ಅಹಮದಾಬಾದ್: ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಕಳಪೆ ಮಟ್ಟಕ್ಕೆ ಕುಸಿದಿದ್ದು, ಸುಧಾರಿಸುವವರೆಗೆ ನಾಳೆಯಿಂದಲೇ (ನವೆಂಬರ್ 4ರಿಂದ) ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಪ್ರಕಟಿಸಿದ್ದಾರೆ.
ಗಾಳಿಯ ಗುಣಮಟ್ಟ ಸುಧಾರಿಸುವವರೆಗೆ5ನೇ ತರಗತಿ ವರಗಿನ ಮಕ್ಕಳಿಗೆ ಶಾಲೆಗಳನ್ನು ಮುಚ್ಚಲಾಗುವುದು. ಮುಂದಿನ ಆದೇಶದ ವರೆಗೆ ಐದನೇ ತರಗತಿ ಮೇಲ್ಪಟ್ಟ ಮಕ್ಕಳಿಗೆ ತರಗತಿ ಹೊರಾಂಗಣ ಚಟುವಟಿಕೆಗಳು ಮತ್ತು ಕ್ರೀಡಾ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಸೂಚಿಸಲಾಗಿದೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ವಾಯು ಮಾಲಿನ್ಯವು ಇಡೀ ಉತ್ತರ ಭಾರತದ ಸಮಸ್ಯೆಯಾಗಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಅಧಿಕಾರದಲ್ಲಿರುವ ದೆಹಲಿ ಅಥವಾ ಪಂಜಾಬ್ ಸರ್ಕಾರ ಮಾತ್ರವೇ ಸಮಸ್ಯೆಗೆ ಹೊಣೆಯಲ್ಲ. ಇದು ಪರಸ್ಪರ ಆರೋಪಗಳನ್ನು ಮಾಡುವ ಸಮಯವಲ್ಲ ಎಂದು ಹೇಳಿದ್ದಾರೆ.
Primary schools in Delhi to be shut tomorrow onwards till the pollution situation in the National capital improves pic.twitter.com/XOIrB16nCL
— ANI (@ANI) November 4, 2022
ಪಂಜಾಬ್ನಲ್ಲಿಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಚ್ಚುವುದರಿಂದ ಉಂಟಾಗುತ್ತಿರುವ ಸಮಸ್ಯೆಯ ಹೊಣೆಯನ್ನು ನಾವು ಹೊತ್ತುಕೊಳ್ಳುತ್ತೇವೆ ಎಂದಿರುವ ಕೇಜ್ರಿವಾಲ್, ಇದರಲ್ಲಿ ರೈತರ ತಪ್ಪೇನು ಇಲ್ಲ.ಅಲ್ಲಿ ನಾವು ಸರ್ಕಾರ ನಡೆಸುತ್ತಿದ್ದೇವೆ. ನಾವು ಅಧಿಕಾರಕ್ಕೇರಿ ಆರು ತಿಂಗಳಾಗಿದೆ ಅಷ್ಟೇ, ಅದಕ್ಕೂ ಮೊದಲು ಮಾಫಿಯಾ ಸರ್ಕಾರಗಳು ಅಧಿಕಾರದಲ್ಲಿದ್ದವು ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಮಾತನಾಡಿರುವ ಮಾನ್, ಮುಂದಿನ ವರ್ಷದ ಇದೇ ವೇಳೆಗೆ ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಾಕುವುದರಿಂದ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.
See pollution in North Indian towns. Its not just Punjab and Del. Entire North India suffering from severe pollution. Lets stop blame game. Lets find solutions as a country
— Arvind Kejriwal (@ArvindKejriwal) November 4, 2022
Its our first yr in Punjab. Punjab govt tried its best in short time. By next yr, we shud see good results pic.twitter.com/6FeSIE1FkW
Primary schools in Delhi to be shut tomorrow onwards till the pollution situation in the National capital improves pic.twitter.com/XOIrB16nCL
— ANI (@ANI) November 4, 2022
प्रदूषण पूरे उत्तर भारत की समस्या है।
— AAP (@AamAadmiParty) November 4, 2022
जितनी हवा Delhi में ख़राब है, उतनी ही हवा UP, Haryana, Bihar-Rajasthan के शहरों की ख़राब है।
इसके लिए सिर्फ़ AAP ज़िम्मेदार नहीं है।
केंद्र को आगे आकर क़दम उठाने पड़ेंगे ताकि North India को Pollution से बचाया जा सके।
-CM @ArvindKejriwal pic.twitter.com/rBvuFaI8A5
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.