ್ನಲ್ಲಿ ಸಂತ್ರಸ್ತೆ ಕುಟುಂಬಸ್ಥರ ಫೋಟೊಗಳನ್ನೂ ಹಾಕಿದ್ದರು. ಈ ಮೂಲಕ ಸಂತ್ರಸ್ತೆ ಕುಟುಂಬಸ್ಥರ ಗುರುತು ಬಹಿರಂಗಪಡಿಸಿದ ವಿವಾದ ರಾಹುಲ್ ಅವರಿಗೆ ಸುತ್ತಿಕೊಂಡಿತ್ತು.