ನವದೆಹಲಿ:ಜಹಾಂಗೀರ್ಪುರಿಯಲ್ಲಿ ನೆಲಸಮ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ, ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆಯನ್ನು ಮುಂದುವರೆಸಿದ್ದರು. ಆಗ ಮಧ್ಯಪ್ರವೇಶಿಸಿದ ಸಿಪಿಎಂ ನಾಯಕಿ ಬೃಂದಾ ಕಾರಟ್ ಅವರು, ಬುಲ್ಡೋಜರ್ ಯಂತ್ರಗಳಿಗೆ ಅಡ್ಡವಾಗಿ ನಿಂತರು.
ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸುಪ್ರೀಂ ನೀಡಿದ್ದ ಆದೇಶದ ಪ್ರತಿಯನ್ನು ಅಧಿಕಾರಿಗಳಿಗೆ, ಬುಲ್ಡೋಜರ್ ಯಂತ್ರಗಳ ಚಾಲಕರಿಗೆ ತೋರಿಸಿದರು. ಜತೆಗೆ ಅಧಿಕಾರಿಗಳ ಜತೆಗೆ ವಾಗ್ವಾದ ನಡೆಸಿದರು. ಕಾರ್ಯಾಚರಣೆ ನಡೆಸುತ್ತಿರುವ ಯಂತ್ರಗಳನ್ನು ಬೃಂದಾ ತಡೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಬೃಂದಾ ಕಾರಟ್ ಮಾತ್ರವೇ ಈ ಕಾರ್ಯಾಚರಣೆ ವಿರುದ್ಧ ನಿಂತಿದ್ದಾರೆ. ವಿರೋಧ ಪಕ್ಷಗಳ ಉಳಿದ ನಾಯಕರೆಲ್ಲಾ ಎಲ್ಲಿ ಹೋಗಿದ್ದಾರೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.
CPI(M) Leader Brinda Karat stood in front of a JCB to halt demolition drive in Delhi’s Jahangirpuri at 12.10 pm. Drive continued till 12.15 pm despite SC asking MCD to maintain status quo around 11 am. Action a few days after communal clashes on 16 April. @TheQuint@QuintHindipic.twitter.com/JLH8RcvprZ