‘ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಅದರ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಜನರ ಧ್ವನಿಯನ್ನು ದಮನಿಸಿದಂತೆ. ಯಾರಾದರೂ ಬಿಜೆಪಿ ವಿರುದ್ಧ ಮಾತನಾಡಿದರೆ, ಇವರು ಸಿಬಿಐ, ಇಡಿ, ಐಟಿಯನ್ನು ಛೂ ಬಿಡುತ್ತಾರೆ. ಬಿಜೆಪಿಯು ದೇಶದ ಪ್ರಜಾಸತಾತ್ಮಕ ವ್ಯವಸ್ಥೆಯನ್ನು ಬಗ್ಗು ಬಡಿದು, ಇಡೀ ದೇಶವನ್ನು ತಮ್ಮ ಅಡಿಯಾಳಾಗಿ ಮಾಡಲು ಹೊರಟಿದ್ದಾರೆಯೇ?‘ ಎಂದು ಪ್ರಶ್ನೆ ಮಾಡಿದ್ದಾರೆ.