<p><strong>ನವದೆಹಲಿ</strong>: ವಿದೇಶಿ ವಿನಿಮಯ ಮೀಸಲು ಕೊರತೆಯಿಂದಾಗಿ ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿರುವ ಶ್ರೀಲಂಕಾಗೆ ಸಾಧ್ಯವಾದಷ್ಟು ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ.</p>.<p>ಶ್ರೀಲಂಕಾದ ಪತ್ರಕರ್ತರೊಬ್ಬರು ಆ ದೇಶದ ವೈದ್ಯಕೀಯ ಪರಿಸ್ಥಿತಿ ಕುರಿತು 'ಶ್ರೀಲಂಕಾ ಟ್ವೀಟ್' ಟ್ವಿಟರ್ ಪುಟದಲ್ಲಿ ಹಾಕಿದ್ದ ಪೋಸ್ಟ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಪ್ರತಿಕ್ರಿಯಿಸಿದ್ದಾರೆ.</p>.<p>'ಪೆರದೆನಿಯಾ ಆಸ್ಪತ್ರೆಯಲ್ಲಿ ನಿಗದಿಯಾಗಿರುವ ಶಸ್ತ್ರಚಿಕಿತ್ಸೆಗಳು ಔಷಧಿ ಕೊರತೆಯ ಕಾರಣದಿಂದನಡೆಯುತ್ತಿಲ್ಲ. ಕೇವಲ ತುರ್ತು ಶಸ್ತ್ರಚಿಕಿತ್ಸೆಗಳನ್ನು ಮಾತ್ರವೇ ನಡೆಸಲಾಗುತ್ತಿದೆ' ಎಂದು'ಶ್ರೀಲಂಕಾ ಟ್ವೀಟ್'ನಲ್ಲಿ ಬರೆಯಲಾಗಿದೆ.</p>.<p>ಇದನ್ನು ಉಲ್ಲೇಖಿಸಿರುವ ಜೈಶಂಕರ್, ಈ ಸುದ್ದಿ ನೋಡಿ ಬೇಸರವಾಗಿದೆ. ಭಾರತ ಹೇಗೆ ನೆರವು ನೀಡಲು ಸಾಧ್ಯ ಎಂಬ ಬಗ್ಗೆ ಅಲ್ಲಿನ ಸರ್ಕಾರದೊಂದಿಗೆ ಚರ್ಚಿಸುವಂತೆ ಶ್ರೀಲಂಕಾಗೆ ಭಾರತದ ಹೈ–ಕಮಿಷನರ್ ಆಗಿರುವ ಗೋಪಾಲ್ ಬಗ್ಲೇ ಅವರಿಗೆ ತಿಳಿಸಿದ್ದೇನೆ ಎಂದಿದ್ದಾರೆ.</p>.<p>ಮಾ. 28ರಿಂದ 30ರವರೆಗೆ ಶ್ರೀಲಂಕಾ ಪ್ರವಾಸದಲ್ಲಿರುವ ಜೈಶಂಕರ್, ನೆರವು ನೀಡುವುದೂ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಿದ್ದಾರೆ.</p>.<p>ಶ್ರೀಲಂಕಾಕ್ಕೆ ಭಾರತ ಇತ್ತೀಚೆಗೆ ಆರ್ಥಿಕ ನೆರವು ಘೋಷಿಸಿತ್ತು.</p>.<p>ವಿದೇಶಗಳಿಂದ ಸಮರ್ಪಕವಾಗಿ ಕಾಗದ ತರಿಸಲು ಆಗದಿರುವ ಕಾರಣ ಮತ್ತು ವೆಚ್ಚದಲ್ಲಿ ಭಾರಿ ಏರಿಕೆ ಆಗಿರುವುದರಿಂದಮುದ್ರಣ ಆವೃತ್ತಿಯನ್ನು ಸ್ಥಗಿತಗೊಳಿಸುವುದಾಗಿ ಅಲ್ಲಿನ ಎರಡು ಪ್ರಮುಖ ದಿನ ಪತ್ರಿಕೆಗಳು ಈಗಾಗಲೇ ಘೋಷಿಸಿವೆ. ಇತರ ಕೆಲವು ಪತ್ರಿಕೆಗಳು ಪುಟಗಳ ಸಂಖ್ಯೆಯನ್ನು ಕಡಿಮೆಗೊಳಿಸಿವೆ.</p>.<p>ಕಾಗದ ಮತ್ತು ಇಂಕ್ ಕೊರತೆಯ ಕಾರಣ ಶಾಲೆಗಳ ವಾರ್ಷಿಕ ಪರೀಕ್ಷೆಗಳನ್ನೂ ಕಳೆದವಾರ ಮುಂದೂಡಲಾಗಿತ್ತು.</p>.<p><strong>'ಬಿಮ್ಸ್ಟೆಕ್' ಶೃಂಗಸಭೆ</strong><br />ಈ ಬಾರಿ ಶ್ರೀಲಂಕಾದಲ್ಲಿ ಆಯೋಜನೆಯಾಗಿರುವ 'ಬಿಮ್ಸ್ಟೆಕ್' ಶೃಂಗಸಭೆಗೂ(ಮಾ.30) ಜೈಶಂಕರ್ ಭಾಗವಹಿಸಲಿದ್ದಾರೆ.</p>.<p>ಭಾರತ ಮತ್ತು ಶ್ರೀಲಂಕಾದ ಜತೆಗೆ ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲೆಂಡ್, ನೇಪಾಳ ಮತ್ತು ಭೂತಾನ್ ‘ಬಿಮ್ಸ್ಟೆಕ್’ನ ಸದಸ್ಯ ರಾಷ್ಟ್ರಗಳಾಗಿವೆ.</p>.<p>ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸದಸ್ಯ ರಾಷ್ಟ್ರಗಳ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.</p>.<p><strong>ಇವನ್ನೂ ಓದಿ<br />*</strong><a href="https://www.prajavani.net/world-news/jaishankar-meets-sri-lankan-finance-minister-discusses-economic-situation-indias-support-923460.html%20%E2%80%8B" target="_blank">ಶ್ರೀಲಂಕಾ: ಆರ್ಥಿಕ ಸ್ಥಿತಿ ಚರ್ಚೆ–ನೆರವಿನ ಭರವಸೆ ಇತ್ತ ವಿದೇಶಾಂಗ ಸಚಿವ ಜೈಶಂಕರ್</a><br /><strong>*</strong><a href="https://www.prajavani.net/india-news/jaishankar-to-visit-sri-lanka-next-week-to-hold-bilateral-talks-attend-bimstec-engagements-922945.html" itemprop="url" target="_blank">ಇದೇ 28ರಿಂದ ಸಚಿವ ಜೈಶಂಕರ್ ಶ್ರೀಲಂಕಾ ಪ್ರವಾಸ</a><br /><strong>*</strong><a href="https://www.prajavani.net/world-news/sri-lanka-papers-run-out-of-newsprint-as-crisis-bites-922622.html" itemprop="url" target="_blank">ಶ್ರೀಲಂಕಾದಲ್ಲಿ ಕಾಗದಕ್ಕೂ ಬರ: ಮುದ್ರಣ ನಿಲ್ಲಿಸಿದ ಪ್ರಮುಖ ಪತ್ರಿಕೆಗಳು</a><br /><strong>*</strong><a href="https://www.prajavani.net/world-news/sri-lanka-cancels-school-exams-over-paper-shortage-920756.html" itemprop="url" target="_blank">ಕಾಗದ ಖರೀದಿಸಲೂ ವಿದೇಶಿ ವಿನಿಮಯ ಇಲ್ಲ: ಶ್ರೀಲಂಕಾದಲ್ಲಿ ಪರೀಕ್ಷೆಗಳು ಮುಂದಕ್ಕೆ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ವಿದೇಶಿ ವಿನಿಮಯ ಮೀಸಲು ಕೊರತೆಯಿಂದಾಗಿ ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿರುವ ಶ್ರೀಲಂಕಾಗೆ ಸಾಧ್ಯವಾದಷ್ಟು ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ.</p>.<p>ಶ್ರೀಲಂಕಾದ ಪತ್ರಕರ್ತರೊಬ್ಬರು ಆ ದೇಶದ ವೈದ್ಯಕೀಯ ಪರಿಸ್ಥಿತಿ ಕುರಿತು 'ಶ್ರೀಲಂಕಾ ಟ್ವೀಟ್' ಟ್ವಿಟರ್ ಪುಟದಲ್ಲಿ ಹಾಕಿದ್ದ ಪೋಸ್ಟ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಪ್ರತಿಕ್ರಿಯಿಸಿದ್ದಾರೆ.</p>.<p>'ಪೆರದೆನಿಯಾ ಆಸ್ಪತ್ರೆಯಲ್ಲಿ ನಿಗದಿಯಾಗಿರುವ ಶಸ್ತ್ರಚಿಕಿತ್ಸೆಗಳು ಔಷಧಿ ಕೊರತೆಯ ಕಾರಣದಿಂದನಡೆಯುತ್ತಿಲ್ಲ. ಕೇವಲ ತುರ್ತು ಶಸ್ತ್ರಚಿಕಿತ್ಸೆಗಳನ್ನು ಮಾತ್ರವೇ ನಡೆಸಲಾಗುತ್ತಿದೆ' ಎಂದು'ಶ್ರೀಲಂಕಾ ಟ್ವೀಟ್'ನಲ್ಲಿ ಬರೆಯಲಾಗಿದೆ.</p>.<p>ಇದನ್ನು ಉಲ್ಲೇಖಿಸಿರುವ ಜೈಶಂಕರ್, ಈ ಸುದ್ದಿ ನೋಡಿ ಬೇಸರವಾಗಿದೆ. ಭಾರತ ಹೇಗೆ ನೆರವು ನೀಡಲು ಸಾಧ್ಯ ಎಂಬ ಬಗ್ಗೆ ಅಲ್ಲಿನ ಸರ್ಕಾರದೊಂದಿಗೆ ಚರ್ಚಿಸುವಂತೆ ಶ್ರೀಲಂಕಾಗೆ ಭಾರತದ ಹೈ–ಕಮಿಷನರ್ ಆಗಿರುವ ಗೋಪಾಲ್ ಬಗ್ಲೇ ಅವರಿಗೆ ತಿಳಿಸಿದ್ದೇನೆ ಎಂದಿದ್ದಾರೆ.</p>.<p>ಮಾ. 28ರಿಂದ 30ರವರೆಗೆ ಶ್ರೀಲಂಕಾ ಪ್ರವಾಸದಲ್ಲಿರುವ ಜೈಶಂಕರ್, ನೆರವು ನೀಡುವುದೂ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಿದ್ದಾರೆ.</p>.<p>ಶ್ರೀಲಂಕಾಕ್ಕೆ ಭಾರತ ಇತ್ತೀಚೆಗೆ ಆರ್ಥಿಕ ನೆರವು ಘೋಷಿಸಿತ್ತು.</p>.<p>ವಿದೇಶಗಳಿಂದ ಸಮರ್ಪಕವಾಗಿ ಕಾಗದ ತರಿಸಲು ಆಗದಿರುವ ಕಾರಣ ಮತ್ತು ವೆಚ್ಚದಲ್ಲಿ ಭಾರಿ ಏರಿಕೆ ಆಗಿರುವುದರಿಂದಮುದ್ರಣ ಆವೃತ್ತಿಯನ್ನು ಸ್ಥಗಿತಗೊಳಿಸುವುದಾಗಿ ಅಲ್ಲಿನ ಎರಡು ಪ್ರಮುಖ ದಿನ ಪತ್ರಿಕೆಗಳು ಈಗಾಗಲೇ ಘೋಷಿಸಿವೆ. ಇತರ ಕೆಲವು ಪತ್ರಿಕೆಗಳು ಪುಟಗಳ ಸಂಖ್ಯೆಯನ್ನು ಕಡಿಮೆಗೊಳಿಸಿವೆ.</p>.<p>ಕಾಗದ ಮತ್ತು ಇಂಕ್ ಕೊರತೆಯ ಕಾರಣ ಶಾಲೆಗಳ ವಾರ್ಷಿಕ ಪರೀಕ್ಷೆಗಳನ್ನೂ ಕಳೆದವಾರ ಮುಂದೂಡಲಾಗಿತ್ತು.</p>.<p><strong>'ಬಿಮ್ಸ್ಟೆಕ್' ಶೃಂಗಸಭೆ</strong><br />ಈ ಬಾರಿ ಶ್ರೀಲಂಕಾದಲ್ಲಿ ಆಯೋಜನೆಯಾಗಿರುವ 'ಬಿಮ್ಸ್ಟೆಕ್' ಶೃಂಗಸಭೆಗೂ(ಮಾ.30) ಜೈಶಂಕರ್ ಭಾಗವಹಿಸಲಿದ್ದಾರೆ.</p>.<p>ಭಾರತ ಮತ್ತು ಶ್ರೀಲಂಕಾದ ಜತೆಗೆ ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲೆಂಡ್, ನೇಪಾಳ ಮತ್ತು ಭೂತಾನ್ ‘ಬಿಮ್ಸ್ಟೆಕ್’ನ ಸದಸ್ಯ ರಾಷ್ಟ್ರಗಳಾಗಿವೆ.</p>.<p>ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸದಸ್ಯ ರಾಷ್ಟ್ರಗಳ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.</p>.<p><strong>ಇವನ್ನೂ ಓದಿ<br />*</strong><a href="https://www.prajavani.net/world-news/jaishankar-meets-sri-lankan-finance-minister-discusses-economic-situation-indias-support-923460.html%20%E2%80%8B" target="_blank">ಶ್ರೀಲಂಕಾ: ಆರ್ಥಿಕ ಸ್ಥಿತಿ ಚರ್ಚೆ–ನೆರವಿನ ಭರವಸೆ ಇತ್ತ ವಿದೇಶಾಂಗ ಸಚಿವ ಜೈಶಂಕರ್</a><br /><strong>*</strong><a href="https://www.prajavani.net/india-news/jaishankar-to-visit-sri-lanka-next-week-to-hold-bilateral-talks-attend-bimstec-engagements-922945.html" itemprop="url" target="_blank">ಇದೇ 28ರಿಂದ ಸಚಿವ ಜೈಶಂಕರ್ ಶ್ರೀಲಂಕಾ ಪ್ರವಾಸ</a><br /><strong>*</strong><a href="https://www.prajavani.net/world-news/sri-lanka-papers-run-out-of-newsprint-as-crisis-bites-922622.html" itemprop="url" target="_blank">ಶ್ರೀಲಂಕಾದಲ್ಲಿ ಕಾಗದಕ್ಕೂ ಬರ: ಮುದ್ರಣ ನಿಲ್ಲಿಸಿದ ಪ್ರಮುಖ ಪತ್ರಿಕೆಗಳು</a><br /><strong>*</strong><a href="https://www.prajavani.net/world-news/sri-lanka-cancels-school-exams-over-paper-shortage-920756.html" itemprop="url" target="_blank">ಕಾಗದ ಖರೀದಿಸಲೂ ವಿದೇಶಿ ವಿನಿಮಯ ಇಲ್ಲ: ಶ್ರೀಲಂಕಾದಲ್ಲಿ ಪರೀಕ್ಷೆಗಳು ಮುಂದಕ್ಕೆ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>