ಈ ಬಗ್ಗೆ ಮಾತನಾಡಿರುವ ದೆಹಲಿ ಐಐಟಿ ಪ್ರಾಧ್ಯಾಪಕ ಹುಸೇನ್ ಕಂಚಾವಾಲ, 'ಎತ್ತರ ಸ್ಥಳಗಳಿಂದ ಆಯ ತಪ್ಪಿ ಬೀಳುವುದು ಕೆಲಸ ಸ್ಥಳಗಳಲ್ಲಿ ಸಂಭವಿಸುವ ಗಂಭೀರ ಹಾಗೂ ಮಾರಣಾಂತಿಕ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಬಹುತೇಕ ಕೆಲಸಗಾರರು ಸುರಕ್ಷತಾ ಸಾಮಗ್ರಿಗಳನ್ನು ಧರಿಸಿರುತ್ತಾರೆ. ಆದರೆ, ಕೆಲಸ ಮುಗಿಸುವ ಆತುರದಲ್ಲಿ ಸರಿಯಾಗಿ ತೊಟ್ಟುಕೊಳ್ಳುವುದನ್ನು ಮರೆತಿರುತ್ತಾರೆ. ಇದರ ಮೇಲೆ ಎಸ್ಎಂಎಸ್ ನಿಗಾ ಇಡಲಿದೆ' ಎಂದು ತಿಳಿಸಿದ್ದಾರೆ.