ಮಲೇಷ್ಯಾ, ಬ್ರಿಟನ್, ನೆದರ್ಲೆಂಡ್ಸ್, ಜಾಂಬಿಯಾ ಹಾಗೂ ಕೆರಿಬಿಯನ್ ದ್ವೀಪ ರಾಷ್ಟ್ರಗಳಿಂದ ಬಂದಿದ್ದ ಇವರು ದೆಹಲಿಯಲ್ಲಿ ನಡೆದ ಜಮಾತ್ನ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕೊರೊನಾ ಸೋಂಕು ಪ್ರಸರಣ ನಿಯಂತ್ರಿಸುವ ಸಂಬಂಧ ಅಂತರರಾಜ್ಯ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ, ಇವರು ರಾಂಚಿಗೆ ತೆರಳಿ, ಅಲ್ಲಿನ ಮಸೀದಿಯಲ್ಲಿ ಅಡಗಿದ್ದರು ಎಂದು ಆರೋಪಿಸಲಾಗಿತ್ತು. ಮಾರ್ಚ್ 30ರಂದು ಬಂಧಿಸಲಾಗಿದ್ದ ಇವರಿಗೆ ಜುಲೈ 15ರಂದು ಕೋರ್ಟ್ ಜಾಮೀನು ನೀಡಿತ್ತು.