<p class="title"><strong>ಮುಂಬೈ:</strong> ‘ವಿರೋಧಪಕ್ಷ ಬಿಜೆಪಿಯೇ ರಾಜ್ಯದಲ್ಲಿ ಜನರಿಗೆ ಮನರಂಜನೆ ನೀಡುತ್ತಿರುವಾಗ ಕೋವಿಡ್ ಪಿಡುಗಿನ ಈ ಹೊತ್ತಿನಲ್ಲಿ ಮನರಂಜನೆಗಾಗಿ ಸಿನಿಮಾ, ರಂಗಮಂದಿರಗಳನ್ನು ತೆರೆಯುವ ಅಗತ್ಯವೇನು’ ಎಂದು ಶಿವಸೇನೆಯು ಪ್ರಶ್ನಿಸಿದೆ.</p>.<p class="bodytext">ಕೋವಿಡ್ ಮಾರ್ಗಸೂಚಿಗಳ ಪಾಲಿಸುವ ನಿಬಂಧನೆಯೊಂದಿಗೆ ಅ.22ರಿಂದ ಚಿತ್ರಮಂದಿರಗಳು, ರಂಗಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಕಟಿಸಿದ್ದರು.</p>.<p class="bodytext">ಶಿವಸೇನೆ ಮುಖವಾಣಿ ‘ಸಾಮ್ನಾ’ದಲ್ಲಿನ ‘ರೋಖ್ಥೋಕ್’ ಅಂಕಣದಲ್ಲಿ ಇದನ್ನು ಉಲ್ಲೇಖಿಸಿರುವ ಶಿವಸೇನೆ ಸಂಸದ, ಕಾರ್ಯನಿರ್ವಾಹಕ ಸಂಪಾದಕ ಸಂಜಯ್ ರಾವುತ್, ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.</p>.<p class="bodytext">‘ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರು ಪ್ರತಿದಿನ ರಾಜ್ಯದ ವಿವಿಧ ಮಂತ್ರಿಗಳ ವಿರುದ್ಧ ಆರೋಪ ಹೊರಿಸುತ್ತಾರೆ. ಬಳಿಕ ಅವರ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಅವರ ಆರೋಪಗಳು ಸಾಬೂನಿನ ಗುಳ್ಳೆಗಳಂತೆ’ ಎಂದು ವ್ಯಂಗ್ಯವಾಡಿದ್ದಾರೆ.</p>.<p class="bodytext">‘ದೇಶದಲ್ಲಿ ಕೋವಿಡ್ ನಿರ್ಬಂಧಗಳು ಮುಂದುವರೆದಿದ್ದರೂ ರಾಜಕೀಯ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿವೆ. ಎಲ್ಲೆಡೆ ಮನರಂಜನೆ ಇದೆ. ವಿರೋಧ ಪಕ್ಷಗಳ ಈ ಮನರಂಜನೆಯಲ್ಲಿ ಹಾಸ್ಯ ಮತ್ತು ಕೌತುಕವಿದೆ’ ಎಂದು ಟೀಕಿಸಿದ್ದಾರೆ.</p>.<p class="bodytext">ರಾಜ್ಯದಲ್ಲಿ ವಿರೋಧಪಕ್ಷ ಎಂಬುದು ಕೇವಲ ಕಾಮಿಡಿ ಷೋ ಆಗಿದೆ. ಇ.ಡಿ ವಿಚಾರಣೆ, ವ್ಯಕ್ತಿತ್ವದ ಹರಣ ಹೊರತುಪಡಿಸಿ ಬೇರೇನೂ ಮಾಡುತ್ತಿಲ್ಲ ಎಂದು ಟೀಕಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಮುಂಬೈ:</strong> ‘ವಿರೋಧಪಕ್ಷ ಬಿಜೆಪಿಯೇ ರಾಜ್ಯದಲ್ಲಿ ಜನರಿಗೆ ಮನರಂಜನೆ ನೀಡುತ್ತಿರುವಾಗ ಕೋವಿಡ್ ಪಿಡುಗಿನ ಈ ಹೊತ್ತಿನಲ್ಲಿ ಮನರಂಜನೆಗಾಗಿ ಸಿನಿಮಾ, ರಂಗಮಂದಿರಗಳನ್ನು ತೆರೆಯುವ ಅಗತ್ಯವೇನು’ ಎಂದು ಶಿವಸೇನೆಯು ಪ್ರಶ್ನಿಸಿದೆ.</p>.<p class="bodytext">ಕೋವಿಡ್ ಮಾರ್ಗಸೂಚಿಗಳ ಪಾಲಿಸುವ ನಿಬಂಧನೆಯೊಂದಿಗೆ ಅ.22ರಿಂದ ಚಿತ್ರಮಂದಿರಗಳು, ರಂಗಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಕಟಿಸಿದ್ದರು.</p>.<p class="bodytext">ಶಿವಸೇನೆ ಮುಖವಾಣಿ ‘ಸಾಮ್ನಾ’ದಲ್ಲಿನ ‘ರೋಖ್ಥೋಕ್’ ಅಂಕಣದಲ್ಲಿ ಇದನ್ನು ಉಲ್ಲೇಖಿಸಿರುವ ಶಿವಸೇನೆ ಸಂಸದ, ಕಾರ್ಯನಿರ್ವಾಹಕ ಸಂಪಾದಕ ಸಂಜಯ್ ರಾವುತ್, ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.</p>.<p class="bodytext">‘ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರು ಪ್ರತಿದಿನ ರಾಜ್ಯದ ವಿವಿಧ ಮಂತ್ರಿಗಳ ವಿರುದ್ಧ ಆರೋಪ ಹೊರಿಸುತ್ತಾರೆ. ಬಳಿಕ ಅವರ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಅವರ ಆರೋಪಗಳು ಸಾಬೂನಿನ ಗುಳ್ಳೆಗಳಂತೆ’ ಎಂದು ವ್ಯಂಗ್ಯವಾಡಿದ್ದಾರೆ.</p>.<p class="bodytext">‘ದೇಶದಲ್ಲಿ ಕೋವಿಡ್ ನಿರ್ಬಂಧಗಳು ಮುಂದುವರೆದಿದ್ದರೂ ರಾಜಕೀಯ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿವೆ. ಎಲ್ಲೆಡೆ ಮನರಂಜನೆ ಇದೆ. ವಿರೋಧ ಪಕ್ಷಗಳ ಈ ಮನರಂಜನೆಯಲ್ಲಿ ಹಾಸ್ಯ ಮತ್ತು ಕೌತುಕವಿದೆ’ ಎಂದು ಟೀಕಿಸಿದ್ದಾರೆ.</p>.<p class="bodytext">ರಾಜ್ಯದಲ್ಲಿ ವಿರೋಧಪಕ್ಷ ಎಂಬುದು ಕೇವಲ ಕಾಮಿಡಿ ಷೋ ಆಗಿದೆ. ಇ.ಡಿ ವಿಚಾರಣೆ, ವ್ಯಕ್ತಿತ್ವದ ಹರಣ ಹೊರತುಪಡಿಸಿ ಬೇರೇನೂ ಮಾಡುತ್ತಿಲ್ಲ ಎಂದು ಟೀಕಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>