ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ: ಕರ್ನಾಟಕದ ವರ್ತನೆ ದುರ್ಯೋಧನಂತಿದೆ ಎಂದ ಗೋವಾದ ಮಾಜಿ ಸಚಿವ

Last Updated 27 ಜನವರಿ 2023, 13:34 IST
ಅಕ್ಷರ ಗಾತ್ರ

ಪಣಜಿ: ಮಹದಾಯಿ ನದಿ ತಿರುವು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದ ವರ್ತನೆಯು ಮಹಾಭಾರತದಲ್ಲಿನ ಧುರ್ಯೋಧನನಂತಿದೆ ಎಂದು ಗೋವಾದ ಮಾಜಿ ಸಚಿವ ಮತ್ತು ಬಿಜೆಪಿ ಪಕ್ಷದ ನಾಯಕ ದಯಾನಂದ ಮಾಂಡ್ರೇಕರ್ ಶುಕ್ರವಾರ ಹೇಳಿದ್ದಾರೆ.

ಈ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಶಾಸಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಾಭಾರತದಲ್ಲಿ ಪಾಂಡವರಿಗೆ ಒಂದು ತುಂಡು ಭೂಮಿಯನ್ನು ನೀಡದೆ ಕಾಡಿದ, ಎಲ್ಲರಿಗೂ ಅವಮಾನ ಮಾಡುತ್ತಿದ್ದ ಧುರ್ಯೋಧನನಂತಿದೆ ಕರ್ನಾಟಕದ ವರ್ತನೆ ಎಂದರು.

2012 ರಿಂದ 2017ರವರೆಗೆ ಮನೋಹರ್ ಪರಿಕ್ಕರ್‌ ಅವರ ಸಚಿವ ಸಂಪುಟದಲ್ಲಿ ಮಾಂಡ್ರೇಕರ್‌ ಜಲಸಂಪನ್ಮೂಲ ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT